Karnataka | ಸಿಎಂ ಒಂದು ತೀರ, ಮಂತ್ರಿಗಳು ಇನ್ನೊಂದು ತೀರ
ಬೆಂಗಳೂರು : ಬಸವರಾಜ ಬೊಮ್ಮಾಯಿ ಅವರೇ, ಆ ತೀರದಿಂದ ಈ ತೀರಕ್ಕೆ ಜಿಗಿದಿದ್ದೇಕೆ ? ಅರ್ಥಾತ್, ಬಿ.ಎಸ್. ಯಡಿಯೂರಪ್ಪ ಅವರ ತೀರದಿಂದ ಬಿ.ಎಲ್.ಸಂತೋಶ್ ಅವರ ತೀರಕ್ಕೆ ಶಿಫ್ಟ್ ಆಗಿದ್ದೀರಲ್ಲವೇ? ತಾವು ತೀರದಲ್ಲಿ ನಿಂತು @BSYBJP ಅವರನ್ನು ನೀರಲ್ಲಿ ಉರುಳಿಸಿದ್ದೀರಲ್ವಾ? ಎಂದು ಕರ್ನಾಟಕ ಕಾಂಗ್ರೆಸ್ ಘಟಕ ಪ್ರಶ್ನಿಸಿದೆ.
ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ದಲಿತರ ಪಾಲಿನ ಗಂಗಾ ಕಲ್ಯಾಣದಲ್ಲಿ 431 ಕೋಟಿ ಲೂಟಿ. ದಲಿತರ ಪಾಲಿನ 7000 ಕೋಟಿ ಅನುದಾನಕ್ಕೆ ಕನ್ನ. ದಲಿತ ವಿದ್ಯಾರ್ಥಿ ನಿಲಯದ ನಿವೇಶನವನ್ನು ಬಿಜೆಪಿ ಕಚೇರಿಗೆ ಕಬಳಿಕೆ. ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಕಡಿತ. ದಲಿತರ ಪಾಲಿನ ನಿಗಮಗಳಿಗೆ ಅನುದಾನ ಕಡಿತ. ದಲಿತರನ್ನು ದಮನಿಸುತ್ತಿದೆ ಬಿಜೆಪಿ ಎಂದು ಕಿಡಿಕಾರಿದೆ.
'@BSBommai ಅವರೇ, ಆ ತೀರದಿಂದ ಈ ತೀರಕ್ಕೆ ಜಿಗಿದಿದ್ದೇಕೆ?
ಅರ್ಥಾತ್, @BSYBJP ಅವರ ತೀರದಿಂದ @blsanthosh ಅವರ ತೀರಕ್ಕೆ ಶಿಫ್ಟ್ ಆಗಿದ್ದೀರಲ್ಲವೇ?
ತಾವು ತೀರದಲ್ಲಿ ನಿಂತು @BSYBJP ಅವರನ್ನು ನೀರಲ್ಲಿ ಉರುಳಿಸಿದ್ದೀರಲ್ವಾ?
ಹಾಗೆಯೇ, ಸಿಎಂ ಒಂದು ತೀರ, ಮಂತ್ರಿಗಳು ಇನ್ನೊಂದು ತೀರ ಎಂಬಂತಾಗಿರುವುದನ್ನು ಸರಿಪಡಿಸಿಕೊಳ್ಳಿ.#BJPvsBJP
— Karnataka Congress (@INCKarnataka) July 20, 2022
ಇನ್ನು ಬಿಜೆಪಿ ಸರ್ಕಾರ ದಲಿತರ ಏಳಿಗೆಗೆ ಶ್ರಮಿಸುವುದಿರಲಿ ದಲಿತರ ಅಸ್ತಿತ್ವವನ್ನೇ ನಾಶ ಮಾಡಲು ಹುನ್ನಾರ ನಡೆಸಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ನಮ್ಮ ಸರ್ಕಾರ ಪರಿಚಯಿಸಿದ SCP/ TSPಯ 7000ಕೋಟಿ ಅನುದಾನವನ್ನು ಬೇರೆಡೆಗೆ ವರ್ಗಾಯಿಸಿ ಅನ್ಯಾಯವೆಸಗಿ, ಈಗ ದಲಿತ ವಿದ್ಯಾರ್ಥಿಗಳ ಪಾಲಿನ ನಿವೇಶನವನ್ನೂ ಕಬಳಿಸುತ್ತಿದೆ ಬಿಜೆಪಿ
ಬಸವರಾಜ ಬೊಮ್ಮಾಯಿ ಅವರೇ, ಆ ತೀರದಿಂದ ಈ ತೀರಕ್ಕೆ ಜಿಗಿದಿದ್ದೇಕೆ? ಅರ್ಥಾತ್, ಬಿ.ಎಸ್. ಯಡಿಯೂರಪ್ಪ ಅವರ ತೀರದಿಂದ ಬಿ.ಎಲ್.ಸಂತೋಶ್ ಅವರ ತೀರಕ್ಕೆ ಶಿಫ್ಟ್ ಆಗಿದ್ದೀರಲ್ಲವೇ? ತಾವು ತೀರದಲ್ಲಿ ನಿಂತು @BSYBJP ಅವರನ್ನು ನೀರಲ್ಲಿ ಉರುಳಿಸಿದ್ದೀರಲ್ವಾ? ಹಾಗೆಯೇ, ಸಿಎಂ ಒಂದು ತೀರ, ಮಂತ್ರಿಗಳು ಇನ್ನೊಂದು ತೀರ ಎಂಬಂತಾಗಿರುವುದನ್ನು ಸರಿಪಡಿಸಿಕೊಳ್ಳಿ.
ಬಿಜೆಪಿ ಸರ್ಕಾರ ದಲಿತರ ಏಳಿಗೆಗೆ ಶ್ರಮಿಸುವುದಿರಲಿ ದಲಿತರ ಅಸ್ತಿತ್ವವನ್ನೇ ನಾಶ ಮಾಡಲು ಹುನ್ನಾರ ನಡೆಸಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ.
ನಮ್ಮ ಸರ್ಕಾರ ಪರಿಚಯಿಸಿದ SCP/ TSPಯ 7000ಕೋಟಿ ಅನುದಾನವನ್ನು ಬೇರೆಡೆಗೆ ವರ್ಗಾಯಿಸಿ ಅನ್ಯಾಯವೆಸಗಿ, ಈಗ ದಲಿತ ವಿದ್ಯಾರ್ಥಿಗಳ ಪಾಲಿನ ನಿವೇಶನವನ್ನೂ ಕಬಳಿಸುತ್ತಿದೆ ಬಿಜೆಪಿ#ದಲಿತವಿರೋಧಿಬಿಜೆಪಿ
— Karnataka Congress (@INCKarnataka) July 20, 2022
PSI ಹಗರಣದಲ್ಲಿ ಕೋಟಿ ಕೋಟಿ ಲೂಟಿ ಮಾಡಲು ಹಣವಿದೆ, ಕಾಮಗಾರಿಗಳಲ್ಲಿ 40% ಕಮಿಷನ್ ದೋಚಲು ಹಣವಿದೆ.ಆದರೆ ಜನೋಪಯೋಗಿ ಕೆಲಸಗಳನ್ನು ಕೇಳಿದಾಗ ‘ಬೊಕ್ಕಸದಲ್ಲಿ ಹಣವಿಲ್ಲ’ ಎಂಬ ಸರ್ಕಾರದ ಸಿದ್ದ ಉತ್ತರ ತಯಾರಿರುತ್ತದೆ.ನೆರೆ ಸಂತ್ರಸ್ತರಿಗೆ ಇದುವರೆಗೂ ಪ್ಯಾಕೇಜ್ ಘೋಷಿಸಲಿಲ್ಲ, ಕೇಂದ್ರದ ನೆರವೂ ಬರಲಿಲ್ಲ.ಇದೇನಾ ಡಬಲ್ ಇಂಜಿನ್ಗಳ – “ವಿಕಾಸ್” ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.








