ಬೆಂಗಳೂರು : ರಾಜ್ಯದ ಬಿಜೆಪಿ ಸರ್ಕಾರಕ್ಕೆ ಸೇಮ್ ಆಗಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಪ್ರೆಸಿಡೆಂಟ್ ಡಿ.ಕೆ. ಶಿವಕುಮಾರ ವಾಗ್ದಾಳಿ ನಡೆಸಿದ್ದಾರೆ. ಕೋವಿಡ್-19 ಹಿನ್ನೆಲೆ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದಾರೆ. ಅಂತಹವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ, ಪ್ಯಾಲೆಸ್ ಗ್ರೌಂಡ್ನ ಟೆನಿಸ್ ಪೆವಿಲಿಯನ್, ಮ್ಯಾನ್ಫೊ ಕನ್ವೆಷನ್ ಸೆಂಟರ್ಗಳಲ್ಲಿ ತಂಗಲು ವ್ವವಸ್ಥೆ ಮಾಡಲಾಗಿದೆ. ಒರಿಸ್ಸಾ, ಉತ್ತರ ಪ್ರದೇಶ, ತ್ರಿಪುರ, ಬಿಹಾರ್ ಸೇರಿದಂತೆ ಇನ್ನಿತರೆ ರಾಜ್ಯಗಳ ವಲಸೆ ಕಾರ್ಮಿಕರ ಪಟ್ಟಿ ಮಾಡಿ, ಆನ್ಲೈನ್ ಮೂಲಕ ರೈಲುಗಳ ಬುಕ್ಕಿಂಗ್ ಮಾಡಲಾಗುತ್ತಿದೆ.
ವಾಸ್ತವ ಸ್ಥಿತಿ ಅರಿಯಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶನಿವಾರ ಭೇಟಿ ಮಾಡಿ ಅವರ ಕುಂದುಕೊರತೆಗಳನ್ನು ಆಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ದೇಶದ ಬೇರೆ ರಾಜ್ಯದಿಂದ ಕೆಲಸಕ್ಕೆ ಅಂತ ಬಂದ ಕಾರ್ಮಿಕರು ಇದ್ದಾರೆ. ಅವರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತ್ತು.
ಆದರೂ ರಾಜ್ಯದ ಬಿಜೆಪಿ ಸರ್ಕಾರ ಹಣ ಪಡೆಯುತ್ತಿದೆ. ಪ್ಯಾಲೇಸ್ ಗ್ರೌಂಡ್ ನಲ್ಲಿ 40 ಸೆಂಟರ್ ಗಳನ್ನು ಮಾಡಿದ್ದಾರೆ. ಊರುಗಳಿಗೆ ಹೋಗಲು ಸಾವಿರಾರು ಅಸಂಘಟಿತ ಕಾರ್ಮಿಕರು ಬಂದಿದ್ದಾರೆ. ಬೆಳಿಗ್ಗೆ ಆರು ಗಂಟೆಯಿಂದ ಕಾರ್ಮಿಕರು ಕಾಯುತ್ತಿದ್ದಾರೆ. ಅವರಿಗೆ ಕುಡಿಯಲು ನೀರು, ತಿನ್ನಲು ಆಹಾರ ಸಿಕ್ಕಿಲ್ಲ. ಅಲ್ಲದೆ ರೈಲು ಪ್ರಯಾಣಕ್ಕೆ ಒಂದು ಸಾವಿರ ರೂಪಾಯಿ ಹಣ ಅಕೌಂಟ್ ಹಾಕುತ್ತೇವೆ ಎಂದು ಹೇಳಿದ್ದರು. ಆದರೆ ವಲಸೆ ಕಾರ್ಮಿಕರ ಅಕೌಂಟ್ ಗೆ ಒಂದು ರೂಪಾಯಿ ಸಹ ಬಂದಿಲ್ಲ. ಇದು ನಮ್ಮ ರಾಜ್ಯದ ಮಾನದ ಪ್ರಶ್ನೆ, ಹಾಗಾಗಿ ರಾಜ್ಯ ಕೂಡಲೇ ಕಾರ್ಮಿಕರಿಗೆ ಉಚಿತ ಪ್ರಯಾಣ ಮಾಡುವ ವ್ಯವಸ್ಥೆ ಮಾಡಬೇಕು. ಅವರಿಂದ ಹಣ ಪಡೆಯಬಾರದು. ಒಂದು ವೇಳೆ ರಾಜ್ಯ ಸರ್ಕಾರದಿಂದ ಕಾರ್ಮಿಕರನ್ನು ಕಳಿಸಲು ಆಗವುದಿಲ್ಲ ಎಂದಾರೆ ನಾವು ಕಳಿಸುತ್ತೇವೆ.
ನಾನು ಚೆಕ್ ಕೊಡುತ್ತೇನೆ. ನಾನು ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿ ಚೆಕ್ ನೀಡಿದ್ದೇನೆ. ಆದರೆ ಅವರು ಹಣವನ್ನು ಪರಿಗಣಿಸಿಲ್ಲ. ನಾನು ಈಗಲೂ ರೆಡಿ ಇದ್ದಾನೆ. ಅವರಿಗೆ ಊಟ ಹಾಕಿಸಿ, ಬಸ್ ವ್ಯವಸ್ಥೆ ಮಾಡಿ ಊರಿಗೆ ಕಳಿಸಲು. ರಾಜ್ಯ ಸರ್ಕಾರ ಅವಕಾಶ ಮಾಡಿಕೊಡ್ತಾ ? ಬೇರೆಬೇರೆ ರಾಜ್ಯದಿಂದ ದುಡಿಯಲು ಬಂದ ಕಾರ್ಮಿಕರನ್ನು ಈ ರೀತಿ ರಾಜ್ಯ ಸರ್ಕಾರ ನಡೆಸಿಕೊಳ್ಳಬಾರದ್ದು, ಕಾರ್ಮಿಕರನ್ನು ಗೌರವಪೂರ್ವಕವಾಗಿ ನಡೆಸಿಕೊಳ್ಳಬೇಕು.
ಅವರು ಮತ್ತೆ ಕೆಲಸ ಇಲ್ಲಿಗೆ ಬರುತ್ತಾರೆ. ಕಾರ್ಮಿಕರು ದೇಶವನ್ನು ಕಟ್ಟುವವರು. ಅಂತಹಾ ಕಾರ್ಮಿಕರನ್ನು ಬಿಜೆಪಿ ನಡೆಸಿಕೊಳ್ಳುತ್ತಿರುವುದು ನೋಡಿದರೆ ಸೇಮ್ ಆಗುತ್ತದೆ. ಹಾಗಾಗಿ ರಾಜ್ಯ ಸರ್ಕಾರ ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಬೇಕು ಎಂದು ಡಿಕೆ ಶಿವಕುಮಾರ ಸರ್ಕಾರವನ್ನು ಒತ್ತಾಯಿಸಿದ್ದಾರೆ.