ರಸ್ತೆಯ ಇಕ್ಕೆಲಗಳಲ್ಲಿ ನಿಂತು ರಾವತ್ ಗೆ ಗೌರವ ಸಲ್ಲಿಸಿದ ಜನತೆ
ಬುಧವಾರ ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ ಭದ್ರತಾ ಪಡೆಗಳ ಪಾರ್ಥೀವ ಶರೀರವನ್ನು ಹೊತ್ತೊಯ್ಯುತ್ತಿದ್ದ ವಾಹನಗಳ ಮೇಲೆ ತಮಿಳುನಾಡಿನ ಸ್ಥಳೀಯರು ಹೂವಿನ ದಳಗಳನ್ನು ಸುರಿಸಿ ಗೌರವ ನಮನ ಸಲ್ಲಿಸಿದರು.
ನೀಲಗಿರಿ ಜಿಲ್ಲೆಯ ಮದ್ರಾಸ್ ರೆಜಿಮೆಂಟಲ್ ಸೆಂಟರ್ನಿಂದ ಸೂಲೂರು ವಾಯುನೆಲೆಗೆ ತೆರಳುತ್ತಿದ್ದಾಗ ಮೃತರ ಪಾರ್ಥಿವ ಶರೀರವನ್ನು ಹೊತ್ತ ಆಂಬುಲೆನ್ಸ್ಗಳ ಮೇಲೆ ಸ್ಥಳೀಯರು ಘೋಷಣೆಗಳನ್ನು ಕೂಗುತ್ತಾ ಹೂವಿನ ದಳಗಳನ್ನು ಸುರಿಸಿದರು. ಸೂಲೂರು ವಾಯುನೆಲೆಗೆ ಆಗಮಿಸುತ್ತಿದ್ದಂತೆ ಎಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಎಲ್ಲಾ 13 ಮೃತದೇಹಗಳನ್ನು ಭಾರತೀಯ ವಾಯುಪಡೆಯ C-130J ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನದಲ್ಲಿ ನವದೆಹಲಿಗೆ ಸಾಗಿಸಲಾಗುತ್ತಿದೆ. ಜನರಲ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು ಬ್ರಿಗ್ ಎಲ್ಎಸ್ ಲಿಡರ್ ಸೇರಿದಂತೆ ನಾಲ್ಕು ದೇಹಗಳನ್ನು ಗುರುತಿಸಲಾಗಿದೆ.
ಆದರೆ ಉಳಿದ ಅಧಿಕಾರಿಗಳ ದೇಹಗಳನ್ನು ಗುರುತಿಸಲು ಕಷ್ಟವಾಗುತ್ತಿದೆ. ಅವರ ಕುಟುಂಬಸ್ಥರಿಂದ ಗುರುತಿಸುವ ಮೂಲಕ ಅಥವಾ ಡಿ ಎನ್ ಎ ಟೆಸ್ಟ್ ಮೂಲಕ ದೇಹವನ್ನ ಗುರುತಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.
“ಪಾಸಿಟಿವ್ ಗುರುತಿನ ನಂತರವೇ ಮಾರಣಾಂತಿಕ ಅವಶೇಷಗಳನ್ನು ಮುಂದಿನ ಸಂಬಂಧಿಕರಿಗೆ ಬಿಡುಗಡೆ ಮಾಡಲಾಗುತ್ತದೆ. ಸಕಾರಾತ್ಮಕ ಗುರುತಿನ ಪ್ರಕ್ರಿಯೆಯು ಪೂರ್ಣಗೊಂಡ ನಂತರ ನಿಕಟ ಸಂಬಂಧಿಗಳೊಂದಿಗೆ ಸಮಾಲೋಚಿಸಿ ಎಲ್ಲಾ ಸಿಬ್ಬಂದಿಯ ಸೂಕ್ತ ಮಿಲಿಟರಿ ವಿಧಿಗಳನ್ನು ಖಚಿತಪಡಿಸಿಕೊಳ್ಳಲಾಗುವುದು, ”ಎಂದು ಸೇನೆಯನ್ನು ಉಲ್ಲೇಖಿಸಿ ಎಎನ್ಐ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಇಂದು ಸಂಜೆ ಪಾಲಂ ತಾಂತ್ರಿಕ ಪ್ರದೇಶದಲ್ಲಿ ಜನರಲ್ ರಾವತ್, ಅವರ ಪತ್ನಿ ಮತ್ತು ಇತರ 11 ಸಿಬ್ಬಂದಿಗೆ ಗೌರವ ಸಲ್ಲಿಸಲಿದ್ದಾರೆ.







