IND vs IRE : ದಿನೇಶ್ ಕಾರ್ತಿಕ್ ಅಂದ್ರೆ ಐರ್ಲೆಂಡ್ ಗೆ ಭಯ
ಐರ್ಲೆಂಡ್ ವಿರುದ್ಧದ ಎರಡು ಮ್ಯಾಚ್ ಗಳ ಸರಣಿಗೆ ಟೀಂ ಇಂಡಿಯಾ ಸಜ್ಜಾಗಿದೆ.
ಭಾನುವಾರ ಡಬ್ಲಿನ್ ವೇದಿಕೆಯಾಗಿ ಇಂದು ಮೊದಲ ಟಿ 20 ಪಂದ್ಯ ನಡೆಯಲಿದೆ.
ಆದ್ರೆ ಈ ಜಿದ್ದಾಜಿದ್ದಿನಲ್ಲಿ ಟೀಂ ಇಂಡಿಯಾ ಗೆಲ್ಲುವ ಫೇವರೇಟ್ ತಂಡವಾಗಿದೆ.
ಭಾರತಕ್ಕೆ ಟಫ್ ಕಾಂಪಿಟೇಷನ್ ನೀಡಬೇಕು ಎಂದು ಐರ್ಲೆಂಡ್ ಪ್ಲಾನ್ ಮಾಡಿಕೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ಟೀ ಇಂಡಿಯಾಗೆ ಖೆಡ್ಡಾ ತೋಡಲು ಐರ್ಲೆಂಡ್ ಪ್ರಣಾಳಿಕೆ ರೆಡಿ ಮಾಡಿದೆ.
ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಸಂಜು ಸ್ಯಾಮ್ಸನ್ ಅವರನ್ನು ಬೇಗ ಔಟ್ ಮಾಡಬೇಕು ಎಂದು ಐರ್ಲೆಂಡ್ ಆಲ್ ರೌಂಡರ್ ಮಾರ್ಕ್ ಅಡೈರ್ ಭಾವಿಸಿದ್ದಾರೆ.
ಟೀಂ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಸಂಜು ಸ್ಯಾಮ್ಸನ್ ರಂತಹ ವಿಧ್ವಂಸಕ ಆಟಗಾರರಿದ್ದಾರೆ.
ಅವರು ಎಂತಹ ಪರಿಸ್ಥಿತಿಯಲ್ಲಾದ್ರೂ ಉತ್ತಮವಾಗಿ ಬ್ಯಾಟ್ ಬೀಸಬಲ್ಲರು.
ಮುಖ್ಯವಾಗಿ ದಿನೇಶ್ ಕಾರ್ತಿಕ್ ಭೀಕರ ಫಾರ್ಮ್ ನಲ್ಲಿದ್ದಾರೆ.
ಕಳೆದ ಕೆಲವು ಮ್ಯಾಚ್ ಗಳಲ್ಲಿ ಕಾರ್ತಿಕ್ ಅಬ್ಬರ ನಾವು ನೋಡಿದ್ದೇವೆ.
ಈ ಪಂದ್ಯದಲ್ಲಿ ಈ ಮೂವರು ವಿಫಲವಾದ್ರೆ ಗೆಲುವು ನಮ್ಮದೇ.
ಹೀಗಾಗಿ ನಾವು ಅವರನ್ನು ಆದಷ್ಟು ಬೇಗ ಔಟ್ ಮಾಡಲು ಬಯಸುತ್ತೇವೆ ಎಂದು ಅಡೈರ್ ಹೇಳಿದ್ದಾರೆ.