ADVERTISEMENT
Wednesday, July 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

IPL 2021 | ಶಾರ್ಜಾದಲ್ಲಿ ಮುಂದುವರೆದ ಧೋನಿ ಮ್ಯಾಜಿಕ್

Mahesh M Dhandu by Mahesh M Dhandu
October 1, 2021
in IPL 2021, Newsbeat, ಐಪಿಎಲ್ 2021
m s dhoni csk saakshatv ipl
Share on FacebookShare on TwitterShare on WhatsappShare on Telegram

ಚೆನ್ನೈ ಸೂಪರ್​​ ಕಿಂಗ್ಸ್​​ ಸುಲಭವಾಗಿ ಪಂದ್ಯ ಗೆಲ್ಲಬಹುದು ಅನ್ನುವ ಲೆಕ್ಕಾಚಾರವಿತ್ತು. ಆದರೆ ಸನ್​ರೈಸರ್ಸ್​ ಬೌಲರ್​​ಗಳು ಕಂ ಬ್ಯಾಕ್​​ ಮಾಡಿದ್ರು.

ಆದ್ರೆ ಧೋನಿ ಕೊನೆಯ ಓವರ್​ನಲ್ಲಿ ಸಿಕ್ಸರ್​​ ಸಿಡಿಸಿ ತಂಡವನ್ನು ಪ್ಲೇ-ಆಫ್​​ಗೆ ಏರಿಸಿದ್ರು. ಸನ್​ರೈಸರ್ಸ್​ ಅಧಿಕೃತವಾಗಿ ಟೂರ್ನಿಯಿಂದ ಹೊರಬಿತ್ತು.

Related posts

shukravara-lakshmi-anugraha-dhana-sampattu-poodja-vidhi-tips

Astro- ಶುಕ್ರವಾರದ ದಿನ ನಿಮಗೆ ಧನ ಸಂಪತ್ತಿನ ಲಕ್ಷ್ಮಿ ಯಾಕೆ ಒಲಿಯಲಿಲ್ಲ ಗೊತ್ತಾ…?ಒಲಿಸಿಕೊಳ್ಳಲು ಏನು ಮಾಡಬೇಕು ನೋಡಿ…

July 22, 2026
ಪ್ರಧಾನಿ ಮೋದಿ ನಿವಾಸದ ಎದುರು ರಸ್ತೆ ಮೇಲೆಯೇ ಕುಳಿತ ರಾಹುಲ್ ಗಾಂಧಿ: ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು

ಪ್ರಧಾನಿ ಮೋದಿ ನಿವಾಸದ ಎದುರು ರಸ್ತೆ ಮೇಲೆಯೇ ಕುಳಿತ ರಾಹುಲ್ ಗಾಂಧಿ: ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು

July 22, 2026

ಸ್ಲೋ ಪಿಚ್​​ನಲ್ಲಿ ಬ್ಯಾಟಿಂಗ್​​ ಆರಂಭಿಸಿದ ಜೇಸನ್​ ರಾಯ್​​ ಮತ್ತು ವೃದ್ಧಿಮಾನ್​​ ಸಾಹಾ ಉತ್ತಮ ಆರಂಭ ತಂದುಕೊಡಲಿಲ್ಲ. ರಾಯ್​​ ಹ್ಯಾಜಲ್​​ವುಡ್​​ ಎಸೆತದಲ್ಲಿ ಧೋನಿಗೆ ಕ್ಯಾಚ್​​ ನೀಡಿ ಔಟಾದರು.

ಕೇನ್​​ ವಿಲಿಯಮ್ಸನ್​​,  ಸಾಹಾ ಜೊತೆಗೂಡಿ ಇನ್ನಿಂಗ್ಸ್​​ ಕಟ್ಟುವ ಯೋಚನೆಯಲ್ಲಿದ್ದರು. ಆದರೆ ದಾಳಿಗಿಳಿದ ಬ್ರಾವೋ 11 ರನ್​ಗಳಿಸಿದ್ದ ವಿಲಿಯಮ್ಸನ್​​ ವಿಕೆಟ್​​​ ಪಡೆದು ಹೈದ್ರಾಬಾದ್​​ಗೆ ಶಾಕ್​ ನೀಡಿದರು. ಇಷ್ಟು ಸಾಲದು ಎಂಬಂತೆ ಪ್ರಿಯಂ ಗರ್ಗ್​ ಕೂಡ ಬ್ರಾವೋ ಮ್ಯಾಜಿಕ್​​ಗೆ ವಿಕೆಟ್​​ ಒಪ್ಪಿಸಿದರು.

