ಚಿಕ್ಕಬಳ್ಳಾಪುರ Chikkaballapur | ಸ್ಮಶಾನದಲ್ಲಿ ಭೂತ ಪ್ರೇತ ಪೂಜೆ
ಚಿಕ್ಕಬಳ್ಳಾಪುರ : ಜಿಲ್ಲೆಯ ಮೈಲಪನಹಳ್ಳಿ ಗ್ರಾಮದ ಸ್ಮಶಾನದಲ್ಲಿ ವಾಮಾಚಾರ ನಡೆಸಲಾಗಿದ್ದು, ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಶುಕ್ರವಾರಿ ಅಮಾವಾಸ್ಯೆ ಆದ ಕಾರಣ ಗ್ರಾಮದ ಸ್ಮಶಾನದಲ್ಲಿ ಮಂತ್ರವಾದಿಗಳು ಭೂತ ಪ್ರೇತಗಳ ಬೊಂಬೆ ಮಾಡಿ ಅಮಾವಾಸ್ಯೆ ಮಾಟ ಮಾಡಿದ್ದಾರೆ.
ಇದನ್ನ ಗಮಸಿದ ಗ್ರಾಮಸ್ಥರು ವಾಮಾಚಾರದಲ್ಲಿ ಭಾಗಿಯಾಗಿದ್ದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಂದಹಾಗೆ ಗ್ರಾಮದಲ್ಲಿ ಇತ್ತೀಚೆಗೆ ಹತ್ತಕ್ಕೂ ಹೆಚ್ಚು ಜನ ನಿಗೂಢವಾಗಿ ಮೃತಪಟ್ಟಿದ್ದರು.
ಇದಕ್ಕೆ ವಾಮಾಚಾರ ಕಾರಣ ಎಂದು ಮೈಲಪನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ ಕೃತ್ಯದಲ್ಲಿ ತೊಡಗಿದ್ದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.