ಖಲೇಜ ನಂತರ ಮಹೇಶ್ ಬಾಬು – ತ್ರಿವಿಕ್ರಮ್ ಕಾಂಬೋ ರಿಪೀಟ್.
ಸೂಪರ್ ಸ್ಟಾರ್ ಮಹೇಶ್ ಬಾಬು, ಮಾತಿನ ಮಾಂತ್ರಿಕ ತ್ರಿವಿಕ್ರಮ್ ಶ್ರೀನಿವಾಸ್ ಅವರ ಕಾಂಬಿನೇಷನ್ ನ ಮೂರನೇ ಚಿತ್ರಕ್ಕೆ ಇಂದು ಮುಹೂರ್ತ ನೆರವೆರಿದೆ. ತಾತ್ಕಾಲಿಕವಾಗಿ ಈ ಚಿತ್ರಕ್ಕೆ SSMB28 ಎಂದು ಹೆಸರಿಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುವುದಕ್ಕೆ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದರು. ಪೂಜಾ ಮುಹೂರ್ತದ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
2005 ಅತಡು ಮತ್ತು 2010 ರಲ್ಲಿ ಖಲೇಜಾದಂತಹ ಕಲ್ಟ್ ಕ್ಲಾಸಿಕ್ ಚಿತ್ರಗಳನ್ನ ನೀಡಿದ್ದ ಈ ಜೋಡಿಯ ಮೂರನೇ ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಶೀಘ್ರದಲ್ಲೇ ರೆಗ್ಯುಲರ್ ಶೂಟಿಂಗ್ ಶುರುವಾಗಲಿದೆ.
ಗುರುವಾರ (ಫೆಬ್ರವರಿ 3) ಔಪಚಾರಿಕವಾಗಿ ಪೂಜಾ ಕಾರ್ಯಕ್ರಮಗಳೊಂದಿಗೆ ಆರಂಭವಾಯಿತು. ಆದರೆ, ಮಹೇಶ್ ಬಾಬು ಸಮಾರಂಭಕ್ಕೆ ಹಾಜರಾಗಿರಲಿಲ್ಲ. ಈ ಸಂದರ್ಭದಲ್ಲಿ ಮಹೇಶ್ ಅವರ ಪತ್ನಿ ನಮ್ರತಾ ಉಪಸ್ಥಿತರಿದ್ದರು. ಹರಿಕಾ ಅಂಡ್ ಕ್ರಿಯೇಷನ್ಸ್ ನಲ್ಲಿ ಬರುತ್ತಿರುವ ಏಳನೇ ಸಿನಿಮಾ ಇದಾಗಿದ್ದು, ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿರುವ 28ನೇ ಸಿನಿಮಾ ಇದಾಗಿದೆ.
ಈ ಚಿತ್ರವು ಅತಡು ಮುಂದುವರಿದ ಭಾಗವಾಗಿದೆ ಎಂದು ವದಂತಿಗಳಿವೆ. 2005 ರ ಬ್ಲಾಕ್ ಬಸ್ಟರ್ ಹಿಟ್ ‘ಅತಡು’ ಚಿತ್ರದ ಸೀಕ್ವೆಲ್ ಮಾಡಲು ತಿವಿಕ್ರಮ್ ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ. ಚಿತ್ರಕ್ಕೆ ‘ಪಾರ್ಥು’ ಎಂದು ಹೆಸರಿಡಲಾಗಿದೆ ಎಂಬ ಮಾತುಗಳೂ ಇವೆ. ಅತಡು ಚಿತ್ರದಲ್ಲಿ ಮಹೇಶ್ ಬಾಬು ಗೆ ಪಾರ್ಥು ಎಂದು ಹೆಸರಿಡಲಾಗಿತ್ತು.








