Hijab Controvercy : ವಿವಾದವನ್ನ ರಾಜಕೀಯ ಬಳಸಿಕೊಂಡ್ರೆ ದೇಶದ್ರೋಹ : ರವೀಂದ್ರ ಶ್ರೀಕಂಠಯ್ಯ
ಮಂಡ್ಯ : ಹಿಜಾಬ್ – ಕೇಸರಿ ಶಾಲು ಸಂಘರ್ಷದ ವಿಚಾರವಾಗಿ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರತಿಕ್ರಿಯೆ ನೀಡಿದ್ದಾರೆ..
ಮಂಡ್ಯದಲ್ಲಿ ಮಾತನಾಡಿರುವ ಅವರು , ಈ ವಿವಾದವನ್ನ ರಾಜಕೀಯ ಬಳಸಿಕೊಂಡ್ರೆ ದೇಶದ್ರೋಹದ ಕೆಲಸ. ಸರ್ಕಾರ ಸಮವಸ್ತ್ರವನ್ನ ಕಡ್ಡಾಯಗೊಳಿಸಿದೆ, ಎಲ್ಲರು ಧರಿಸಿ ಬರಬೇಕು. ಎಲ್ಲ ಧರ್ಮದವರು ಅದನ್ನ ಪಾಲಿಸಿಬೇಕಾಗುತ್ತೆ.
ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನ ಯಾರದರು ಹಾಳು ಮಾಡಲು ಪ್ರಯತ್ನಪಟ್ಟರೆ ಅದು ದೇಶದ್ರೋಹಕ್ಕೆ ಸಮ. ಇದನ್ನ ಯಾವುದೇ ಧರ್ಮದವರು, ಯಾವುದೇ ರಾಜಕೀಯ ಪಕ್ಷದವರು ಬಳಸಿಕೊಂಡ್ರೆ ದೇಶದ್ರೋಹವಾಗುತ್ತೆ..
ಅತಿ ಹೆಚ್ಚು ಜನ ಸಂಖ್ಯೆ ಇರುವಂತಹ ದೇಶ ಮುಂದೆ ಬರುತ್ತಿದೆ ಎನ್ನುವುದಾದರೇ ಅದು ಮಕ್ಕಳ ಶಿಕ್ಷಣದಿಂದ. ದೇಶಕ್ಕೆ ಮಾರಕವಾಗದಂತೆ ಸರ್ಕಾರದ ನಿಯಮ ಪಾಲಿಸಿ ಎಂದು ಹೇಳಿಕೆ ನೀಡಿದ್ದಾರೆ.







