ವಸಿಷ್ಠ ಸೌಹಾರ್ದ ಕ್ರೆಡಿಟ್ ಬ್ಯಾಂಕ್ಮೇಲೆ ಪೊಲೀಸ್ ದಾಳಿ
ಬೆಂಗಳೂರು : ವಸಿಷ್ಠ ಸೌಹಾರ್ದ ಕ್ರೆಡಿಟ್ ಬ್ಯಾಂಕ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
10 ಸಬ್ ಇನ್ಸ್ಪೆಕ್ಟರ್ ನೇತೃತ್ವದ ತಂಡದಿಂದ ಏಕಕಾಲದಲ್ಲಿ 11 ಕಡೆ ದಾಳಿ ನಡೆಸಲಾಗಿದೆ.
ವಸಿಷ್ಠ ಕೋ ಆಪರೇಟಿವ್ ಬ್ಯಾಕ್ ನ ನಿರ್ದೇಶಕರಾದ ಕೃಷ್ಣ ಭಟ್, ವೆಂಕಟ ನಾರಾಯಣ ಸೇರಿದಂತೆ ಹಲವರ ಮನೆ, ಕಚೇರಿಗಳ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ.
ವಶಿಷ್ಠ ಸೌಹಾರ್ಧ ಕ್ರೆಡಿಟ್ ಬ್ಯಾಂಕ್ ಕಳೆದ 24 ವರ್ಷದಿಂದ ನಡೆಯುತ್ತಿದ್ದು, ಬ್ಯಾಂಕ್ ಒಟ್ಟು ವಹಿವಾಹಿಟು ಮುನ್ನೂರು ಕೋಟಿ ಮೀರಿದೆ.
ಆದ್ರೆ ಹೂಡಿಕೆ ದಾರರಿಗೆ ಹಣ ವಾಪಸ್ ನೀಡದೇ ಸತಾಯಿಸುತ್ತಿದ್ದ ಕಾರಣ, ಈ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರಿನ ಅನ್ವಯ ಪೊಲೀಸರು ಗಿರಿನಗರ -2 ಕಡೆ, ಶಂಕರಪುರಂ-1, ಹನುಮಂತನಗರ 4 ಕಡೆ ಸೇರಿದಂತೆ 11 ಕಡೆ ದಾಳಿ ನಡೆಸಿದ್ದಾರೆ.
ಈ ವೇಳೆ ಬ್ಯಾಂಕ್ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಸದ್ಯ ಬ್ಯಾಂಕ್ ಗೆ ಸಂಬಂಧಪಟ್ಟಂತಹ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಸದ್ಯ ಮಹಜರ್ ಪ್ರೊಸಿಜರ್ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.