Jaya Mrityunjaya Swamiji | ಚುನಾವಣೆಯಲ್ಲಿ ನಿಮ್ಮ ವಿರುದ್ಧ ಪುಟಿದೇಳುವುದು ಖಚಿತ
ಬೆಂಗಳೂರು : ಮೀಸಲಾತಿ ಕೊಟ್ಟರೆ ನಮ್ಮ ಸಹಕಾರ, ಇಲ್ಲವಾದಲ್ಲಿ ಅಸಹಕಾರ. ಚುನಾವಣೆಯಲ್ಲಿ ನಿಮ್ಮ ವಿರುದ್ಧ ಪುಟಿದೇಳುವುದು ಖಚಿತ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
2 ಎ ಮೀಸಲಾತಿಗಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗಾಗಿ 27 ಗಳಿಂದ ಹೋರಾಟ ನಡೆಯುತ್ತಿದೆ. ಇದು ಕೇವಲ ಮನವಿಗಾಗಿ ಮಾತ್ರ ಮೀಸಲಾಗಿತ್ತು. ಆದರೆ ಕಳೆದ ಒಂದೂವರೆ ವರ್ಷದಿಂದ ಉಗ್ರವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಸಿಎಮ್ ತವರು ಜಿಲ್ಲೆಯಲ್ಲಿಯೇ ಮತ್ತೊಂದು ಹಂತದ ಹೋರಾಟ ಇಂದು ಮಾಡಲಾಗುತ್ತಿದೆ. ನಮ್ಮನ್ನ ಪೊಲೀಸರಿಂದ ಹೆಸರಿಸುವ ಹುನ್ನಾರ ನಡೆಯುತ್ತಿದೆ. ನಾವು ಯಾವುದಕ್ಕೂ ಬಗ್ಗುವ ಮಾತಿಲ್ಲ ಎಂದು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ನಮ್ಮ ಸಮಾಜದ ಮೂವರೂ ಶಾಸಕರು ಇದ್ದಾರೆ. ಸರ್ಕಾರ ಇದನ್ನ ಅರ್ಥ ಮಾಡಿಕೊಳ್ಳಲಿ. ನೂರಾರು ವರ್ಷದಿಂದ ನಮ್ಮ ಸಮಾಜವನ್ನ ತುಳಿಯುವ ಕೆಲಸ ಆಗುತ್ತಿದೆ. ಸಮಾಜದ ಬಗ್ಗೆ ಧ್ವನಿ ಎತ್ತಿದ ನಾಯಕರನ್ನ ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ರಾಜಕೀಯದಿಂದ ಮುಗಿಸುವ ಹುನ್ನಾರ ಮಾಡುತ್ತಿದ್ದಾರೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಅನೇಕ ನಾಯಕರನ್ನ ತುಳಿದಿದ್ದಾರೆ. ನಮ್ಮ ಸಮಾಜವನ್ನ ಒಡೆದು ಆಳುವ ಕೆಲಸ ಮಾಡಿದ್ದಾರೆ. ನಮ್ಮ ಸಮಾಜ ಜಗತ್ತಿಗೆ ಅನ್ನ ಕೊಟ್ಟ ಸಮಾಜ ನಮ್ಮದು. ಪಂಚಮಸಾಲಿ ಸಮುದಾಯದ ಸಂಘಟನೆ ಮಾಡಿದ್ರೆ ರಾಜಕೀಯದಲ್ಲಿ ಬೆಳೆಯಲು ಬಿಟ್ಟಿಲ್ಲ. ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.
ಮೀಸಲಾತಿ ಕೊಡದೆ ಇದ್ದರೆ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ನಮ್ಮ ಸಮಾಜ ನಿಮ್ಮ ವಿರುದ್ಧ ಪುಟೆದೆಳುವದು ಖಚಿತ. ಶಿವಮೊಗ್ಗಕ್ಕೆ ಹೋಗಿ ಅಲ್ಲಿ ಹೋರಾಟ ಮಾಡುತ್ತೆವೆ. ನಂತ್ರ ಸಿಎಮ್ ಬಸವರಾಜ ಬೊಮ್ಮಾಯಿ ಮನೆ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ. ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡುತ್ತೆನೆ, ಇದನ್ನ ದಡ ಮುಟ್ಟಿಸಲೇಬೇಕು ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.