ಮೇಲಾಧಿಕಾರಿಗಳ ಕಿರುಕುಳ. ಬಡ್ಡಿ ದಂದೆಕೋರರ ಬ್ಲಾಕ್ಮೇಲ್ . ಮನನೊಂದು ಕೆವಿಜಿ ಬ್ಯಾಂಕ್ ಗ್ರೇಡ್ ೨ ಮ್ಯಾನೇಜರ್ ನೇಣು ಹಾಕಿಕೊಂಡು ಆತ್ಮಹತ್ಯೆ. ಬಾಗಲಕೋಟೆಯ ನವನಗರದ ಕೆವಿಜಿ ಬ್ಯಾಂಕ್ ಗ್ರೇಡ್-೨ ಮ್ಯಾನೇಜರ್. ಬಾಗಲಕೋಟೆಯ ನವನಗರದ ಸೆಕ್ಟರ್ ನಂ೨೬ ರಲ್ಲಿ ಘಟನೆ. ರಾಘವೇಂದ್ರ ಕುಲಕರ್ಣಿ (೫೮)ಆತ್ಮಹತ್ಯೆ ಮಾಡಿಕೊಂಡ ಮ್ಯಾನೇಜರ್. ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ೬ ಜನರ ವಿರುದ್ದ ಎಫ್ ಐ ಆರ್. ಕೆವಿಜಿ ಬ್ಯಾಂಕ್ ವಿಜಲನ್ಸ್ ಆಫಿಸರ್ ಧಾರವಾಡ ವಿನಯ್ ಐರಸಂಗ ಅವರಿಂದ ಮಾನಸಿಕ ಕಿರುಕುಳ ಆರೋಪ. ಡೆತ್ ನೋಟಲ್ಲಿ ವಿಜಲನ್ಸ್ ಆಫಿಸರ್ ಕಿರುಕುಳ ಪ್ರಸ್ತಾಪಿಸಿದ ಮ್ಯಾನೇಜರ್. ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ. ಡೆತ್ ನೋಟಲ್ಲಿ ರಾಣೆಬೆನ್ನೂರು,ಹಿರೆಕೆರೂರು ಮೂಲದ ಬಡ್ಡಿದಂದೆಕೋರರ ಹೆಸರು ಪ್ರಸ್ತಾಪ. ರಾಣೆಬೆನ್ನೂರಿನ ರೈತಸಂಘದ ಮುಖಂಡ ಸಂಗನಗೌಡ ಮಲ್ಲನಗೌಡ್ರ, ಮಹೇಶ್ ಬಿಸಲಳ್ಳಿ,ವೀರೇಶ್ ಹೇಡಿಗುಂದಿಮಠ ನಾಗರಾಜ ಗುರುಲಿಂಗಪ್ಪಗೌಡ, ಹಿರೆಕೆರೂರು ಮೂಲದ ಹನುಮಗೌಡ ಹುಡೇದ ಹೆಸರು ಪ್ರಸ್ತಾಪ. ಇವರಿಂದ ೩% ರಂತೆ ಸಾಲ ಪಡೆದಿದ್ದೆ. ಸಾಲ ತೀರಿಸಿದರೂ ಖಾಲಿ ಚೆಕ್ , ಬಾಂಡ್ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಡೆತ್ ನೋಟಲ್ಲಿ ಉಲ್ಲೇಖ. ರಾಣೆಬೆನ್ನೂರು,ಹಿರೆಕೆರೂರು. ಮ್ಯಾನೇಜರ್ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಿವಾಸಿ..









