ರಾಜಸ್ಥಾನದ ಜೋಧ್ ಪುರ್ ನಲ್ಲಿ ಈದ್ ಗೂ ಮೊದಲು ಕಲ್ಲು ತುರಾಟ – ಶಾಂತಿ ಕಾಪಾಡುವಂತೆ ಸಿ ಎಂ ಮನವಿ
ಕಳೆದ ರಾತ್ರಿ ರಾಜಸ್ಥಾನದ ಜೋಧ್ಪುರ ನಗರದಲ್ಲಿ ಎರಡು ಕೋಮುಬಣಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ಜಲೋರಿ ಗೇಟ್ನಲ್ಲಿ ಒಂದು ಧ್ವಜವನ್ನ ತೆಗೆದು ಮತ್ತೊಂದು ಧ್ವಜ ಕಟ್ಟುವ ವಿಚಾರದಲ್ಲಿ ವಿವಾದ ಏರ್ಪಟ್ಟಿದೆ.
ಬಳಿಕ ಎರಡೂ ಕಡೆಯಿಂದ ಕಲ್ಲು ತೂರಾಟ ಆರಂಭವಾಯಿದೆ. ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನ ಹತೋಟಿಗೆ ತಂದಿದ್ದಾರೆ. ಕಲ್ಲು ತೂರಾಟದಲ್ಲಿ ಡಿಸಿಪಿ ಭುವನ್ ಭೂಷಣ್ ಯಾದವ್, ಎಸ್ಎಚ್ಒ ಅಮಿತ್ ಸಿಹಾಗ್ ಮತ್ತು ಕೆಲವು ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.
ಇಂದು ಆಚರಿಸಲಾಗುತ್ತಿರುವ ಈದ್ ಮತ್ತು ಅಕ್ಷಯ ತೃತೀಯ ಹಬ್ಬದ ಹಿಂದಿನ ರಾತ್ರಿ ನಡೆದ ಗಲಾಟೆ ತಡೆಯಲು ನಗರದಲ್ಲಿ ಇಂಟರ್ ನೆಟ್ ಸೇವೆಯನ್ನ ಸ್ಥಗಿತಗೊಳಿಸಲಾಗಿದೆ. ಕಲ್ಲು ತೂರಾಟದಲ್ಲಿ ಹಲವರು ಗಾಯಗೊಂಡಿರುವ ವರದಿಗಳಿವೆ. ನಗರದಲ್ಲಿ ಉದ್ವಿಗ್ನ ವಾತಾವರಣವಿದ್ದರೂ ಶಾಂತವಾಗಿದೆ. ಎರಡೂ ಕಡೆಯ ಜನರು ಸೌಹಾರ್ದತೆ ಕಾಪಾಡಿ ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ಜೋಧ್ಪುರ ಜಿಲ್ಲಾಡಳಿತ ಮನವಿ ಮಾಡಿದೆ.
ಜೋಧ್ಪುರ ಆಡಳಿತವು ಮಂಗಳವಾರ ಬೆಳಿಗ್ಗೆ ಈದ್ ಪ್ರಾರ್ಥನೆಗಾಗಿ ಬಿಗಿ ಭದ್ರತೆಯನ್ನ ಹೆಚ್ಚಿಸಿದೆ.
ಜೋಧಪುರದ ಜಲೌರಿ ಗೇಟ್ ಪ್ರದೇಶದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯು ಉದ್ವಿಗ್ನತೆಯನ್ನು ಸೃಷ್ಟಿಸಿರುವುದು ದುರದೃಷ್ಟಕರ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ. ಎಲ್ಲ ರೀತಿಯಲ್ಲೂ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ಜೋಧ್ಪುರದಲ್ಲಿ ಪ್ರೀತಿ ಮತ್ತು ಸಹೋದರತ್ವದ ಸಂಪ್ರದಾಯವನ್ನು ಗೌರವಿಸಿ, ಶಾಂತಿಯನ್ನು ಕಾಪಾಡಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ರಚಿಸಲು ಸಹಕರಿಸುವಂತೆ ನಾನು ಎಲ್ಲಾ ಪಕ್ಷಗಳಿಗೆ ಮನಮುಟ್ಟುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.