“ಮೋದಿ ಸಾಹೇಬ್ರೇ ತಾಕತ್ತ್ ಇದ್ರೆ ನನ್ನ ಜೈಲಿಗೆ ಹಾಕ್ಸು”
ಚಿತ್ರದುರ್ಗ : ಕೊರೊನಾ ವಿಚಾರವಾಗಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ವ್ಯಕ್ತಿಯೋರ್ವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉಳ್ಳಾರ್ತಿ ವ್ಯಕ್ತಿ ವಿಡಿಯೋದಲ್ಲಿ, ಮೋದಿ ಸಾಹೇಬ್ರೆ ಡಾಕ್ಟರ್ ಗಳಿಗೆ ಫಿಕ್ಸ್ ಮಾಡಿದ್ದೀಯಾ..! ಬರೀ ಪೇಷೆಂಟ್ ಗಳು ಸಾಯುತ್ತಾರೆ, ಡಾಕ್ಟರ್ ಯಾಕೆ ಸಾಯುವುದಿಲ್ಲ.? ಡಾಕ್ಟರ್ ಪೇಷೆಂಟ್ ನೋಡುವಾಗ ಕೊರೋನಾ ಟಚ್ ಆಗೋದಿಲ್ವಾ? ನಮ್ಮ ಹಳ್ಳಿ ಜನರ ಕೈಗೆ ನೀವು ಸಿಕ್ಕರೆ ಬುಕ್ಕಡಿ ಹಾಕ್ತವೆ ಎಂದು ಅವಾಚ್ಯ ಶಬ್ದಗಳಿಂದ ನಿಂಧನೆ ಮಾಡಿದ್ದಾರೆ.
ನಿನಗೆ ಮೀಟರ್ ಇದ್ರೆ ನನ್ನ ಅರೆಸ್ಟ್ ಮಾಡಿಸು. ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ನನ್ನದು. ಕೊರೊನಾ ಯಾವ್ ತರ ಕಂಟ್ರೂಲ್ ಮಾಡಬೇಕು ಎಂದು ಗೊತ್ತಿದ್ಯಾ ನಿನಗೆ. ನಮ್ಮ ಊರಲ್ಲಿ ಒಂದೇ ಮನೆಯಲ್ಲಿ ಯಾವ ಕಾಲಕ್ಕೂ ಎರಡು ಹೆಣ ಬಿದ್ದಿರಲಿಲ್ಲ. ತಾಕತ್ ಇದ್ರೆ ನನ್ನ ಜೈಲಿಗೆ ಹಾಕ್ಸು, ನೀನು ಪ್ರಧಾನ ಮಂತ್ರಿ ನಾನು ಪ್ರಜಾ ಪ್ರಭುತ್ವದ ಪ್ರಜೆ.
ಡಾಕ್ಟರ್ ಗಳಿಗೆ ಲಂಚ ಕೊಟ್ಟು ಪಾಯಿಸನ್ ಇಂಜೆಕ್ಷನ್ ಮಾಡಿ ಸಾಯಿಸ್ತಾ ಇದ್ದಿಯಾ..! ಹತ್ತು ಕೆಜಿ ಅಕ್ಕಿ ಬರೋದು ಆಗಲೇ ಎರಡು ಕೆಜಿ ಮಾಡಿದ್ದೀಯಾ. ನೀನು ಯಾಕೆ ಕಾನೂನು ಮಾಡಿದ್ದೀಯಾ, ನಿನ್ನ ಸರ್ಕಾರ ಇದೇ ಲಾಸ್ಟ್. ನಿನ್ನ ತಪ್ಪು ಒಪ್ಪಿಕೋ ಹಳ್ಳಿ ಜನರ ಕೈಗೆ ಸಿಕ್ಕರೆ ಕಿತ್ತು ತಿಂತಾರೆ ಎಂದು ವಾರ್ನಿಂಗ್ ಮಾಡಿದ್ದಾರೆ.
ಇನ್ನು ನಾನೊಬ್ಬ ಕುಡುಕ ನನಗೆ ಗಂಜಿ ಇಲ್ಲ, ಬಡವರಿಗೆ ಗಂಜಿ ಕಳಿಸು. ಲಾಕ್ ಡೌನ್,ಲಾಕ್ ಡೌನ್ ಅಂತ ನಾವು ಬಿಕ್ಷೆ ಬೇಡಿ ತಿನ್ನಬೇಕಾ. ಯಾರ ಮನೆಯಲ್ಲಿ ಹೋಗಿ ಸಾಂಬರ್ ಕೇಳೋಕು ಆಗ್ತಾ ಇಲ್ಲ. ಮುದ್ದೆ ಆದ್ರು, ಗೊಜ್ಜು ಆದ್ರು ಇಸ್ಕೊಂಡ್ ತಿಂತಾ ಇದ್ವಿ ಎಲ್ಲಿದೆ ನಿನ್ನ ಸರ್ಕಾರ. ನಾನೊಬ್ಬ ಇವತ್ತೆ ಸತ್ರು, ಈ ಮಾತು ಪ್ರಪಂಚಕ್ಕೆ ಹರಡಲಿ ಎಂದು ನಾಲಿಗೆ ಹರಿಬಿಟ್ಟಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.