Virat Kohli | ಕೊಹ್ಲಿ ವಿರುದ್ಧ ಉರಿ ಉರಿದು ಬೀಳುತ್ತಿರುವ ಸಂಜಯ್..!
ಒಂದೇ ಒಂದು ಐಸಿಸಿ ಟ್ರೋಪಿ ಗೆಲ್ಲಿಸಲಾಗದ ವಿರಾಟ್ ಕೊಹ್ಲಿ, ಅದು ಹೇಗೆ ದಿಗ್ಗಜ ನಾಯಕರಲ್ಲಿ ಸ್ಥಾನ ಪಡೆಯುತ್ತಾನೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸಂಜಯ್ ಮಂಜ್ರೇಕರ್ ಉರಿ ಉರಿದು ಬೀಳುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರನ್ನ ಆಲ್ ಟೈಂ ಬೆಸ್ಟ್ ಕ್ಯಾಪ್ಟನ್ ಲೀಸ್ಟ್ ಗೆ ಸೇರಿಸಲು ಆಗುವುದಿಲ್ಲ. ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲಿಸಲಾಗದ ವ್ಯಕ್ತಿಯನ್ನು ಹೇಗೆ ಬೆಸ್ಟ್ ಕ್ಯಾಪ್ಟನ್ ಆಗಿ ಪರಿಗಣಿಸುತ್ತೀರಿ..? ಎಂದು ವಿವಾದಕ್ಕೆ ನಾಂದಿಯಾಡಿದ್ದಾರೆ.
ಅಲ್ಲದೇ ಈ ಹಿಂದಿನ ಟೀಂ ಇಂಡಿಯಾದ ಕ್ಯಾಪ್ಟನ್ ಗಳಿಗೆ ಹೋಲಿಕೆ ಮಾಡಿದ್ರೆ, ವಿರಾಟ್ ಕೊಹ್ಲಿ ನಾಯಕನಾಗಿ ಮಾಡಿದ್ದೇನು ಇಲ್ಲ. ಕೇವಲ ಮೀಡಿಯಾ ಹೈಪ್ ಮೂಲಕವೇ ವಿರಾಟ್ ಗೆ ಅರ್ಹತೆಗೂ ಮೀರಿ ಕ್ರೆಡಿಟ್ ಸಿಕ್ಕಿದೆ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ಕ್ರಿಕೆಟ್ ತಂಡದ ದಿಗ್ಗಜ ನಾಯಕರಲ್ಲಿ ಎಂ.ಎಸ್ ಧೋನಿ ಮುಖ್ಯವಾದವರು.
.ಅವರ ಸಾರಥ್ಯದಲ್ಲಿ ಟೀಂ ಇಂಡಿಯಾ ಅಂತರ್ ಜಾತಿಯ ವೇದಿಕೆಗಳಲ್ಲಿ ದಿಗ್ವಿಜಯ ಸಾಧಿಸಿದೆ. ಅಲ್ಲದೇ ಎಷ್ಟೋ ಐಸಿಸಿ ಟ್ರೋಪಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಕ್ಯಾಪ್ಟನ್ ಯಶಸ್ಸನ್ನು ಐಸಿಸಿ ಟ್ರೋಪಿಗಳಿಂದಲೇ ಅಳೆಯಬೇಕು. ಈ ವಿಚಾರದಲ್ಲಿ ಧೋನಿ ಹತ್ತಿರ ಹತ್ತಿರಕ್ಕೂ ವಿರಾಟ್ ಕೊಹ್ಲಿ ಬರುವುದಿಲ್ಲ. ಸ್ವದೇಶಿ – ವಿದೇಶಿಗಳಲ್ಲಿ ಗೆದ್ದ ಸರಣಿಗಳನ್ನು ಐಸಿಸಿ ಟ್ರೋಫಿಗೆ ಹೋಲಿಕೆ ಮಾಡಲಾಗುವುದಿಲ್ಲ ಎಂದು ಮಂಜ್ರೇಕರ್ ಲಾಜಿಕ್ ಮಾತುಗಳನ್ನಾಡಿದ್ದಾರೆ.
ದಿಗ್ಗಜ ನಾಯಕರ ವಿಚಾರಕ್ಕೆ ಬಂದರೇ, ಟಿ 20, ಏಕದಿನ ವಿಶ್ವಕಪ್ ಜೊತೆ ಜೊತೆಗೆ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟಧೋನಿ, 1983ರಲ್ಲಿ ವಿಶ್ವಕಪ್ ಗೆದ್ದು ಕೊಟ್ಟ ಕಪಿಲ್ ದೇವ್ ಪ್ರಮುಖರಾಗಿದ್ದಾರೆ. ಟೀಂ ಇಂಡಿಯಾಗೆ ಆಟ್ಯಾಕಿಂಗ್ ನೀತಿಯನ್ನ ಕಳಿಸಿಕೊಟ್ಟ ದಾದಾ, ಸುನೀಲ್ ಗವಾಸ್ಕರ್ ಅವರನ್ನು ದಿಗ್ಗಜ ನಾಯಕರ ಪಟ್ಟಿಯಲ್ಲಿ ಸೇರಿಸಬಹುದು ಎಂದಿದ್ದಾರೆ.
ಆದರೆ, ಕೊಹ್ಲಿಗೆ ಅವರದೇ ಆದ ನಾಯಕತ್ವ ಶೈಲಿ ಇದೆ. ಅವರು ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ವಿರಾಟ್ ಎಷ್ಟೇ ಹೋರಾಟದ ಸ್ವಭಾವವನ್ನು ಹೊಂದಿದ್ದರೂ, ದುರಾದೃಷ್ಠ ಅವರ ಬೆನ್ನ ಹಿಂದೆ ಇದೆ. ಏಳು ವರ್ಷಗಳ ಕ್ಯಾಪ್ಟನ್ಸಿ ಕೆರಿಯರ್ ನಲ್ಲಿ ಎರಡು ಬಾರಿ ಮಾತ್ರ ಕೊಹ್ಲಿ ಟೀಂ ಇಂಡಿಯಾವನ್ನು ಫೈನಲ್ ಗೆ ಕರೆದುಕೊಂಡು ಹೋಗಿದ್ದಾರೆ ಎಂದು ಮಂಜ್ರೇಕರ್ ಹೇಳಿದ್ದಾರೆ.









