“ಕೇಜ್ರಿವಾಲ್ ಪಿಎಂ ಆಗಬೇಕು” ಎಂದ ಭಾಸ್ಕರ್ ರಾವ್ ಹೇಳಿಕೆಗೆ ಬಿಜೆಪಿ ತಿರುಗೇಟು
ಬೆಂಗಳೂರು : ಪಂಜಾಬಿನ 2.5 ತಿಂಗಳ ಆಡಳಿತದಲ್ಲೇ ಕೇಜ್ರಿವಾಲ್ ಪಕ್ಷದ ಸಾಧನೆ ಬಹಿರಂಗವಾಗಿದೆ. ರೈತರ ಆತ್ಮಹತ್ಯೆ, ರೈತರ ಬಂಧನ, ಕಲಾವಿದರ, ಕ್ರೀಡಾಪಟುಗಳ ಹತ್ಯೆ ಇದೇ ಆಪ್ ಸಾಧನೆ! ಇಂತಹ ಪಕ್ಷದ ಮುಖ್ಯಸ್ಥ ದೇಶದ ಪ್ರಧಾನಿಯಾದರೆ, ದೇಶದ ಗತಿ ಏನಾಗಬಹುದು? ಭಾಸ್ಕರ್ ರಾವ್ ಅವರೇ, ಬಿಟ್ಟಿ ಯೋಜನೆಗಳ ಘೋಷಣೆಯೇ ಸಮಾಜ ಪರಿವರ್ತನೆಯೇ ಎಂದು ರಾಜ್ಯ ಬಿಜೆಪಿ ಘಟಕ ಪ್ರಶ್ನಿಸಿದೆ.
“ಕೇಜ್ರಿವಾಲ್ ಪಿಎಂ ಆಗಬೇಕು” ಎಂಬ ಭಾಸ್ಕರ್ ರಾವ್ ಹೇಳಿಕೆಗೆ ರಾಜ್ಯ ಬಿಜೆಪಿ ಘಟಕ ತಿರುಗೇಟು ನೀಡಿದೆ.

ಬಿಜೆಪಿ ತನ್ನ ಟ್ವಿಟ್ಟರ್ ನಲ್ಲಿ…
ಮಾದಕದ್ರವ್ಯ ವ್ಯಸನದಿಂದ ಕಳೆದ 2.5 ತಿಂಗಳಲ್ಲಿ 60 ಕ್ಕೂ ಹೆಚ್ಚು ಜನರು ಪಂಜಾಬಿನಲ್ಲಿ ಸಾವಿಗೀಡಾಗಿದ್ದಾರೆ, ಅಂದರೆ ದಿನಕ್ಕೆ ಸರಾಸರಿ ಒಂದು ಸಾವು! ಯುವ ಜನಾಂಗ, ಈ ರೀತಿಯ ವ್ಯಸನದಿಂದ ಸಾವನ್ನಪ್ಪುತ್ತಿರುವುದು ಅತ್ಯಂತ ಖೇದ. ಅಂಗೈಯಲ್ಲಿ ಅರಮನೆ ತೋರಿಸಿದ ಕೇಜ್ರಿವಾಲ್ ಪಕ್ಷ ಈಗ ಜನತೆಗೆ ನರಕ ದರ್ಶನ ಮಾಡಿಸುತ್ತಿದೆ.
ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ಸಿಂಗ್ ನಂಗಲ್ ಅವರನ್ನು ಮಾರ್ಚ್ ತಿಂಗಳಲ್ಲಿ ಮೈದಾನದಲ್ಲಿಯೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಎಪ್ರಿಲ್ ತಿಂಗಳಲ್ಲಿ ಮತ್ತೋರ್ವ ಕಬಡ್ಡಿ ಆಟಗಾರ ಧರ್ಮೇಂದರ್ ಸಿಂಗ್ ಕೊಲೆಯಾದರು. ಕೇಜ್ರಿವಾಲ್ ಆಡಳಿತದಲ್ಲಿ ಕ್ರೀಡಾಳುಗಳ ಜೀವಕ್ಕೆ ಬೆಲೆಯೇ ಇಲ್ಲವೇ?
