ಮಂಚಕ್ಕೆ ಕರೆದ ಅಧಿಕಾರಿಗೆ ಹಿಗ್ಗಾಮುಗ್ಗಾ ಥಳಿತ mysore
ಮೈಸೂರು : ಆಶ್ರಯ ಮನೆ ಕೇಳಿದ್ದಕ್ಕೆ ಮಂಚಕ್ಕೆ ಕರೆದ ಕಾರ್ಪೊರೇಷನ್ ಅಧಿಕಾರಿಗೆ ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ಶಾರದಾದೇವಿ ನಗರ ಪಾಲಿಕೆ ವಲಯ ಕಚೇರಿಯ ಅಧಿಕಾರಿ ವಿಷಕಂಟೇಗೌಡ ಮಹಿಳೆ ಜೊತೆ ಅಶ್ಲೀಲವಾಗಿ ನಡೆದುಕೊಂಡಿದ್ದರಂತೆ.
ವಾಸ ಸ್ಥಳ ದೃಢೀಕರಣ ಪತ್ರಕ್ಕೆ ಅರ್ಜಿ ಹಾಕಿದ ಮಹಿಳೆಗೆ ಕಾಲ್ ಮಾಡಿದ ಅಧಿಕಾರಿ ಮಂಚಕ್ಕೆ ಕರೆದಿದ್ದನೆಂದು ಆರೋಪಿಸಿಲಾಗಿದ್ದು, ಇದಕ್ಕೆ ಸಂಬಂಧಿಸಿದ ಆಡಿಯೋ ವೈರಲ್ ಆಗಿದೆ.
ಇನ್ನು ಮಹಿಳೆಯರ ಗುಂಪು ಪಾಲಿಕೆ ಕಚೇರಿಯಲ್ಲಿಯೇ ವಿಷಕಂಟೇಗೌಡ ಅವರಿಗೆ ಚಳಿ ಬಿಡಿಸಿದ್ದರೂ, ಪಾಲಿಕೆ ಆಯುಕ್ತರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪ ಕೇಳಿಬಂದಿದೆ.