IPL 2022 : ಚೆನ್ನೈ ಸೂಪರ್ ಕಿಂಗ್ಸ್ ನ ಮುಂದಿನ ನಾಯಕ ಯಾರು..?
ಮಹೇಂದ್ರ ಸಿಂಗ್ ಧೋನಿಗೆ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ಕೊನೆಯದ್ದು ಅನ್ನೋದು ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿ.
ಹಾಗಾದ್ರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿನ ನಾಯಕ ಯಾರು..? ಅನ್ನೋ ಪ್ರಶ್ನೆ ಈಗ ಮುನ್ನಲೆಗೆ ಬಂದಿದೆ.
ಧೋನಿ ಉತ್ತರಾಧಿಕಾರಿಯಾಗಿ ಬಂದ ರವೀಂದ್ರ ಜಡೇಜಾ ನಾಯಕನಾಗಿ ಕಮಾಲ್ ಮಾಡಲಿಲ್ಲ. ಈ ಸೀಸನ್ ನಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಿ ವೈಫಲ್ಯ ಅನುಭವಿಸಿದರು.
ಹೀಗಾಗಿ ಸ್ವತಃ ಜಡೇಜಾ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಹೀಗಾಗಿ ಜಡೇಜಾ ಅವರನ್ನ ಮುಂದಿನ ಸೀಸನ್ ನಿಂದ ಪಕ್ಕಕ್ಕೆ ಇಡಲು ಚೆನ್ನೈ ಸೂಪರ್ ಕಿಂಗ್ಸ್ ಪ್ಲಾನ್ ಮಾಡಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಮತ್ತೆ ಚೆನ್ನೈ ನಾಯಕತ್ವದ ಬಗ್ಗೆ ಚರ್ಚೆ ಶುರುವಾಗಿದೆ. ಈ ವಿಚಾರದ ಬಗ್ಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯೆ ನೀಡಿದ್ದಾರೆ. ರುತುರಾಜ್ ಗಾಯಕ್ವಾಡ್ ಅವರನ್ನ ಧೋನಿ ಉತ್ತರಾಧಿಕಾರಿ ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.
ರುತುರಾಜ್ ಗಾಯಕ್ವಾಡ್ ನಲ್ಲಿ ಧೋನಿಯ ಗುಣಗಳಿವೆ. ಧೋನಿಯಂತೆ ರುತುರಾಜ್ ತುಂಬಾ ಕೂಲ್ ಆಗಿ ಕಾಣುತ್ತಾರೆ.
ರುತುರಾಜ್ ಗೆ ಮಹಾರಾಷ್ಟ್ರ ಕ್ರಿಕೆಟ್ ತಂಡದ ನಾಯಕನಾಗಿ ಸೇವೆ ಸಲ್ಲಿಸಿದ ಅನುಭವವೂ ಇರುವುದರಿಂದ, ಸಿಎಸ್ಕೆಯ ಜವಾಬ್ದಾರಿಯನ್ನು ಅವರಿಗೆ ಹಸ್ತಾಂತರಿಸುವುದು ಉತ್ತಮ ಎಂದು ಸೆಹ್ವಾಗ್ ಭಾವಿಸಿದ್ದಾರೆ. ipl-2022-sehwag-picks-ruturaj-gaikwad-ms-dhoni-long-term-successor