ಪ್ರಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಕೇಜ್ರಿವಾಲ್ ಆಡಳಿತದಲ್ಲಿ ಕಲಾವಿದರ ಜೀವಕ್ಕೆ ಬೆಲೆಯಿಲ್ಲವೇ ಎಂದು ಬಿಜೆಪಿ ಪ್ರಶ್ನಿಸಿದೆ.
ಆಪ್ ಆಡಳಿತದಲ್ಲಿ 240 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಸಾವಿರಾರು ರೈತರನ್ನು ಜೈಲಿಗಟ್ಟಲಾಗಿದೆ.
ಇಂತಹ ಪಕ್ಷದ ಮುಖಂಡ ಪ್ರಧಾನಿಯಾಗಬೇಕೆಂದು ರಾಜ್ಯದ ಕೆಲವರು ಕನವರಿಸುತ್ತಿದ್ದಾರೆ!
ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಅಧಿಕಾರ ಹಿಡಿದು, ಈಗ ತಾವೇ ಭ್ರಷ್ಟಾಚಾರದಲ್ಲಿ ತೊಡಗಿರುವುದು ದುರಂತವೇ ಸರಿ.#KejriwalExposed
— BJP Karnataka (@BJP4Karnataka) May 31, 2022
ಆಪ್ ಆಡಳಿತದಲ್ಲಿ 240 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಸಾವಿರಾರು ರೈತರನ್ನು ಜೈಲಿಗಟ್ಟಲಾಗಿದೆ. ಇಂತಹ ಪಕ್ಷದ ಮುಖಂಡ ಪ್ರಧಾನಿಯಾಗಬೇಕೆಂದು ರಾಜ್ಯದ ಕೆಲವರು ಕನವರಿಸುತ್ತಿದ್ದಾರೆ! ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಅಧಿಕಾರ ಹಿಡಿದು, ಈಗ ತಾವೇ ಭ್ರಷ್ಟಾಚಾರದಲ್ಲಿ ತೊಡಗಿರುವುದು ದುರಂತವೇ ಸರಿ.
ಪಂಜಾಬಿನ 2.5 ತಿಂಗಳ ಆಡಳಿತದಲ್ಲೇ ಕೇಜ್ರಿವಾಲ್ ಪಕ್ಷದ ಸಾಧನೆ ಬಹಿರಂಗವಾಗಿದೆ. ರೈತರ ಆತ್ಮಹತ್ಯೆ, ರೈತರ ಬಂಧನ, ಕಲಾವಿದರ, ಕ್ರೀಡಾಪಟುಗಳ ಹತ್ಯೆ ಇದೇ ಆಪ್ ಸಾಧನೆ! ಇಂತಹ ಪಕ್ಷದ ಮುಖ್ಯಸ್ಥ ದೇಶದ ಪ್ರಧಾನಿಯಾದರೆ, ದೇಶದ ಗತಿ ಏನಾಗಬಹುದು? ಭಾಸ್ಕರ್ ರಾವ್ ಅವರೇ, ಬಿಟ್ಟಿ ಯೋಜನೆಗಳ ಘೋಷಣೆ ಸಮಾಜ ಪರಿವರ್ತನೆಯೇ ಎಂದು ಪ್ರಶ್ನೆ ಮಾಡಿದೆ.
ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ಸಿಂಗ್ ನಂಗಲ್ ಅವರನ್ನು ಮಾರ್ಚ್ ತಿಂಗಳಲ್ಲಿ ಮೈದಾನದಲ್ಲಿಯೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಎಪ್ರಿಲ್ ತಿಂಗಳಲ್ಲಿ ಮತ್ತೋರ್ವ ಕಬಡ್ಡಿ ಆಟಗಾರ ಧರ್ಮೇಂದರ್ ಸಿಂಗ್ ಕೊಲೆಯಾದರು.
ಕೇಜ್ರಿವಾಲ್ ಆಡಳಿತದಲ್ಲಿ ಕ್ರೀಡಾಳುಗಳ ಜೀವಕ್ಕೆ ಬೆಲೆಯೇ ಇಲ್ಲವೇ?#KejriwalExposed
— BJP Karnataka (@BJP4Karnataka) May 31, 2022








