Irfan Pathan | ಆಗ ಗೌತಮ್.. ಈಗ ಅಯ್ಯರ್.. ಈ ಸಲ ಕಪ್ ಕೊಲ್ಕತ್ತಾದೆ..!!
ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೇಲೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
“ಶ್ರೇಯಸ್ ಅಯ್ಯರ್ ಅವರ ನಾಯಕತ್ವ ಅತ್ಯುತ್ತಮವಾಗಿದೆ. ಅವರು 2018 ರ ಋತುವಿನಲ್ಲಿ ದೆಹಲಿಯ ನಾಯಕತ್ವವನ್ನು ವಹಿಸಿಕೊಂಡಾಗ ಅವರಿಗೆ ಹೆಚ್ಚಿನ ಅನುಭವವಿರಲಿಲ್ಲ.
ಆದರೆ ಈಗ ಅಯ್ಯರ್ ಆತ್ಮವಿಶ್ವಾಸದ ಜೊತೆಗೆ ಅನುಭವವನ್ನೂ ಗಳಿಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಯ್ಯರ್ ಕೆಲವು ಅತ್ಯುತ್ತಮ ತಂತ್ರಗಳೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.
ಈ ಪಂದ್ಯದಲ್ಲಿ ಪಂಜಾಬ್ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿತು. ಆದ್ರೆ ಉಮೇಶ್ ಯಾದವ್ ಮೊದಲ ವಿಕೆಟ್ ಪಡೆದ ಬಳಿಕ ಅಯ್ಯರ್ ಚೆಂಡನ್ನು ಮಾವಿಗೆ ನೀಡಿದರು. ಮಾವಿ ಸಾಕಷ್ಟು ರನ್ ಗಳನ್ನು ನೀಡಿದ್ರೂ ರಾಜಪಕ್ಸೆ ವಿಕೆಟ್ ಪಡೆದರು.
ನಂತರ ವರುಣ್ ಚಕ್ರವರ್ತಿಯೊಂದಿಗೆ ಬೌಲಿಂಗ್ ಮಾಡಿಸಿ ಪಂಜಾಬ್ ಮೇಲೆ ಒತ್ತಡ ಹೇರಿದರು. ಇಲ್ಲಿ ನಾವು ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಕೌಶಲ್ಯವನ್ನು ನೋಡಬಹುದು.
ಅಯ್ಯರ್ ನೇತೃತ್ವದ ಕೆಕೆಆರ್ ತಂಡವನ್ನು ಸೋಲಿಸುವುದು ಇತರ ತಂಡಗಳಿಗೆ ಸುಲಭವಲ್ಲ. ಕೆಕೆಆರ್ ತಂಡ ತುಂಬಾ ಗಟ್ಟಿಯಾಗಿ ಕಾಣುತ್ತಿದೆ.
ಗೌತಮ್ ಗಂಭೀರ್ ನಂತರ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡ ಖಂಡಿತವಾಗಿಯೂ ಪ್ರಶಸ್ತಿ ಗೆಲ್ಲಲಿದೆ ಎಂದು ಇರ್ಫಾನ್ ಪಠಾಣ್ ಭವಿಷ್ಯ ನುಡಿದಿದ್ದಾರೆ.
irfan-pathan-reaction on shreyas iyer captaincy