ಸಾಹಾ ಯುವ ಆಟಗಾರ ಅಭಿಷೇಕ್​​ ಶರ್ಮಾ ಜೊತೆಗೂಡಿ ಇನ್ನಿಂಗ್ಸ್​ ಕಟ್ಟು ಯೋಚನೆ ಮಾಡಿದರು. ಆದರೆ ಜಡೇಜಾ 46 ಎಸೆತಗಳಲ್ಲಿ 4 ರನ್​ಗಳಿಸಿದ್ದ ಸಾಹಾರನ್ನು ಧೋನಿಗೆ ಕ್ಯಾಚ್​​ ಕೊಡುವಂತೆ ಮಾಡಿದ್ರು.

ಸ್ಲಾಗ್​​ ಓವರುಗಳಲ್ಲಿ ಅಭಿಷೇಕ್​​ ಶರ್ಮಾ ಮತ್ತು ಅಬ್ದುಲ್​​ ಸಮದ್​​​ ಬಿರುಸಿನ ಆಟ ಆಡುವ ಪ್ರಯತ್ನ ಮಾಡಿದ್ರೂ ಹ್ಯಾಜಲ್​​ ವುಡ್​​ ಬಿಡಲಿಲ್ಲ. ಶರ್ಮಾ 18 ರನ್​ಗಳಿಸಿ ಡುಪ್ಲೆಸಿಸ್​​ಗೆ ಕ್ಯಾಚ್​​ ನೀಡಿದರೆ, ಸಮದ್​​ ಕೂಡ 18 ರನ್​​ಗಳಿಸಿ ಮೊಯಿನ್​​ ಅಲಿಗೆ ಕ್ಯಾಚ್​ ಕೊಟ್ರು.

Dhoni saaksha tv

ಶಾರ್ದೂಲ್​​ ಠಾಕೂರ್​​ ಜೇಸನ್​​ ಹೋಲ್ಡರ್​​ ವಿಕೆಟ್​​ ಪಡೆದರು.  ನಿಗದಿತ 20 ಓವರುಗಳಲ್ಲಿ ಸನ್​​ರೈಸರ್ಸ್​ ಹೈದ್ರಾಬಾದ್​​ 7 ವಿಕೆಟ್​​ ಕಳೆದುಕೊಂಡು 134ರನ್​​ಗಳಿಸಿತ್ತು.

ಚೇಸ್​ ಮಾಡಲು ಹೊರಟ ಚೆನ್ನೈ ಸೂಪರ್​​ ಕಿಂಗ್ಸ್​​​ ಕೂಡ ನಿಧಾನಗತಿಯ ಪಿಚ್​​ನಲ್ಲಿ ರನ್​ಗಾಗಿ ಪರದಾಡಿದ್ದು ಸುಳ್ಳಲ್ಲ. ಆದರೆ ರುತುರಾಜ್​​ ಗಾಯಕ್ವಾಡ್​ ಮತ್ತು ಫಾಫ್​​ ಡು ಪ್ಲೆಸಿಸ್​​ ತಮ್ಮ ಅದ್ಭುತ ಫಾರ್ಮ್​ ಮುಂದುವರೆಸಿದ್ರು.

ಪವರ್​​ ಪ್ಲೇ ಲಾಭವನ್ನು ಪಡೆದುಕೊಂಡರು. ಮೊದಲ ವಿಕೆಟ್​​ಗೆ ಈ ಜೋಡಿ 75 ರನ್​​ಗಳನ್ನು ಸೇರಿಸಿತ್ತು.  38 ಎಸೆತಗಳಲ್ಲಿ 4 ಫೋರ್​​​​, 2 ಸಿಕ್ಸರ್​​ ನೆರವಿನಿಂದ 45 ರನ್​ಗಳಿಸಿದ್ದ ಗಾಯಕ್ವಾಡ್​​ ಔಟಾದಾಗ ಚೆನ್ನೈ ಗೆಲುವಿನ ಕಡೆ ದೃಷ್ಟಿ ನೆಟ್ಟಾಗಿತ್ತು.

ಡುಪ್ಲಿಸಿಸ್​​ ಜೊತೆ ಆಟಕ್ಕಿಳಿದ ಮೊಯಿನ್​​ ಅಲಿ 17 ಎಸೆತಗಳಲ್ಲಿ 17 ರನ್​ಗಳಿಸಿ ಔಟಾದರು. ಮೊದಲ 15 ಓವರುಗಳಲ್ಲಿ ಸಿಎಸ್​ಕೆ 2 ವಿಕೆಟ್​​ ಕಳೆದುಕೊಂಡು 105 ರನ್​​ಗಳಿಸಿತ್ತು.

