KRS ಭರ್ತಿ – ಕಾವೇರಿ ಕೊಳ್ಳದವರಿಗೆ ಎಚ್ಚರಿಕೆ.
ಮೈಸೂರು ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬರೋಬ್ಬರಿ ಹನ್ನೊಂದು ವರ್ಷಗಳ ಬಳಿಕ ಕೃಷ್ಣರಾಜ ಜಲಸಾಗರ ಬಹುತೇಕ ಭರ್ತಿಯಾಗಿದೆ.
124.80 ಅಡಿ ಗರಿಷ್ಟ ಮಟ್ಟದ ಜಲಾಶಯ 124.04 ಅಡಿಗಳಷ್ಟು ತುಂಬಿದ್ದು ಡ್ಯಾಮ್ ನಿಂದ 10,0000 ದಿಂದ 20,000 ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗುತ್ತಿದೆ, ಈ ಪ್ರಮಾಣವು ಇನ್ನೂ ಹೆಚ್ಚಾಗಲಿದೆ . ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಹಾಗಾಗಿ ಜನ ಮತ್ತು ಜಾನುವಾರಗಳನ್ನ ಸುರಕ್ಷಿತ ಪ್ರದೇಶಕ್ಕೆ ಕರೆದುಕೊಂಡು ಹೋಗುವಂತೆ ಕೆ ಆರ್ ಎಸ್ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕೆ ಆರ್ ಎಸ್ ಡ್ಯಾಮ್ ಭರ್ತಿಯಾಗುತ್ತಿತ್ತು, ಆದರೆ ಈ ಭಾರಿ ವಾಡಿಕೆಯಷ್ಟು ಮಳೆ ಆಗದಿರು ಕಾರಣ ಕಾವೇರಿ ಕೊಳ್ಳದ ರೈತರ ಆತಂಕಕ್ಕೆ ಕಾರಣವಾಗಿತ್ತು. ಈ ಋತುವಿನ ಅಂತ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಮೈಸೂರು ಮತ್ತು ಬೆಂಗಳೂರಿಗರ ಆತಂಕವನ್ನ ದೂರಮಾಡಿದೆ.
KRS ಭರ್ತಿಯಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಮುಂದಿನವಾರ ಬಾಗಿನ ಅರ್ಪಿಸಿದ್ದಾರೆ. ಸದ್ಯ ಉಪಚುನಾವಣೆಯಲ್ಲಿ ಬ್ಯುಸಿಯಾಗಿರುವ ಅವರು ಚುನಾವಣೆಯ ನಂತರ ಬಾಗಿನ ಅರ್ಪಿಸಲಿದ್ದಾರೆ ಎಂದು ತಿಳಿದು ಬಂದಿದೆ.