Ruturaj Gaikwad | ನತದೃಷ್ಟ ರುತುರಾಜ್ ಗಾಯಕ್ವಾಡ್..!
ಟೀಂ ಇಂಡಿಯಾ ಯುವ ಕ್ರಿಕೆಟಿಗ ರುತುರಾಜ್ ಗಾಯಕ್ವಾಡ್ ಅವರನ್ನು ಮತ್ತೊಮ್ಮೆ ದುರದೃಷ್ಟ ಕಾಡಿದೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದ ರುತುರಾಜ್ ಗಾಯದಿಂದಾಗಿ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಮೊದಲ ಟಿ20ಯಲ್ಲಿ ಬೆಂಚ್ಗೆ ಸೀಮಿತವಾಗಿದ್ದ ರುತುರಾಜ್ ಎರಡನೇ ಟಿ20ಯಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು.
ಆದರೆ ಬ್ಯಾಟಿಂಗ್ ಅಭ್ಯಾಸದ ವೇಳೆ ರುತುರಾಜ್ ಗಾಯಗೊಂಡಿದ್ದು, ಇನ್ನುಳಿದ ಪಂದ್ಯಗಳಿಗೆ ದೂರವಾಗಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಸಿಸಿಐ ವೈದ್ಯಕೀಯ ತಂಡ ರುತುರಾಜ್ ಮೇಲೆ ನಿಗಾ ಇರಿಸಿದೆ. ಗಾಯದಿಂದಾಗಿ ರುತುರಾಜ್ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.
ರುತುರಾಜ್ ಬದಲಿಗೆ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ. ಮಯಾಂಕ್ ಚಂಡೀಗಢದಿಂದ ಧರ್ಮಶಾಲಾಕ್ಕೆ ಬಂದ ತಂಡವನ್ನು ಸೇರಿಕೊಂಡಿದ್ದಾರೆ. ತಂಡಕ್ಕೆ ಸೇರ್ಪಡೆಗೊಂಡರೂ ಮಯಾಂಕ್ ಬಯೋಬಬಲ್ನಲ್ಲಿ ಉಳಿಯುತ್ತಾರೆ.
ಈಗಾಗಲೇ ಶ್ರೀಲಂಕಾ ವಿರುದ್ಧದ ಟಿ 20 ಸರಣಿಯಿಂದ ಕೆಎಲ್ ರಾಹುಲ್, ಅಕ್ಷರ್ ಪಟೇಲ್, ದೀಪಕ್ ಚಹಾರ್ ಮತ್ತು ಸೂರ್ಯಕುಮಾರ್ ಯಾದವ್ ಗಾಯದ ಸಮಸ್ಯೆಯಿಂದ ಹೊಗುಳಿದಿದ್ದಾರೆ .
Ruturaj-gaikwad-ruled-out-t20is