16ನೇ ಓವರ್​​ನ ಅರಂಭದಲ್ಲಿ ಸುರೇಶ್​​ ರೈನಾ ಜೇಸನ್​​ ಹೋಲ್ಡರ್​​​ ಎಸೆತದಲ್ಲಿ ಎಲ್​​​ಬಿ ಬಲೆಗೆ ಬಿದ್ರು. ಅದೇ ಓವರ್​ನಲ್ಲಿ 36 ಎಸೆತಗಳಲ್ಲಿ 41 ರನ್​​ಗಳಿಸಿದ್ದ ಫಾಫ್​​ ಕೂಡ ಔಟಾದರು.

ಸುಲಭ ಗೆಲುವಿನ ಲೆಕ್ಕಾಚಾರದಲ್ಲಿದ್ದ ಸಿಎಸ್​​ಕೆಗೆ ಆಘಾತ. ಆದರೆ ರಾಯುಡು, ಧೋನಿ ಮೇಲಿದ್ದ ಒತ್ತಡ ಕಡಿಮೆ ಮಾಡಿದ್ರು. 19ನೇ ಓವರ್​​ನಲ್ಲಿ ಒಂದು ಸಿಕ್ಸರ್​​​​​​​​ ಮತ್ತು ಬೌಂಡರಿ ಸಿಡಿಸಿದ ರಾಯುಡು, ಕೊನೆಯ ಓವರ್​​ನ ಥ್ರಿಲ್ಲರ್​​ಗೆ ಸ್ಕ್ರಿಪ್ಟ್​​ ರೆಡಿ ಮಾಡಿದ್ದರು.

ಕೊನೆಯ ಓವರ್​​ನ 4ನೇ ಎಸೆತವನ್ನು ಸಿಕ್ಸರ್​​ಗೆ ಅಟ್ಟಿದ ಧೋನಿ ಸಿಎಸ್​​ಕೆ 6 ವಿಕೆಟ್​​ಗಳ ಗೆಲುವು ತಂದುಕೊಟ್ಟರು. ಸಿಎಸ್​​ಕೆ ಮೊದಲ ತಂಡವಾಗಿ ಪ್ಲೇ-ಆಫ್​​ ಪ್ರವೇಶ ಪಡೆಯಿತು.

Tags: #Saaksha TVCricketcskipl 2021SHR
ShareTweetSendShare
Join us on:

Related Posts

shukravara-lakshmi-anugraha-dhana-sampattu-poodja-vidhi-tips

Astro- ಶುಕ್ರವಾರದ ದಿನ ನಿಮಗೆ ಧನ ಸಂಪತ್ತಿನ ಲಕ್ಷ್ಮಿ ಯಾಕೆ ಒಲಿಯಲಿಲ್ಲ ಗೊತ್ತಾ…?ಒಲಿಸಿಕೊಳ್ಳಲು ಏನು ಮಾಡಬೇಕು ನೋಡಿ…

by admin
July 22, 2026
0

ಶುಕ್ರವಾರದ ದಿನ ನಿಮಗೆ ಧನ ಸಂಪತ್ತಿನ ಲಕ್ಷ್ಮಿ ಯಾಕೆ ಒಲಿಯಲಿಲ್ಲ ಗೊತ್ತಾ...?ಒಲಿಸಿಕೊಳ್ಳಲು ಏನು ಮಾಡಬೇಕು ನೋಡಿ... ಸನಾತನ ಹಿಂದೂ ಧರ್ಮದ ಸಂಪ್ರಾದಾಯದಲ್ಲಿ ಮಹಾಲಕ್ಷ್ಮಿ ದೇವಿಯನ್ನು ಧನ ಸಂಪತ್ತಿನ...

ಪ್ರಧಾನಿ ಮೋದಿ ನಿವಾಸದ ಎದುರು ರಸ್ತೆ ಮೇಲೆಯೇ ಕುಳಿತ ರಾಹುಲ್ ಗಾಂಧಿ: ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು

ಪ್ರಧಾನಿ ಮೋದಿ ನಿವಾಸದ ಎದುರು ರಸ್ತೆ ಮೇಲೆಯೇ ಕುಳಿತ ರಾಹುಲ್ ಗಾಂಧಿ: ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು

by Shwetha
July 22, 2026
0

ನವದೆಹಲಿ: ದೇಶದ ರಾಜಧಾನಿಯಲ್ಲಿ ನಿನ್ನೆ ರಾಜಕೀಯ ಹಂಗಾಮ ಉತ್ತುಂಗಕ್ಕೇರಿತ್ತು. ನೀಟ್ ಪರೀಕ್ಷಾ ಅಕ್ರಮ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ, ಲೋಕಸಭೆಯ...

