ADVERTISEMENT
Friday, April 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Bangalore | ಹೆಜ್ಜೆ ಗೆಜ್ಜೆಯ ನಾದಕ್ಕೆ ಸಂಗೀತದ ಇಂಪು, ತಾಳ ಮೇಳಗಳ ಸಮಾನ ಮೇಳೈಸುವಿಕೆ…

Mahesh M Dhandu by Mahesh M Dhandu
May 31, 2022
in Newsbeat, Saaksha Special, ಎಸ್ ಸ್ಪೆಷಲ್
Arangetram program in bangalore saaksha tv

Arangetram program in bangalore saaksha tv

Share on FacebookShare on TwitterShare on WhatsappShare on Telegram

ಹೆಜ್ಜೆ ಗೆಜ್ಜೆಯ ನಾದಕ್ಕೆ ಸಂಗೀತದ ಇಂಪು, ತಾಳ ಮೇಳಗಳ ಸಮಾನ ಮೇಳೈಸುವಿಕೆ… ರಂಗಪ್ರವೇಶಕ್ಕೆ ಸಿದ್ಧವಾದ ರಂಗದ ತುಂಬೆಲ್ಲಾ ಭಕ್ತಿಯ ಪರವಶತೆಯ ತಂಪು… ಇಂಥದ್ದೊಂದು ಸಂದರ್ಭ ನಿರ್ಮಾಣವಾಗಿದ್ದು ಕೋರಮಂಗಲದ ಪ್ರಭಾತ್ ಕಲಾದ್ವಾರಕದಲ್ಲಿ ನಡೆದ ವಿದುಷಿ ರಕ್ಷಾ ರಾಮ್ ಕುಡ್ವ ಅವರ ಶಿಷ್ಯರಾದ ಕುಮಾರಿ ಶೃತಿ ವೇಟ್ರಿವೇಲ್, ಕುಮಾರಿ ಆಯುಷಿ ಕೊಂಡಾಪುರ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ…

ಪ್ರೆಸಿಡೆನ್ಸಿ ಸ್ಕೂಲ್ ನಲ್ಲಿ ೯ನೇ ತರಗತಿಯಲ್ಲಿ ಓದುತ್ತಿರುವ ಶೃತಿ, ೫ನೇ ವಯಸ್ಸಿನಲ್ಲಿಯೇ ಭರತನಾಟ್ಯಕ್ಕೆ ಮನಸೋತವಳು. ಇದನ್ನು ಕಂಡ ವೇಟ್ರಿವೇಲ್ ದಂಪತಿ, ಶೃತಿಯನ್ನು ವಿದುಷಿ ಪ್ರಿಯದರ್ಶಿನಿ, ವಿದುಷಿ ಶಿಬಾನಿಯವರ ಬಳಿ ನೃತ್ಯಾಭ್ಯಾಸಕ್ಕೆ ಕಳಿಸಿದರು. ನಂತರದಲ್ಲಿ ವಿದುಷಿ ರಕ್ಷಾರಾಮ್ ಅವರ ಮಾರ್ಗದರ್ಶನದಲ್ಲಿ ಮುಂದುವರೆಯುತ್ತಿದ್ದಾರೆ. ಭರತನಾಟ್ಯವನ್ನು ತನ್ನ ದೇಹ, ಮನಸ್ಸು, ಆತ್ಮದ ಮಧ್ಯೆ ಸಂಪರ್ಕ ಸಾಧಿಸುವ ಸಾಧನವಾಗಿಸಿಕೊಂಡಿರುವ ಶೃತಿಗೆ ನೃತ್ಯವೇ ಜೀವಾಳ.

Related posts

ರಾಮ ಉತ್ತರ ಭಾರತದವನು, ರಾವಣ ದಕ್ಷಿಣದ ಆದಿವಾಸಿ ಎಂದ ಪ್ರಕಾಶ್ ರಾಜ್: ವಿಡಿಯೋ ವೈರಲ್ ಬೆನ್ನಲ್ಲೇ ಟ್ರೋಲ್ ಸುರಿಮಳೆ

ರಾಮ ಉತ್ತರ ಭಾರತದವನು, ರಾವಣ ದಕ್ಷಿಣದ ಆದಿವಾಸಿ ಎಂದ ಪ್ರಕಾಶ್ ರಾಜ್: ವಿಡಿಯೋ ವೈರಲ್ ಬೆನ್ನಲ್ಲೇ ಟ್ರೋಲ್ ಸುರಿಮಳೆ

April 17, 2026
ಕಾಂಗ್ರೆಸ್ ಕೋಟೆಗೆ ಮುಸ್ಲಿಂ ಮುಖಂಡರ ಮುತ್ತಿಗೆ ಒಂದು ಕುಟುಂಬಕ್ಕಾಗಿ ಸಮುದಾಯವನ್ನೇ ಬಲಿಕೊಟ್ಟರೇ ಸಿದ್ದರಾಮಯ್ಯ

