ಭಾರತದ ಮೊಟ್ಟಮೊದಲ ವನ್ಯಜೀವಿ ಚಿತ್ರ ವೈಲ್ಡ್ ಕರ್ನಾಟಕ ಶೀಘ್ರದಲ್ಲೇ ಕಿರುತೆರೆಯಲ್ಲಿ ಪ್ರಸಾರಾಗಲಿದೆ ಅದೂ ನಮ್ಮ ಭಾಷೆಯಲ್ಲಿಯೇ . ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ‘ಡಿಸ್ಕವರಿ ಚಾನೆಲ್’ಗಾಗಿ ನಿರ್ಮಾಣ ಮಾಡಲಾಗಿದ್ದ ಈ ಸಾಕ್ಷ್ಯಚಿತ್ರ ಕೆಲ ತಿಂಗಳ ಹಿಂದೆ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು.
ಅಮೋಘವರ್ಷ ಜೆ.ಎಸ್, ಕಲ್ಯಾಣ್ ವರ್ಮಾ, ಶರತ್ ಚಂಪಾತಿ, ವಿಜಯ್ ಮೋಹನ್ ರಾಜ್ ನಿರ್ದೇಶಿಸಿದ್ದ ‘ವೈಲ್ಡ್ ಕರ್ನಾಟಕ’ಕ್ಕೆ ರಿಕ್ಕಿ ಕೇಜ್ ಸಂಗೀತ ನೀಡಿದ್ದರು. ಆಡಮ್ ಕಿರ್ಬಿ ಸಂಕಲನ ಮಾಡಿದ್ದ, ಸಾಕ್ಷ್ಯಚಿತ್ರ ಖ್ಯಾತ ನೈಸರ್ಗಿಕ ಇತಿಹಾಸಕಾರ ಸರ್ ಡೇವಿಡ್ ಅಟೆನ್ಬರೋ ನಿರೂಪಣೆ ಮಾಡಿದ್ದರು.
ಇನ್ನು ಕರ್ನಾಟಕದ ಹೆಮ್ಮೆ ಎಂದೇ ಪರಿಗಣಿಸಲಾಗಿರುವ ‘ವೈಲ್ಡ್ ಕರ್ನಾಟಕ’ ಸಾಕ್ಷ್ಯಚಿತ್ರ ಜೂನ್ 5ರ ರಾತ್ರಿ 8 ಗಂಟೆಗೆ ಡಿಸ್ಕವರಿ ಚಾನೆಲ್ ಮತ್ತು ಅನಿಮಲ್ ಪ್ಲಾನೆಟ್ ವಾಹಿನಿಗಳಲ್ಲಿ ಪ್ರಸಾರವಾಗಲಿದೆ. ಕನ್ನಡದಲ್ಲಿ ರಿಷಬ್ ಶೆಟ್ಟಿ ಧ್ವನಿ ನೀಡಿದ್ದಾರೆ.
The forest dpt of Karnataka is undertaking grt efforts, despite ongoing urban development & increasing population, to ensure wildlife thrives in #WildKarnataka @DiscoveryIn @kalyanvarma @DiscoveryPlusIn @amoghavarsha @wildkarnataka Proud to have narrated in mother tongue Kannada pic.twitter.com/n9GF1r2CJu
— Rishab Shetty (@shetty_rishab) May 26, 2020
ಹೆಮ್ಮೆ ಎನಿಸುತ್ತಿದೆ ಎಂದು ರಿಷಬ್ ಟ್ವೀಟ್
‘ವೈಲ್ಡ್ ಕರ್ನಾಟಕ’ ಖ್ಯಾತ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರ ನಿರೂಪಣೆಯಲ್ಲಿ ಕನ್ನಡಿಗರಿಗೆ ಸಿಗಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ನಗರಗಳ ಅಭಿವೃದ್ಧಿ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯ ನಡುವೆಯೂ ನಮ್ಮ ವನ್ಯಜೀವಿ ಸಂಪತ್ತನ್ನು ಉಳಿಸಲು ಕರ್ನಾಟಕ ಅರಣ್ಯ ಇಲಾಖೆ ಮಹತ್ತರ ಪ್ರಯತ್ನ ನಡೆಸುತ್ತಿದೆ. ನಮ್ಮ ತಾಯ್ನುಡಿ ಕನ್ನಡದಲ್ಲಿ ನಿರೂಪಣೆ ಮಾಡಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
ಇನ್ನು ತೆಲುಗು ಮತ್ತು ತಮಿಳಿನಲ್ಲಿ ಪ್ರಕಾಶ್ ರೈ ಅವರ ನಿರೂಪಣೆಯಲ್ಲಿ ಸಾಕ್ಷ್ಯಚಿತ್ರ ಪ್ರಸಾರವಾಗಲಿದೆ. ‘ನಿಸರ್ಗದ ಧ್ವನಿಯಾಗುವುದರಲ್ಲಿ ಒಂದು ಅರ್ಥಪೂರ್ಣ ಪ್ರಯಾಣ’ ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.