ರಾಜ್ಯದಲ್ಲಿ ಕೋವಿಡ್ ಅಪಾಯ ಇಲ್ಲ; ಎಚ್ಚರಿಕೆ ಮಾತ್ರ ಅಗತ್ಯ: ಸಚಿವ ಯು.ಟಿ. ಖಾದರ್

ರಾಜ್ಯದಲ್ಲಿ ಕೋವಿಡ್ ಅಪಾಯ ಇಲ್ಲ; ಎಚ್ಚರಿಕೆ ಮಾತ್ರ ಅಗತ್ಯ: ಸಚಿವ ಯು.ಟಿ. ಖಾದರ್

by Shwetha
July 22, 2026
0

ಆಂಧ್ರ ಪ್ರದೇಶದಲ್ಲಿ ಕೋವಿಡ್-19 ಸೋಂಕಿನಿಂದ ನಾಲ್ವರು ಮೃತಪಟ್ಟಿರುವ ವರದಿಗಳ ಬೆನ್ನಲ್ಲೇ, ಕರ್ನಾಟಕದ ಜನರಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಸಂದೇಶ ನೀಡಿದ್ದಾರೆ. ರಾಜ್ಯದಲ್ಲಿ ಸದ್ಯ ಕೋವಿಡ್...

ಫುಟ್ ಪಾತ್ ಕದನ:ಶಿವಾಜಿನಗರದಲ್ಲಿ ಪುಂಡಾಟ ನಡೆಸಿದವರನ್ನು ಸುಮ್ಮನೆ ಬಿಡಲ್ಲ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದವರು ಬಡವರಲ್ಲ ಸಮಾಜಘಾತುಕರು ಶಿವಾಜಿನಗರ ಪುಂಡರ ವಿರುದ್ಧ ಸಚಿವ ಕೃಷ್ಣ ಭೈರೇಗೌಡ ಕೆಂಡ

ಫುಟ್ ಪಾತ್ ಕದನ:ಶಿವಾಜಿನಗರದಲ್ಲಿ ಪುಂಡಾಟ ನಡೆಸಿದವರನ್ನು ಸುಮ್ಮನೆ ಬಿಡಲ್ಲ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದವರು ಬಡವರಲ್ಲ ಸಮಾಜಘಾತುಕರು ಶಿವಾಜಿನಗರ ಪುಂಡರ ವಿರುದ್ಧ ಸಚಿವ ಕೃಷ್ಣ ಭೈರೇಗೌಡ ಕೆಂಡ

by Shwetha
July 22, 2026
0

ಬೆಂಗಳೂರು: ರಾಜಧಾನಿಯ ಶಿವಾಜಿನಗರದಲ್ಲಿ ಫುಟ್ ಪಾತ್ ಒತ್ತುವರಿ ತೆರವುಗೊಳಿಸಲು ಹೋದ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣ ಈಗ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರಿ ಕಿಚ್ಚು...

ಪ್ರೇಮ್ ಆರಂಭಿಸಿದ್ದ ಪ್ರಶಸ್ತಿ ಅಭಿಯಾನಕ್ಕೆ ನಾದಬ್ರಹ್ಮ ಬ್ರೇಕ್: ಇದು ಮ್ಯಾಚ್ ಆಗದ ಫ್ಲಾಪ್ ಸಾಂಗ್ ಎಂದ ಹಂಸಲೇಖ

ಪ್ರೇಮ್ ಆರಂಭಿಸಿದ್ದ ಪ್ರಶಸ್ತಿ ಅಭಿಯಾನಕ್ಕೆ ನಾದಬ್ರಹ್ಮ ಬ್ರೇಕ್: ಇದು ಮ್ಯಾಚ್ ಆಗದ ಫ್ಲಾಪ್ ಸಾಂಗ್ ಎಂದ ಹಂಸಲೇಖ

by Shwetha
July 22, 2026
0

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂದು ನಟ ನೆನಪಿರಲಿ ಪ್ರೇಮ್ ಆರಂಭಿಸಿದ್ದ ಅಭಿಯಾನಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram