ಮಂಗಳೂರು : ಮುಂಬೈನಿಂದ ಬಂದ ಇಡೀ ಕುಟುಂಬಕ್ಕೆ ಕೊರೊನಾ ವಕ್ಕರಿಸಿದೆ. ಮುಂಬೈನಿಂದ ಒಟ್ಟಿಗೆ ಆಗಮಿಸಿದ್ದ ಕುಟುಂಬ ತಂದೆ, ತಾಯಿ, ಇಬ್ಬರು ಮಕ್ಕಳಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಮತ್ತೊಂದು ಕುಟುಂಬದ ಮೂವರಿಗೆ ಕೊರೊನಾ ಸೋಂಕು ತಗುಲಿದ್ದು, ಮತ್ತೊಂದು ದಂಪತಿಗೂ ಮಹಾಮಾರಿ ವಕ್ಕರಿಸಿದೆ. ಮೂವರಿಗೆ ಮಾತ್ರ ಒಬ್ಬೊಬ್ಬರಿಗೆ ಸೋಂಕು ಪತ್ತೆಯಾಗಿದೆ. ಈ ನಾಲ್ವರ ಕುಟುಂಬ ಉಳ್ಳಾಲದ ಕ್ವಾರೆಂಟೈನ್ ಸೆಂಟರ್ ನಲ್ಲಿ ಕ್ವಾರಂಟೈನ್ ಆಗಿತ್ತು. ಮತ್ತೊಂದು ಕುಟುಂಬದ ಮೂವರಿಗೆ ಸೋಂಕು ಪತ್ತೆಯಾಗಿದ್ದು, ಪುತ್ತೂರಿನ ಕ್ವಾರಂಟೈನ್ ಸೆಂಟರ್ನಲ್ಲಿ ಗಂಡ, ಹೆಂಡತಿ ಮತ್ತು ಮಗು ಇದ್ದರು. ಉಳ್ಳಾಲದಲ್ಲಿ ಕ್ವಾರೆಂಟೈನ್ ಆಗಿದ್ದ ಗಂಡ ಮತ್ತು ಹೆಂಡತಿಗೂ ಕೊರೊನಾ ಸೋಂಕು ದೃಢವಾಗಿದ್ದು, ಬೆಳ್ತಂಗಡಿ ಕ್ವಾರಂಟೈನ್ ಸೆಂಟರ್ ಮತ್ತು ಗುಜರಾತ್ ನಿಂದ ಆಗಮಿಸಿ ಉಳ್ಳಾಲದಲ್ಲಿ ಕ್ವಾರೆಂಟೈನ್ ಇದ್ದವರಿಗೆ ಸೋಂಕು ತಗುಲಿದೆ.
ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್
ಬೆಂಗಳೂರು: ನೈಸ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನದ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಮರ ಸಾರಿದ ಬೆನ್ನಲ್ಲೇ,ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಷ್ಟೇ...