ಕಾಂಗ್ರೆಸ್ ಕೋಟೆಗೆ ಮುಸ್ಲಿಂ ಮುಖಂಡರ ಮುತ್ತಿಗೆ ಒಂದು ಕುಟುಂಬಕ್ಕಾಗಿ ಸಮುದಾಯವನ್ನೇ ಬಲಿಕೊಟ್ಟರೇ ಸಿದ್ದರಾಮಯ್ಯ

April 17, 2026

ಇನ್ನು ಆಯುಷಿ ಕೊಂಡಾಪುರ್ ಅವರು ವಿಬ್ಗ್ಯಾರ್ ಹೈ ನಲ್ಲಿ ೧೦ನೇ ತರಗತಿಯಲ್ಲಿ ಓದುತ್ತಿದ್ದಾರೆ… ಕಳೆದ ೮ ವರ್ಷಗಳಿಂದ ಭರತನಾಟ್ಯವನ್ನು ಆಭ್ಯಸಿಸುತ್ತಿರುವ ಆಯುಷಿ ಕೂಡ ಬಾಲ್ಯದಲ್ಲಿಯೇ ನೃತ್ಯಾಸಕ್ತಳು. ತನ್ನ ೭ನೇ ವಯಸ್ಸಿನಲ್ಲಿ ವಿದುಷಿ ಶ್ರೀಜಯಾ ನಾಯರ್ ಅವರ ಬಳಿ ಕಲಿಯಲಾರಂಭಿಸಿದ ಆಯುಷಿ, ಪ್ರಸ್ತುತ ವಿದುಷಿ ರಕ್ಷಾರಾಮ್ ಕುಡ್ವ ಅವರಲ್ಲಿ ಶಿಷ್ಯವೃತ್ತಿ ಮಾಡುತ್ತಿದ್ದಾರೆ. ನೃತ್ಯ ಮಾತ್ರವಲ್ಲದೇ ಚಿತ್ರಕಲೆ, ಸ್ಕೆಚಿಂಗ್, ಸಂಗೀತ, ಸ್ಕೇಟಿಂಗ್ ನಂತಹ ಹಲವು ಕ್ಷೇತ್ರಗಳಲ್ಲಿ ತನ್ನದೇ ಹೆಜ್ಜೆ ಗುರುತುಗಳನ್ನು ಮೂಡಿಸಿ ಹೆತ್ತವರಾದ ಅರವಿಂದ್ ದಂಪತಿಗಳಿಗೆ ಹೆಮ್ಮೆಯ ಗರಿ ಮೂಡಿಸಿದ್ದಾಳೆ ಆಯುಷಿ..

ಗುರು ವಿದುಷಿ ರಕ್ಷಾ ರಾಮ್ ಕುಡ್ವ
ಶಿವಮೊಗ್ಗದ ತೀರ್ಥಹಳ್ಳಿ ಸಮೀಪದ ಪುಟ್ಟ ಹಳ್ಳಿಯ ಹಿನ್ನೆಲೆ ಹೊಂದಿರುವ ವಿದುಷಿ ರಕ್ಷಾ ರಾಮ್ ಕುಡ್ವ, ಭರತನಾಟ್ಯವನ್ನೇ ಉಸಿರಾಗಿಸಿಕೊಂಡು, ತಮ್ಮ ಶಿಷ್ಯವೃಂದಕ್ಕೆ ಖಡಕ್ ಎಚ್ಚರಿಕೆಯೊಂದಿಗೆ ಪಾಠ ಹೇಳುವ ಸಮರ್ಥ ಗುರು. ಭರತನಾಟ್ಯದ ಜ್ಯುನಿಯರ್ ಹಂತದ ಶಿಕ್ಷಣವನ್ನು ಶಿವಮೊಗ್ಗದ ವಿದ್ವಾನ್ ಕೇಶವಕುಮಾರ್ ಪಿಳ್ಳೈ ಅವರ ಬಳಿ ಪಡೆದ ರಕ್ಷಾ ಅವರು, ನಂತರದಲ್ಲಿ ಹಲವು ನೃತ್ಯ ಗುರುಗಳ ಬಳಿ ಅಭ್ಯಸಿಸಿದರು. ತಮ್ಮ ವಿದ್ವತ್ ಶಿಕ್ಷಣವನ್ನು ಚೆನ್ನೈ ಕಲಾಕ್ಷೇತ್ರದ ವಿದ್ವಾನ್ ಹರಿಪದ್ಮನ್ ಮತ್ತು ವಿದುಷಿ ದಿವ್ಯಾ ಹರಿಪದ್ಮನ್ ಅವರ ಬಳಿ ಪಡೆದರು. ಬಳಿಕ ಮೋಹಿನಿಯಟ್ಟಂ ನೃತ್ಯವನ್ನು ವಿದುಷಿ ಉಷಾ ದಾತಾರ್ ಹಾಗೂ ವಿದುಷಿ ಕಲಾಮಂಡಲಮ್ ಶ್ರೀಜಯಾ ನಾಯರ್ ಅವರ ಬಳಿ ಪಡೆದರು. ಎಂಬಿಎ ಪದವೀಧರೆಯಾಗಿರುವ ರಕ್ಷಾ ಅವರು ದೇಶ ವಿದೇಶಗಳ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ಹೆಚ್ಎಸ್ಆರ್ ಲೇ ಔಟ್ನಲ್ಲಿ ನೃತು ರೂಪಕ ಎಂಬ ಕಲಾ ಸಂಸ್ಥೆಯನ್ನು ಸ್ಥಾಪಿಸಿ ಭರತನಾಟ್ಯದ ಶಿಕ್ಷಣ ಬಯಸುವ ಹಲವು ವಿದ್ಯಾರ್ಥಿಗಳಿಗೆ ಸಮರ್ಥ ಗುರು ಎನಿಸಿದ್ದಾರೆ.

