ಭಾರತಕ್ಕೆ ಲಸಿಕೆ ಬೇಕು, ನಿಮ್ಮ ಕಣ್ಣೀರಲ್ಲ : ಮನಮೋಹನ್ ಸಿಂಗ್ Manmohan Singh
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ದೇಶದ ನಾಯಕರಾಗಿ ವಿಫಲರಾಗಿದ್ದಾರೆ. ಭಾರತಕ್ಕೆ ಲಸಿಕೆ ಬೇಕು, ನಿಮ್ಮ ಕಣ್ಣೀರಲ್ಲ.
ದೇಶಕ್ಕಾಗಿ ಏನಾದರೂ ಮಾಡಿ. ಇಲ್ಲದಿದ್ದರೆ ತಕ್ಷಣ ರಾಜೀನಾಮೆ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಿಡಿಕಾರಿದ್ದಾರೆ.
ದೇಶದಲ್ಲಿ ಕೊರೊನಾ ಅಬ್ಬರ ಮುಂದುವರೆದಿದೆ. ಪ್ರತಿ ನಿತ್ಯ ದೇಶದಲ್ಲಿ ಸಾವಿರಾರು ಮಂದಿ ಮೃತಪಡುತ್ತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಮನಮೋಹನ್ ಸಿಂಗ್, ಕೊರೊನಾ ಜಗತ್ತಿನ ಎಲ್ಲಾ ದೇಶಗಳನ್ನು ಭಾಧಿಸಿದೆ.
ಕೆನಡಾದ ಪ್ರಧಾನಿ, ಅಮೆರಿಕ ಅಧ್ಯಕ್ಷ, ಇಟಲಿ ಮತ್ತು ಯುಕೆ ಪ್ರಧಾನಿ ಸೇರಿದಂತೆ ಅನೇಕ ನಾಯಕರು ಕಣ್ಣೀರು ಹಾಕಲಿಲ್ಲ. ಆದ್ರೆ ನಮ್ಮ ಪ್ರಧಾನಿ ಮೋದಿ ಮಾತ್ರ ಕಣ್ಣೀರಿಟ್ಟರು.
ಪಿಎಂ ಮೋದಿ ದೇಶದ ನಾಯಕರಾಗಿ ವಿಫಲರಾಗಿದ್ದಾರೆ. ಭಾರತಕ್ಕೆ ಲಸಿಕೆ ಬೇಕು, ನಿಮ್ಮ ಕಣ್ಣೀರಲ್ಲ. ದೇಶಕ್ಕಾಗಿ ಏನಾದರೂ ಮಾಡಿ. ಇಲ್ಲದಿದ್ದರೆ ತಕ್ಷಣ ರಾಜೀನಾಮೆ ನೀಡಿ ಎಂದು ಒತ್ತಾಯಿಸಿದ್ದಾರೆ.