ಈಗಾಗಲೆ ಏರ್ ಲೈನ್ಸ್ ಸಂಸ್ಥೆಗಳು ಸಾಲದ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿವೆ. ಈ ಮದ್ಯೆ ಮತ್ತೊಂದು ಹೊಡೆತ ಅನುಭವಿಸಿ ಆತಂಕ ಒಳಗಾಗಿವೆ. ಕೊರೋನಾ ವೈರಸ್ ಕೇವಲ ಜನರ ಆರೋಗ್ಯದ ಮೇಲೆ ಮಾತ್ರ ದಾಳಿಮಾಡಿಲ್ಲ. ವ್ಯಾಪಕವಾಗಿ ಹರಡುವ ಕೊರೋನಾ ವೈರಸ್ ಕುರಿತು ಜನರಲ್ಲಿ ಭೀತಿ ಉಂಟು ಮಾಡಿದೆ. ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯು ತೀವ್ರವಾಗಿದೆ. ಈ ಕಾರಣಕ್ಕಾಗಿ ಪ್ರವಾಸಿಗರು ತಮ್ಮ ಪ್ರವಾಸವನ್ನು ರದ್ದು ಮಾಡುತ್ತಿದ್ದಾರೆ. ಸಿಂಗಾಪುರ, ಥೈವಾನ್, ಥೈಲ್ಯಾಂಡ್, ವಿಯೆಟ್ನಾಂ, ಕಂಬೋಡಿಯಾ ಮುಂತಾದ ರಾಷ್ಟ್ರಗಳಿಗೆ ಬಹುತೇಕ ಪ್ರಯಾಣಿಕರೇ ಇಲ್ಲದೆ ಖಾಲಿ ಹೊಡೆಯುತ್ತಿದೆ. ಏರ್ ಇಂಡಿಯಾ, ಗೋಏರ್, ಇಂಡಿಗೋ, ಸಿಲ್ಕ್ಏರ್, ಸಿಂಗಾಪುರ ಏರ್ಲೈನ್ಸ್ಗಳು ಸಿಂಗಾಪುರಕ್ಕೆ ಬೆಂಗಳೂರಿನಿಂದ ವಿಮಾನ ಸಂಪರ್ಕ ಹೊಂದಿವೆ. ಏರ್ಏಷಿಯಾ, ಪ್ರವಾಸ ಮತ್ತು ವ್ಯಾಪಾರಕ್ಕಾಗಿ ಬ್ಯಾಂಕಾಕ್, ಹಾಂಕಾಂಗ್ ತೆರಳುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖ ಕಂಡಿದೆ. ಇನ್ನು ಹೋಟಲ್ ಹಾಗೂ ಪ್ರವಾಸೋದ್ಯಮ ವಹಿವಾಟು ಪಾತಾಳಕ್ಕೆ ಇಳಿದಿದ್ದು, ಆರ್ಥಿಕತೆ ಮೇಲೆ ಪರೋಕ್ಷವಾಗಿಯೇ ಕೊರೋನಾ ದಾಳಿಗೆ ಇಳಿದಿದೆ.
ರೆಫರಲ್ ಲೆಟರ್ ಬೇಡ: ಬಿಪಿಎಲ್ ಕಾರ್ಡ್ ದಾರರುಮತ್ತು ಸರ್ಕಾರಿ ನೌಕರರಿಗೆ ಹೈಟೆಕ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ
ಕರ್ನಾಟಕಾ ರಾಜ್ಯ ಸರ್ಕಾರವು ಬಡವರು ಮತ್ತು ಸರ್ಕಾರಿ ನೌಕರರ ಆರೋಗ್ಯ ಹಿತದೃಷ್ಟಿಯಿಂದ ಕ್ರಾಂತಿಕಾರಿ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇನ್ನು ಮುಂದೆ ಬಿಪಿಎಲ್ ಕಾರ್ಡ್ ದಾರರು ಮತ್ತು ಸರ್ಕಾರಿ ನೌಕರರು...