Arangetram program  in bangalore saaksha tv
Arangetram program in bangalore saaksha tv

ರಂಗಪ್ರವೇಶ
ಭರತನಾಟ್ಯವನ್ನು ಅಭ್ಯಸಿಸುವ ಎಲ್ಲಾ ವಿದ್ಯಾರ್ಥಿಗಳಿಗೂ ರಂಗಪ್ರವೇಶ ಎಂಬುದೊಂದು ಜೀವನದ ಮಹತ್ವದ ಘಟ್ಟ. ಅಪ್ಪಟ ಕಲಾವಿದರಾಗಿ ಪೂರ್ಣಪ್ರಮಾಣದ ನೃತ್ಯವನ್ನು ಪ್ರಸ್ತುತ ಪಡಿಸಲು ಮೊಟ್ಟಮೊದಲಿಗೆ ದೊರಕುವ ವೇದಿಕೆ ಎಂದರೂ ತಪ್ಪಿಲ್ಲ. ಅಂಥದ್ದೊಂದು ರಂಗಪ್ರವೇಶ ಕಾರ್ಯಕ್ರಮವನ್ನು ಶೃತಿ ಹಾಗೂ ಆಯುಷಿಯರು ಸಮರ್ಥವಾಗಿ ನಿರ್ವಹಿಸಿದ್ದಾರೆ. ವೇದಿಕೆಯಲ್ಲಿ ಅವರಿಗೆ ಪೂರಕವಾಗಿ ಗಾಯನದಲ್ಲಿ ವಿದ್ವಾನ್ ರೋಹಿತ್ ಭಟ್, ನಟುವಾಂಗದಲ್ಲಿ ವಿದುಷಿ ರಕ್ಷಾರಾಮ್ ಕುಡ್ವ, ಮೃದಂಗದಲ್ಲಿ ವಿದ್ವಾನ್ ವಿನೋದ್ ಶ್ಯಾಂ ಆನೂರು, ವೀಣೆಯಲ್ಲಿ ವಿದ್ವಾನ್ ಗೋಪಾಲ್ ವೆಂಕಟರಮಣ, ಕೊಳಲಿನಲ್ಲಿ ವಿದ್ವಾನ್ ವಿವೇಕ್ ವಿ ಕೃಷ್ಣ ಸಹಕರಿಸಿದರು. ಸಮರಸದ ನೃತ್ಯ ಪ್ರದರ್ಶನವನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ವಿದ್ವಾನ್ ಹರಿಪದ್ಮನ್, ವಿದುಷಿ ದಿವ್ಯಾ ಹರಿಪದ್ಮನ್, ವಿದುಷಿ ಬಿಂದು ನಾಯರ್ ಮುಕ್ತ ಕಂಠದಿಂದ ಶ್ಲಾಘಿಸಿದರು.

ಭಾರತದ ಮಕ್ಕಳು ಪಾಶ್ಚಾತ್ಯ ನೃತ್ಯವನ್ನು ಅಭ್ಯಸಿಸುವುದರ ಬದಲು ನಮ್ಮ ನೆಲದ ಕಲೆಯನ್ನು ಗೌರವಿಸಬೇಕು ಮತ್ತು ಅಭ್ಯಸಿಸಬೇಕು ಎಂದ ವಿಧುಷಿ ಬಿಂದು ನಾಯರ್ ಅವರ ಮಾತನ್ನು ಸಮರ್ಥಿಸಿದ ವಿದ್ವಾನ್ ಹರಿಪದ್ಮನ್ ದಂಪತಿಗಳು ಕಲೆ ನಿಂತ ನೀರಾಗಬಾರದು ನಿರಂತರ ಹರಿಯುವ ನದಿಯಾಗಬೇಕು ಎನ್ನುತ್ತಾ ನೃತು ರೂಪಕದಿಂದ ಇನ್ನೂ ಹೆಚ್ಚಿನ ರಂಗಪ್ರವೇಶ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.

