ಇಡೀ ಜಗತ್ತಿನಲ್ಲಿ ಜನರ ನೆಮ್ಮದಿಯನ್ನು ಕಸಿದುಕೊಂಡಿರುವ ಕೊರೋನ ವೈರಸ್ ನಿವಾರಣೆಗಾಗಿ ಪ್ರಾರ್ಥನೆ ಮಾಡುತ್ತೇನೆ ಎಂದು ಮುರುಘಾ ಶ್ರೀ ಹೇಳಿದರು. ಖಾಯಿಲೆ ಬಾರದಿರಲು ಕಾಯಕ ಮಾಡಬೇಕು, ತಮ್ಮನ್ನು ತಾವು ಕಾಯಕದಲ್ಲಿ ತೊಡಿಸಿಕೊಂಡರೆ ನಮ್ಮ ಬಳಿ ಯಾವ ರೋಗವೂ ಬರುವುದಿಲ್ಲ ಈ ವಿಚಾರವನ್ನು ಶರಣರು ಅವರ ಕಾಲದಲ್ಲಿಯೇ ಹೇಳಿದ್ದಾರೆ ಎಂದರು. ಧ್ಯಾನ ಮತ್ತು ಮೌನ ಎನ್ನುವುದು ಎಲ್ಲರಲ್ಲೂ ಬರಬೇಕು. ಇವುಗಳನ್ನು ಪಾಲಿಸಿದರೆ ಎಲ್ಲರಲ್ಲೂ ಶಾಂತಿ ಮತ್ತು ಸಹನೆ ಮೂಡಲಿದೆ. ಈ ರೀತಿಯ ಸಾಮಾಜಿಕ ವ್ಯವಸ್ಥೆಯನ್ನು ಶರಣರು 600 ವರ್ಷಗಳ ಹಿಂದೆಯೇ ಹೇಳಿದ್ದಾರೆ ಎಂದರು. ಒತ್ತಡಕ್ಕೆ ಒಳಗಾಗದ ಧ್ಯಾನ, ಯೋಗವನ್ನ ಪಾಲನೆ ಮಾಡಬೇಕು ಎಂದು ಹೇಳಿದರು. ಈ ಕೊರೋನಾ ರೋಗಾಣು ನಿವಾರಣೆಗಾಗಿ ಯೋಗ, ಧ್ಯಾನ ಮಾಡುವುದು ಒಂದು ರೀತಿಯ ಪರಿಹಾರ ಎಂಬುದನ್ನು ತಿಳಿಸಿದರು.
‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ಮಹಿಳಾ ಸಬಲೀಕರಣದ ಆಶಯದ ಸ್ಪರ್ಧೆಗೆ ದಶಕದ ಸಂಭ್ರಮ
ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ ಬರುತ್ತಿರುವ ಆಸ್ಟ್ರಲ್ ಪೇಜೆಂಟ್ಸ್ ತನ್ನ 10ನೇ ಎಡಿಷನ್ನ್ನು ಅದ್ದೂರಿಯಾಗಿ ಪೂರ್ಣಗೊಳಿಸಿತು. ನಗರದ ಕಿಂಗ್ಸ್ ಮೆಡೋಸ್ನಲ್ಲಿ...








