ಜೀರ್ಣಕ್ರಿಯೆ ಪ್ರಕ್ರಿಯೆಗೆ ನೆರವಾಗುವ ಆಹಾರ ಪದಾರ್ಥಗಳು
ಪ್ರತಿಯೊಬ್ಬರೂ ತೆಗೆದುಕೊಳ್ಳುವ ಆಹಾರವನ್ನು ಆಧರಿಸಿ ಅವರ ಚಯಾಪಚಯ ಕ್ರಿಯೆ ಭಿನ್ನವಾಗಿರುತ್ತದೆ.
ಫೈಬರ್ ಆಹಾರಗಳು ಜೀರ್ಣಕ್ರಿಯೆಗೆ ನೆರವಾಗುತ್ತದೆ. ಆದರೆ, ಕೆಲವು ಆಹಾರಗಳು ಅಲರ್ಜಿ, ಅಜೀರ್ಣಗಳಿಗೆ ಕಾರಣವಾಗುತ್ತದೆ. ಜೀರ್ಣಕ್ರಿಯೆಯು ಆಹಾರವನ್ನು ಕರಗಿಸುವಲ್ಲಿ ಮತ್ತು ಪೋಷಕಾಂಶಗಳನ್ನು ವಿತರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಆಹಾರಗಳು ಇಲ್ಲಿದೆ.

ಕಪ್ಪು ಹುರುಳಿ ಅಥವಾ ಕಪ್ಪು ಬೀನ್ಸ್ ಹೇರಳವಾಗಿರುವ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುವ ಕಪ್ಪು ಬೀನ್ಸ್ ಫೈಬರ್ ಭರಿತ ಆಹಾರವಾಗಿದೆ.
ಇದು ಯಾವುದೇ ವಯಸ್ಸಿನವರಿಗೆ ಸೂಕ್ತವಾದ ಆಹಾರವಾಗಿದೆ. ಆರೋಗ್ಯಕರ ಬ್ಯಾಕ್ಟೀರಿಯಾಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಮೂಲಕ ಇದು ಮಲಬದ್ಧತೆಯನ್ನು ತಡೆಯುತ್ತದೆ. ಇದು ಮಧುಮೇಹ ಸಮಸ್ಯೆಗಳಿಗೆ ಪರಿಣಾಮಕಾರಿ. ಬಲವಾದ ಮೂಳೆಗಳನ್ನು ನಿರ್ಮಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿರ್ವಹಿಸುತ್ತದೆ.
ಬೇಳೆ – ಕಪ್ಪು ಬೀನ್ಸ್ನಂತೆ, ಬೇಳೆ ಅಥವಾ ದಾಲ್ ಕೂಡ ಪ್ರೋಟೀನ್ಗಳು ಮತ್ತು ನಾರಿನ ಅತ್ಯುತ್ತಮ ಮೂಲವಾಗಿದೆ. ಇದು ಜೀರ್ಣಕ್ರಿಯೆ ಪ್ರಕ್ರಿಯೆಗೆ ನೆರವಾಗುವ ಪರಿಣಾಮಕಾರಿ ಆಹಾರಗಳಲ್ಲಿ ಒಂದಾಗಿದೆ. ಇದು ನಿಮ್ಮ ತೂಕವನ್ನು ಕಡಿಮೆ ಮಾಡುತ್ತದೆ. ಕರುಳಿನ ಸಿಂಡ್ರೋಮ್ ಮತ್ತು ಮಲಬದ್ಧತೆಯ ಸಮಸ್ಯೆಗಳನ್ನು ದೂರವಿರಿಸಲು ಬೇಳೆಯು ಉತ್ತಮ ಪರಿಹಾರವಾಗಿದೆ.
ಕಾಮ ಕಸ್ತೂರಿ ಅಥವಾ ಚಿಯಾ ಬೀಜಗಳು – ಜೀರ್ಣಕ್ರಿಯೆಯ ಕಾರ್ಯವನ್ನು ಕ್ರಮಬದ್ಧಗೊಳಿಸಲು ಮತ್ತು ತೂಕ ನಷ್ಟಕ್ಕೆ, ಕಾಮ ಕಸ್ತೂರಿ ಅತ್ಯುತ್ತಮ ಆಯ್ಕೆಯಾಗಿದೆ. ಇದು ಜೀರ್ಣಾಂಗವ್ಯೂಹದ ವಿಷವನ್ನು ಸುಲಭವಾಗಿ ತೆಗೆದುಹಾಕುತ್ತದೆ. ಇದು ಬಹಳಷ್ಟು ಆರೋಗ್ಯ ಪ್ರಯೋಜನಗಳಿಗಾಗಿ ಜನಪ್ರಿಯವಾಗಿದೆ.
