ಎಂ.ಇ.ಎಸ್ ಅವಹೇಳನಕಾರಿ ಪೋಸ್ಟ್ : ಗೃಹ ಸಚಿವ ಗರಂ
ಚಿಕ್ಕಮಗಳೂರು : ಕನ್ನಡ ರಾಜ್ಯೋತ್ಸವ ವಿಚಾರವಾಗಿ ಬೆಳಗಾವಿಯಲ್ಲಿ ಎಂ.ಇ.ಎಸ್.ಅವಹೇಳನಕಾರಿ ಪೋಸ್ಟ್ ಮಾಡಿದ್ದು, ಈ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಇ.ಎಸ್ ಅವರಿಗೆ ಇದೇ ಜೀವಾಳ. ಪದೇ-ಪದೇ ಅಂತಹ ಕೆಲಸ ಮಾಡುತ್ತಿದ್ದಾರೆ. ಹಾಗೇ ಮಾಡಿಯೇ ಆ ಸಂಘಟನೆ ಮೂಲೆ ಗುಂಪಾಗಿದ್ದು, ಮಹಾರಾಷ್ಟ್ರದಲ್ಲಿಯೂ ಇಲ್ಲ.
ಬೆಳಗಾವಿಯಲ್ಲಿ ಎಂಇಎಸ್ ಗೆ ಜನರು ಈಗಾಗಲೇ ಇತಿಶ್ರೀ ಹಾಡಿದ್ದಾರೆ. ಬೆಳಗಾವಿ ಕಾರ್ಪೋರೇಷನ್ ಬಿಜೆಪಿ ಹಿಡಿತಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಅಪ್ಪು ಸಮಾಧಿ ಬಗ್ಗೆ ಮಾತನಾಡಿದ ಅವರು, ಐದಾರು ದಿನದಲ್ಲಿ ಪುನೀತ್ ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು. ಕುಟುಂಬದವರನ್ನು ಕೇಳಿ, ಬೇಲಿ ಹಾಕಿ ಆಮೇಲೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡುತ್ತೆವೆ ಎಂದರು.