ಪಾಕಿಸ್ತಾನ : ಹಿಂದೂ ದೇವರ ಮೂರ್ತಿಗಳನ್ನ ಭಗ್ನಗೊಳಿಸಿದ ಕಿಡಿಗೇಡಿ
ಪಾಕಿಸ್ತಾನದಲ್ಲಿ ಅನಾಗರಿಕತೆ ತುಂಬಿ ತುಳುಕುತ್ತಿದೆ.. ಇದೇನು ಹೊಸ ವಿಚಾರವೇನಲ್ಲ.. ಅಂತೆಯೇ ಅಲ್ಲಿನ ಹಿಂದೂಗಳ ಮೇಲೆ ದೌರ್ಜನ್ಯ , ಹಿಂದೂ ದೇವಾಲಗಳು ಮಂದಿರಗಳ ಧ್ವಂಸ ಪ್ರಕರಣಗಳೂ ಇತ್ತೀಚೆಗೆ ತುಸು ಹೆಚ್ಚೇ ಆಗಿದೆ..
ಇದೀಗ ದುಷ್ಕರ್ಮಿಯೋರ್ವ ಹಿಂದೂ ದೇವಾಲಯದಲ್ಲಿ ದೇವರ ಮೂರ್ತಿಗಳನ್ನು ಭಗ್ನಗೊಳಿಸಿರುವ ಘಟನೆ ನಡೆದಿದೆ.. ಕರಾಚಿಯ ನಾರಾಯಣಪುರದಲ್ಲಿರುವ ನಾರಾಯಣ ಮಂದಿರದಲ್ಲಿನ ಮೂರ್ತಿಗಳನ್ನು ಸೋಮವಾರ ಸಂಜೆ ನಾಶ ಪಡಿಸಲಾಗಿದೆ.
ದೇವರ ಮೂರ್ತಿಗಳನ್ನು ಭಗ್ನಗೊಳಿಸಿರುವ ಪ್ರಕರಣದ ಸಂಬಂಧ ಮುಹಮ್ಮದ್ ವಾಲೀದ್ ಶಬ್ಬೀರ್ ಹೆಸರಿನ ವ್ಯಕ್ತಿಯನ್ನು ಬಂಧಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
https://twitter.com/i/status/1473011640266366981
ಹಿಂದೂ ದೇವರುಗಳ ವಿಗ್ರಹಗಳನ್ನು ಸುತ್ತಿಗೆ ಬಳಸಿ ಹಾಳು ಮಾಡುತ್ತಿರುವುದನ್ನು ಮುಕೇಶ್ ಕುಮಾರ್ ಎಂಬುವವರು ಪ್ರತ್ಯಕ್ಷವಾಗಿ ಕಂಡಿದ್ದಾರೆ.. ಮುಕೇಶ್ ಪತ್ನಿ ಜೊತೆಗೆ ನಾರಾಯಣ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವಾಗಲೇ ಮೂರ್ತಿಗಳನ್ನು ಭಗ್ನಗೊಳಿಸುವ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಮಂದಿರದಲ್ಲಿ ಇದ್ದ ಹಿಂದೂಗಳು ಮೂರ್ತಿ ಭಗ್ನ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.. ಮುಕೇಶ್ ಕುಮಾರ್ ಈ ಸಂಬಂಧ ದೂರು ದಾಖಲಿಸಿದ್ದಾರೆ. ಅಲ್ಲದೇ ಅಲ್ಲಿನ ಹಿಂದೂಗಳು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿ ಸರ್ಕಾರವು ಹಿಂದೂಗಳಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.