ಸೀಬೆ ಕಾಯಿ ಅಥವಾ ಪೇರಳೆ – ಪೇರಳೆಯಲ್ಲಿರುವ ಕರಗಬಲ್ಲ ಫೈಬರ್ ಆರೋಗ್ಯಕರ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಉರಿಯೂತವನ್ನು ತಡೆಯುತ್ತದೆ. ತೇವಾಂಶವನ್ನು ಹೀರಿಕೊಳ್ಳುವ ಮೂಲಕ ಅತಿಸಾರವನ್ನು ನಿಲ್ಲಿಸುತ್ತದೆ. ಅಷ್ಟೇ ಅಲ್ಲ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಈ ಹಣ್ಣು ತುಂಬಾ ರಸಭರಿತ ಮತ್ತು ಸಿಹಿಯಾಗಿರುತ್ತದೆ. ಹೆಚ್ಚಿನ ಪೋಷಕಾಂಶಗಳನ್ನು ಪಡೆಯಲು ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸೀಬೆ ಕಾಯಿ ಪರಿಣಾಮಕಾರಿ.
ಹಸಿರು ಬೀನ್ಸ್ – ಇದು ಖಾದ್ಯ ತರಕಾರಿ. ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಅಂಶಗಳಿದ್ದು, ಯಾವುದೇ ಕ್ಯಾಲೊರಿಗಳನ್ನು ಹೊಂದಿಲ್ಲ.
ಯಾವುದೇ ಜೀರ್ಣಕಾರಿ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಪ್ರತಿದಿನ ಸೇವಿಸಬಹುದಾದ ತರಕಾರಿ ಇದಾಗಿದೆ. ಇದು ಕರುಳಿನ ಕ್ಯಾನ್ಸರ್ ಗೆ ಚಿಕಿತ್ಸೆ ನೀಡುತ್ತದೆ. ಮಧುಮೇಹ, ಮೂಲವ್ಯಾಧಿ, ಹುಣ್ಣು ಮತ್ತು ಮಲಬದ್ಧತೆಯನ್ನು ಸಹ ಇದು ನಿಯಂತ್ರಿಸುತ್ತದೆ.
ಪಪ್ಪಾಯಿ – ಅವು ನಿಮ್ಮ ಆರೋಗ್ಯ ವ್ಯವಸ್ಥೆಯ ಸಂಪೂರ್ಣ ಪ್ರಕ್ರಿಯೆಯನ್ನು ಟ್ಯೂನ್ ಮಾಡುವ ಅಸಾಧಾರಣ ಪೋಷಕಾಂಶಗಳಿಂದ ತುಂಬಿವೆ. ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಎದುರಿಸಲು ಪಪ್ಪಾಯ ಸೇವನೆ ಉತ್ತಮ. ಈ ಹಣ್ಣನ್ನು ಆಹಾರ ಸೇವಿಸುವ ಒಂದು ಗಂಟೆ ಮೊದಲು ಅಥವಾ ನಂತರ ಸೇವಿಸಬಹುದು.
ಸೌತೆಕಾಯಿ – ಸೌತೆಕಾಯಿ ಉತ್ಕರ್ಷಣ ನಿರೋಧಕ, ಕರಗದ ನಾರಿನಂಶದೊಂದಿಗೆ ಆರೋಗ್ಯಕರ ಜೀರ್ಣಕ್ರಿಯೆಗೆ ಪ್ರಮುಖ ಅಂಶಗಳಾಗಿವೆ. ಹೊಟ್ಟೆ ತುಂಬಿದಾಗ ಮತ್ತು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿರುವಾಗ, ಜೀರ್ಣಾಂಗವ್ಯೂಹದ ಮೇಲೆ ಪರಿಣಾಮ ಬೀರಲು ಸೌತೆಕಾಯಿಯ ಕೆಲವು ಹೋಳುಗಳನ್ನು ಸೇವಿಸುವುದು ಒಳ್ಳೆಯದು
ಒಣದ್ರಾಕ್ಷಿ – ಒಣದ್ರಾಕ್ಷಿ ರಸವು ನಿಮ್ಮ ದೇಹದಿಂದ ಅನಗತ್ಯ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅವು ಕರಗಬಲ್ಲ ಮತ್ತು ಕರಗದ ನಾರಿನಂಶವನ್ನು ಹೊಂದಿರುತ್ತವೆ. ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸಲು ಇದನ್ನು ದಿನಕ್ಕೆ ಎರಡು ಬಾರಿ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1443735675057102849?s=19
https://twitter.com/SaakshaTv/status/1443758241054351363?s=19
https://twitter.com/SaakshaTv/status/1443412536204922889?s=19
https://twitter.com/SaakshaTv/status/1443398441757929484?s=19
#Saakshatv #healthtips #digestion








