ತೆಲುಗು ನಟ ಕತ್ತಿ ಮಹೇಶ್ ವಿಧಿವಶ
ಬೆಂಗಳೂರು : ಕೆಲ ದಿನಗಳಿಂದೆ ಅಪಘಾತಕ್ಕೀಡಾಗಿದ್ದ ಚಲನಚಿತ್ರ ವಿಮರ್ಶಕ ಮತ್ತು ನಟ ಕತ್ತಿ ಮಹೇಶ್, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಜೂನ್ 25 ರಂದು ಚೆನ್ನೈ ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಕತ್ತಿ ಮಹೇಶ್ ಕಾರು ಅಪಘಾತವಾಗಿತ್ತು.
ಘಟನೆಯಲ್ಲಿ ಅವರು ಪ್ರಜ್ಞಾಹೀನಾ ಸ್ಥಿತಿಗೆ ತಲುಪಿದ್ದರು. ಬಳಿಕ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇನ್ನು ಕತ್ತಿ ಮಹೇಶ್ ಜನಪ್ರಿಯ ಶೋ ಬಿಗ್ ಬಾಸ್ ತೆಲುಗು ಸೀಸನ್ ಒಂದರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.
ಜೊತೆಗೆ ಹೃದಯ ಕಾಲೆಯಂ ಮತ್ತು ಕೊಬ್ಬರಿ ಮಟ್ಟಾ ದಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಸಾಕಷ್ಟು ಕಾಂಟ್ರವರ್ಸಿಗಳಿಗೆ ಕತ್ತಿ ಮಹೇಶ್ ನಾಂದಿಯಾಡಿದ್ದರು ಕೂಡ. ಮುಖ್ಯವಾಗಿ ಪವನ್ ಕಲ್ಯಾಣ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಅವರ ಅಭಿಮಾನಿಗಳ ಕೆಂಗಣ್ಣಿಗೆ ಕತ್ತಿ ಮಹೇಶ್ ಗುರಿಯಾಗಿದ್ದರು.