ಬೆಂಗಳೂರು, ಮೇ 13 : ರಾಜ್ಯ ಸರ್ಕಾರ ಕೊರೋನಾ ಸೋಂಕಿನ ಪತ್ತೆ, ಚಿಕಿತ್ಸೆ, ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮಗಳನ್ನು ವರ್ಷವಿಡೀ ಮುಂದುವರಿಸಲು ನಿರ್ಧರಿಸಿದ್ದು, ಅದಕ್ಕಾಗಿ ಕೋವಿಡ್-19 ನಿಧಿ ಸ್ಥಾಪಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಕೊರೋನಾ ಸೋಂಕು ತಡೆಗಟ್ಟಲು ಕೈಗೊಳ್ಳುವ ಕ್ರಮಗಳಿಗೆ ಮತ್ತು ಅರ್ಥಿಕತೆಯ ಮೇಲೆ ಸೋಂಕು ಬೀರಿರುವ ಪರಿಣಾಮಗಳನ್ನು ಸರಿಪಡಿಸಲು ಕೋವಿಡ್-19 ನಿಧಿ ಸ್ಥಾಪಿಸಲು ಚಿಂತನೆ ನಡೆದಿದ್ದು , ಇದಕ್ಕಾಗಿ ನಾನಾ ಇಲಾಖೆಯ ಅನುದಾನ ಕಡಿತ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಕೋವಿಡ್-19 ನಿಧಿಯಡಿ ಕಾಯ್ದಿರಿಸಲು ಇಲಾಖೆಗಳ ಅನುದಾನ ಕಡಿತ ಮಾಡಿದರೆ ಇದು ಬಜೆಟ್ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಗಂಭೀರ ಪ್ರಯತ್ನ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸರಕಾರ ಈಗಾಗಲೇ ಘೋಷಿಸಿರುವ ಪ್ಯಾಕೇಜ್ ನಡಿ ನೆರವು ಹಂಚಿಕೆ ಮಾರ್ಗಸೂಚಿ ರಚಿಸುವ ಬಗ್ಗೆ ಚರ್ಚೆ ನಡೆಸಿದ್ದು, 2ನೇ ಪ್ಯಾಕೇಜ್ ಘೋಷಣೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.
ವಾರಾಣಸಿಯಲ್ಲಿ ಭುಗಿಲೆದ್ದ ಧ್ವನಿವರ್ಧಕ ಸಮರ: ಒಂದು ವಾರದಲ್ಲಿ ಮಸೀದಿಗಳ ಲೌಡ್ಸ್ಪೀಕರ್ ತೆಗೆಯದಿದ್ದರೆ ಬೃಹತ್ ಆಂದೋಲನ!
ವಾರಾಣಸಿ (ಉತ್ತರ ಪ್ರದೇಶ): ಹನುಮಾನ್ ಚಾಲೀಸಾ ಪಠಣಕ್ಕೆ ವಿರೋಧ ವ್ಯಕ್ತವಾದ ಘಟನೆಯು ಇದೀಗ ಪವಿತ್ರ ನಗರಿ ಕಾಶಿಯಲ್ಲಿ ದೊಡ್ಡ ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗಿದೆ. ಒಂದು ವಾರದೊಳಗೆ ನಗರದ...