ಸವಿಂಧಾನತ್ಮಕವಾಗಿ ವಿದ್ಯಾರ್ಥಿ ಜೀವನ ನಡೆಸಿ ಸಮಾಜಮುಖಿಗಳಾಗಬೇಕು : ನ್ಯಾ ಬಿ. ನಾರಾಯಣಪ್ಪ ಕರೆ
ಬೆಂಗಳೂರು : ವಿದ್ಯಾರ್ಥಿ ಜೀವನ ಅತೀ ಮೌಲ್ಯಯುತವಾಗಿದ್ದು, ಅದನ್ನು ವ್ಯರ್ಥ ಮಾಡಬಾರದು, ಸವಿಂಧಾನತ್ಮಕವಾಗಿ ವಿದ್ಯಾರ್ಥಿ ಜೀವನವನ್ನು ನಡೆಸುವ ಮೂಲಕ ಸಮಾಜಮುಖಿ ವ್ಯಕ್ತಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಮೈಸೂರು ಜಿಲ್ಲೆ ಗ್ರಾಹಕರ ವೇಧಿಕೆಯ ನ್ಯಾಯಾಧೀಶರಾದ ಶ್ರೀ ಬಿ. ನಾರಾಯಣಪ್ಪನವರು ಕರೆ ನೀಡಿದರು.
ಇಂದು ನಗರದ ಬ್ಯಾಟರಾಯನಪುರದ ಶ್ರೀ ಶಾರದಾ ವಿದ್ಯಾಪೀಠದ ಶ್ರೀ ಶಾರದಾ ಪ್ರಥಮ ದರ್ಜೆಕಾಲೇಜಿನಲ್ಲಿ ಹಮ್ಮಿಕೊಂಡ 2021-22 ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಕನಸನ್ನು ಪಾಲಕರು ಕಾಣುತ್ತಾರೆ. ಅದರಂತೆ ಪಾಠ ಕಲಿಯುವಾಗ ಮಕ್ಕಳು ಅಷ್ಟೇ ಜವಾಬ್ದಾರಿಯಿಂದ ಕಲಿಯುವ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಪಾಲಕರ ಕನಸುಗಳನ್ನು ನನಸು ಮಾಡುವ ಮೂಲಕ ದೇಶದ ಅಭ್ಯೂದಯಕ್ಕೆ ಕಾರಣಿಕರ್ತರಾಗಬೇಕು, ಅದಕ್ಕೆ ನಮ್ಮ ದೇಶದ ಅನೇಕ ಮಹನೀಯರು, ಸಾಧಕರು ನಮಗೆ ಉದಾರಣೆಯಾಗಿದ್ದಾರೆ. ಅಂಥವರ ಜೀವನ ನಮಗೆ ಪ್ರೇರಣೆಯಾಗಬೇಕು ಹಾಗೂ ಅಂಥವರು ನಮ್ಮ ಆದರ್ಶವಾಗಬೇಕು ಎಂದು *ಬಿ. ನಾರಾಯಣಪ್ಪನವರು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಬಹುಮಾನ ವಿತರಣೆ ನಡೆಸಿದ ಕರ್ನಾಟಕ ಸರಕಾರದ ಮಾರುಕಟ್ಟೆ ಮತ್ತು ಜಾಹೀರಾತು ಸಲಹಾ ನಿಗಮದ ಅಧಿಕ ನಿರ್ದೇಶಕರಾದ ಶ್ರೀ ಸಿದ್ಧಲಿಂಗಪ್ಪ ಬಿ. ಪೂಜಾರಿ ಮಾತನಾಡಿ ಇಂದಿನ ಸ್ಪರ್ಧಾತ್ಮದ ದಿನಗಳಲ್ಲಿ ಪ್ರತಿಯೋಬ್ಬರಿಗೂ ಉನ್ನತ ಗುರಿಯೇ ಇರಬೇಕು. ಅದು ನಮಗೆ ಸಾಧನೆಯ ಅಡಿಪಾಯವಾಗಬೇಕು. ಇಂದು ಅವಕಾಶಗಳ ವಿಪುಲವಾಗಿ ಇವೆ. ಅವುಗಳನ್ನು ಬಳಸಿಕೊಳ್ಳುವ ರೀತಿಯೂ ತೀರಾ ಸರಳವಾಗಿದೆ. ಅವಕಾಶಕ್ಕಾಗಿ ಕಾದುಕುಳಿತುಕೊಳ್ಳುವ ಬದಲು ಅದರ ಹುಡುಕಾಟವನ್ನು ವಿದ್ಯಾರ್ಥಿ ಜೀವನದಿಂದಲೇ ಮುಂದುವರೆಸಿಕೊಂಡು ಬರಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶ್ರೀ ಶಾರದಾ ವಿದ್ಯಾಪೀಠದ ಗೌರವ ಕಾರ್ಯದರ್ಶಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ. ಎಮ್. ಪಟೇಲ್ಪಾಂಡು ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲಿ ವಿದ್ಯಾರ್ಥಿ ಜೀವನ ಮರೆಯಲಾರದ ಕ್ಷಣಗಳನ್ನು ಸೃಷ್ಟಿಮಾಡುತ್ತವೆ. ಅವು ಕೊನೆಯ ವರೆಗೂ ಹಚ್ಚಹಸಿರಾಗಿ ಉಳಿದು ಬಿಡುತ್ತವೆ. ಅದಕ್ಕಾಗಿ ಬಾಹ್ಯ ಪ್ರಪಂಚದಲ್ಲಿ ಇರುವ ಹತ್ತಾರು ವ್ಯಾಮೋಹಕ್ಕೆ ಮಕ್ಕಳು ಮರುಳಾಗದೆ ಶ್ರದ್ಧೆ ಮತ್ತು ಭಕ್ತಿಯಿಂದ ಅಧ್ಯಾಪಕರು ಹೇಳಿದಂತೆ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಪಾಠದೊಂದಿಗೆ ಆಟ, ಆಟದೊಂದಿಗೆ ಜೀವನದ ಮಟ್ಟ ಕಟ್ಟಿಕೊಳ್ಳಬೇಕು ಎಂದು ಹೇಳಿದರು.








