kangana ranaut: ಮುಖಾ ನೋಡಿಯೂ ಕಂಗಾನಳನ್ನ ನಿರ್ಲಕ್ಷಿಸಿ ಜಯಾ ಬಚ್ಚನ್…
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಮುಂಬರುವ ‘ಉಚೈ’ ಚಿತ್ರದ ವಿಶೇಷ ಪ್ರದರ್ಶನವನ್ನ ಬುಧವಾರ ನಡೆಯಿತು. ಈ ಕಂಗಾನ ರಣಾವತ್ ಅಭಿಷೇಕ್ ಬಚ್ಚನ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕಂಗಾನ ಮತ್ತು ಜಯ ಬಚ್ಚನ್ ನಡುವಿನ ಮುಸುಕಿನ ಗುದ್ದಾಟ ವಿಡಿಯೋದಲ್ಲಿ ಸೆರೆಯಾಗಿದೆ. ಜಯಾ ಬಚ್ಚನ್ ಉದ್ದೇಶಪೂರ್ವಕವಾಗಿ ಕಂಗನಾ ಅವರನ್ನ ನಿರ್ಲಕ್ಷಿಸುತ್ತಿರುವುದನ್ನ ಕಾಣಬಹುದು.
ಜಯಾ ಬಚ್ಚನ್ ಮೊದಲಿ ಸ್ಕ್ರೀನಿಂಗ್ ತಲುಪಿದಾಗ ಅವರ ಹಿಂದೆ ಕಂಗಾನ ಕೂಡ ಕಾಣಿಸಿಕೊಂಡರು
ಪಾಪಾರಾಜಿಗಳು ಕಂಗನಾ ಕಂಗನಾ ಕೂಗಿದರು. ಜಯಾ ಕಂಗಾನ ಅವರನ್ನ ಕಡೆಗಣಿಸಿ ಭಾಗ್ಯಶ್ರೀ ಅವರನ್ನ ಅಪ್ಪಿಕೊಂಡರು. ನಂತರ ಕಂಗಾನ ನಮಸ್ತೆ ಮಾಡಿದರೂ ಜಯಾ ಯಾವುದೇ ಪ್ರತಿಕ್ರಿಯೇ ಕೊಡದೆ ಮುಂದೆ ಹೋಗಿ ಅನುಪಮ್ ಖೇರ್ ಅವರನ್ನ ಭೇಟಿಯಾಗುತ್ತಾರೆ.
ಇದಕ್ಕೂ ಕಾರಣವಿದೆ ಹಿಂದೆ ಸುಶಾಂತ್ ಸಿಂಗ್ ಸಾವನ್ನಪ್ಪಿದಾಗ ಕಂಗಾನ ಬಾಲಿವುಡ್ ದೂಷಿಸಲು ಶುರು ಮಾಡಿದ್ದರು. ಬಾಲಿವುಡ್ ಮಾಫಿಯಾ ಮತ್ತು ವಂಶಪಾರಂಪರೆ ಬಗ್ಗೆ ದೂಷಿಸಿದ್ದರು. ಈ ಮಾತು ಜಯ ಬಚ್ಚನ್ ಅವರನ್ನ ಕೆರಳಿಸಿತ್ತು. ಆನಂತರ ಇವರಿಬ್ಬರ ಮಧ್ಯೆ ಟ್ವೀಟ್ ವಾರ್ ಕೂಡ ನಡೆದಿತ್ತು. ಅಂದಿನಿಂದ ಇವರು ಮುಖಾ ಮುಖಿ ಆಗಿರಲಿಲ್ಲ. ಇದೀಗ ‘ಉಚೈ’ ಚಿತ್ರದ ಪದರ್ಶನದ ವೇಳೆ ಮುಖಾ ಮುಖಿಯಾಗಿದ್ದಾರೆ.
ಕಂಗನಾ ಮತ್ತು ಜಯಾ ಅವರಲ್ಲದೆ, ಇನ್ನೂ ಅನೇಕ ನಟರು ಚಿತ್ರದ ಪ್ರದರ್ಶನಕ್ಕೆ ಹಾಜರಾಗಿದ್ದರು. ಇದು ರಾಣಿ ಮುಖರ್ಜಿ, ಕಾಜೋಲ್, ಸಲ್ಮಾನ್ ಖಾನ್, ರಿತೇಶ್ ದೇಶಮುಖ್ ಮತ್ತು ಶೆಹನಾಜ್ ಗಿಲ್ ಅವರಂತಹ ಖ್ಯಾತನಾಮರು ಹಾಜರಿದ್ದರು. ಅಮಿತಾಬ್ ಬಚ್ಚನ್ ಮತ್ತು ನೀನಾ ಗುಪ್ತಾ ಅವರಲ್ಲದೆ, ಪರಿಣಿತಿ ಚೋಪ್ರಾ, ಅನುಪಮ್ ಖೇರ್, ಬೊಮನ್ ಇರಾನಿ, ಡ್ಯಾನಿ ಡೆನ್ಜಾಂಗ್ಪಾ ಮತ್ತು ಸಾರಿಕಾ ‘ಉಚೈ’ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸೂರಜ್ ಬರ್ಜಾತ್ಯಾ ನಿರ್ದೇಶನದ ಈ ಚಿತ್ರವು ನಾಲ್ಕು ಸ್ನೇಹಿತರ ನಡುವಿನ ಕಥೆಯಾಗಿದೆ. ಚಿತ್ರವು ನವೆಂಬರ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
kangana ranaut: Jaya Bachchan ignore her kangana ranaut