Tags: #Saaksha TVbangalorekoramangla
ShareTweetSendShare
Join us on:

Related Posts

ರಾಮ ಉತ್ತರ ಭಾರತದವನು, ರಾವಣ ದಕ್ಷಿಣದ ಆದಿವಾಸಿ ಎಂದ ಪ್ರಕಾಶ್ ರಾಜ್: ವಿಡಿಯೋ ವೈರಲ್ ಬೆನ್ನಲ್ಲೇ ಟ್ರೋಲ್ ಸುರಿಮಳೆ

ರಾಮ ಉತ್ತರ ಭಾರತದವನು, ರಾವಣ ದಕ್ಷಿಣದ ಆದಿವಾಸಿ ಎಂದ ಪ್ರಕಾಶ್ ರಾಜ್: ವಿಡಿಯೋ ವೈರಲ್ ಬೆನ್ನಲ್ಲೇ ಟ್ರೋಲ್ ಸುರಿಮಳೆ

by Shwetha
April 17, 2026
0

ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಕೇರಳ ಸಾಹಿತ್ಯ ಉತ್ಸವದ ವೇದಿಕೆಯಲ್ಲಿ ಅವರು ರಾಮಾಯಣದ ಕುರಿತು ನೀಡಿದ ಹೇಳಿಕೆಯ ವಿಡಿಯೋ ಈಗ...

ಕಾಂಗ್ರೆಸ್ ಕೋಟೆಗೆ ಮುಸ್ಲಿಂ ಮುಖಂಡರ ಮುತ್ತಿಗೆ ಒಂದು ಕುಟುಂಬಕ್ಕಾಗಿ ಸಮುದಾಯವನ್ನೇ ಬಲಿಕೊಟ್ಟರೇ ಸಿದ್ದರಾಮಯ್ಯ

ಕಾಂಗ್ರೆಸ್ ಕೋಟೆಗೆ ಮುಸ್ಲಿಂ ಮುಖಂಡರ ಮುತ್ತಿಗೆ ಒಂದು ಕುಟುಂಬಕ್ಕಾಗಿ ಸಮುದಾಯವನ್ನೇ ಬಲಿಕೊಟ್ಟರೇ ಸಿದ್ದರಾಮಯ್ಯ

by Shwetha
April 17, 2026
0

ರಾಜ್ಯ ರಾಜಕಾರಣದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದೆ. ದಶಕಗಳಿಂದ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಂತಿದ್ದ ಮುಸ್ಲಿಂ ಸಮುದಾಯ ಈಗ ಅದೇ ಪಕ್ಷದ ವಿರುದ್ಧ ಯುದ್ಧ ಸಾರಿದೆ. ದಾವಣಗೆರೆ ಉಪಚುನಾವಣೆ...

ಅಕ್ಷಯ ತೃತೀಯದಂದು ಚಿನ್ನ ಕೊಳ್ಳುವವರಿಗೆ ಸಿಹಿ ಸುದ್ದಿ ಈ ವರ್ಷದ ಅತ್ಯಂತ ಶುಭ ದಿನ ಯಾವುದು ಗೊತ್ತೇ.?

ಅಕ್ಷಯ ತೃತೀಯದಂದು ಚಿನ್ನ ಕೊಳ್ಳುವವರಿಗೆ ಸಿಹಿ ಸುದ್ದಿ ಈ ವರ್ಷದ ಅತ್ಯಂತ ಶುಭ ದಿನ ಯಾವುದು ಗೊತ್ತೇ.?

by Shwetha
April 17, 2026
0

ಸನಾತನ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಹಿಂದೂ ಸಂಪ್ರದಾಯದ ಪ್ರಕಾರ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಅಕ್ಷಯ ತೃತೀಯವೂ ಒಂದು. ಈ ದಿನವನ್ನು ಕೇವಲ ಹಬ್ಬವಾಗಿ...

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (17-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 17, 2026
0

ದಿನ ಭವಿಷ್ಯ: 17-04-2026 ಮೇಷ ರಾಶಿ ಇಂದು ನಿಮಗೆ ಕೆಲಸದ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿವೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಮೇಲಧಿಕಾರಿಗಳೊಂದಿಗೆ ಸೌಮ್ಯವಾಗಿ...

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

by Shwetha
April 16, 2026
0

ರಾಜ್ಯ ರಾಜಕಾರಣದಲ್ಲಿ ಈಗ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ನಂತರದ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಠಿಣ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram