ADVERTISEMENT
Thursday, August 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಹುಲಿಗೆ ವಯಸ್ಸಾಯ್ತು! ಅದಿನ್ನು ಮೊದಲಿನ ಹಾಗೆ ಘರ್ಜಿಸಿ ಭೇಟೆಯಾಡೋಲ್ಲ ಅಂತ ಕೆಣಕಲು ಹೋದಿರಿ ಜೋಕೆ?

admin by admin
June 12, 2020
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಹುಲಿಗೆ ವಯಸ್ಸಾಯ್ತು! ಅದಿನ್ನು ಮೊದಲಿನ ಹಾಗೆ ಘರ್ಜಿಸಿ ಭೇಟೆಯಾಡೋಲ್ಲ ಅಂತ ಕೆಣಕಲು ಹೋದಿರಿ ಜೋಕೆ?

ನಾನು ಕೆಲವು ದಿನಗಳ ಹಿಂದೆ ಸನ್ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಬಗ್ಗೆ ಒಂದು ಸಣ್ಣ ಲೇಖನ ಬರೆದಿದ್ದೆ. ‘ಅವರು ಸುಮ್ಮನೆ ಯಡಿಯೂರಪ್ಪ ಆಗಲಿಲ್ಲ’ ಎಂಬ ತಲೆಬರಹದ ಆ ಲೇಖನ ಸಾಮಾಜಿಕ ಜಾಲತಾಣಗಳೆಲ್ಲಾ ಸುತ್ತಿ ಕೊನೆಗೆ ನನಗೂ ಫಾರ್ವರ್ಡ್ ಆಗಿ ಬಂದಿತ್ತು. ಆ ಲೇಖನದಲ್ಲಿ ಯಡಿಯೂರಪ್ಪನವರ ಹೋರಾಟದ ಬದುಕು, ಅವರಲ್ಲಿನ ಗಟ್ಟಿ ನಿಲುವು, ಬದ್ಧತೆ, ಹಠ ಎಲ್ಲವನ್ನೂ ಸಂಕ್ಷಿಪ್ತವಾಗಿ ಬರೆದಿದ್ದೆ. ಅವರದೇ ಜಿಲ್ಲೆಯಿಂದ ಬಂದ ನಾನು, ಪತ್ರಿಕೋದ್ಯಮಕ್ಕೆ ಬಂದಾಗಿನಿಂದಲೂ ಅವರ ರಾಜಕಾರಣದ ಮಜಲುಗಳನ್ನು ಸೂಕ್ಷ್ಮವಾಗಿ ನೋಡುತ್ತಲೇ ಇದ್ದೇನೆ. ಕರ್ನಾಟಕದ ರಾಜಕಾರಣದ ಚರಿತ್ರೆಯಲ್ಲೇ ಅವರಂತಹ ಮಾಸ್ ಲೀಡರ್ ಮತ್ತೊಬ್ಬರಿಲ್ಲ.

Related posts

reliance-digital-india-sale-disco-offers-august-2026

ರಿಲಯನ್ಸ್ ಡಿಜಿಟಲ್ ತಂದಿದೆ ‘ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್

August 13, 2026
upendra-next-level-movie-launch-aradhana-ram-pair

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ಕನ್ನಡ – ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!

August 13, 2026

ರಾಮಕೃಷ್ಣ ಹೆಗಡೆ, ಎಸ್.ಎಂ ಕೃಷ್ಣ, ಪಟೇಲರು, ದೇವರಾಜ ಅರಸು, ಮುಂತಾದ ಯಶಸ್ವಿ ಮುಖ್ಯಮಂತ್ರಿಗಳನ್ನು ನಾವು ನೋಡಿದ್ದೇವೆ ಆದ್ರೆ ಯಡಿಯೂರಪ್ಪ ಇವರೆಲ್ಲರಿಗಿಂತ ಪ್ರಭಾವಿಯಾಗಿ ಬೆಳೆದು ನಿಂತವರು. ತಮ್ಮ ಸಮುದಾಯದ ಪ್ರಶ್ನಾತೀತ ನಾಯಕರಾಗಿ ದೈತ್ಯ ಬೆಳವಣಿಗೆ ಕಂಡವರು ಹಾಗೂ ಆನೆ ನಡೆದಿದ್ದೇ ಹಾದಿ ಎಂಬಂತೆ ರಾಜಕೀಯ ಯಾತ್ರೆ ನಡೆಸಿದವರು. ಅವರು ರಾತ್ರೋ ರಾತ್ರಿ ಪ್ರಸಿದ್ಧಿ ಪಡೆದವರಲ್ಲ; ತಮ್ಮಿಡೀ ಜೀವನವನ್ನೇ ಹೋರಾಟದ ಹಾದಿ ತುಳಿದು ಅಧಿಕಾರದ ಗಾಧಿ ಏರಿದವರು. 77 ವರ್ಷ ತುಂಬಿರುವ ಯಡಿಯೂರಪ್ಪ ತಮ್ಮ ವಯಸ್ಸನ್ನೂ ಮರೆಮಾಚಿ ಬತ್ತದ ಉತ್ಸಾಹದ ಚಿಲುಮೆಯಂತೆ ಈಗಲೂ ಕೆಲಸ ಮಾಡುತ್ತಿದ್ದಾರೆ.

ಇವತ್ತು ಅವರ ಬಗ್ಗೆ ಮತ್ತೊಂದು ಲೇಖನ ಬರೆಯಬೇಕಾದ ಅಗತ್ಯ ಬಂದಿದೆ ಅಂದರೆ ಅದಕ್ಕೊಂದು ಕಾರಣವಿದೆ. ಕೇಂದ್ರ ಬಿಜೆಪಿ ಪಾಲಿಗೆ ಬಿಎಸ್ ಯಡಿಯೂರಪ್ಪ ಎಂಬ ನೇತಾರ ಸದಾ ಮಲತಾಯಿ ಮಗ. ಕಾರಣವಿಲ್ಲದೇ ಈ ಮಾತನ್ನು ಹೇಳುತ್ತಿಲ್ಲ. ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದ್ದೇ ಕೇಂದ್ರದ ನಾಯಕರಿಗೆ ಇಷ್ಟವಾಗಲಿಲ್ಲ. ಕರ್ನಾಟಕವೆನ್ನುವ ಸಮೃದ್ಧ ಹುಲ್ಲುಗಾವಲು ಆಡಳಿತಕ್ಕೆ ಸಿಕ್ಕುತ್ತದೆ ಎನ್ನುವ ಲಾಭಕ್ಕಿಂತ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಬೇಕಲ್ಲ ಎನ್ನುವ ಸಂಕಟವೇ ನಾಯಕರನ್ನು ಬಾಧಿಸಿತ್ತು.

ಹಾಗಾಗಿ ಅವತ್ತು ಬಿಎಸ್ವೈ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಪ್ರಧಾನಿಯಾಗಲಿ ಅಥವಾ ಪ್ರಮುಖ ಮುಖಂಡರಾಗಲಿ ಬರಲಿಲ್ಲ, ಕೊನೆಗೊಂದು ಸಂಭ್ರಮಾಚರಣೆಯೂ ಆಗಲಿಲ್ಲ. ಅದಾದ ನಂತರ ಸಂಪುಟ ವಿಸ್ತರಣೆ, ಜಿಲ್ಲಾವಾರು ಉಸ್ತುವಾರಿ ಸಚಿವರ ನೇಮಕಾತಿಯನ್ನು ವಿನಾಕಾರಣ ಮುಂದೂಡಲಾಯ್ತು. ಅದೇ ವೇಳೆ ರಾಜ್ಯದ 10 ಜಿಲ್ಲೆಗಳಲ್ಲಿ ಜಲಪ್ರವಾಹ ಸಂಭವಿಸಿತು. ವಾನಪ್ರಸ್ತಾಶ್ರಮದ ವಯಸ್ಸಿನ ಯಡಿಯೂರಪ್ಪ ಹಠ ಬಿಡದೇ ಒಬ್ಬರೇ ಏಕಾಂಗಿಯಾಗಿ ನೆರೆ ಬಂದ ಕಡೆ ಸಂಚರಿಸಿ ಸಂತ್ರಸ್ತರ ಕಷ್ಟ ಸುಖ ವಿಚಾರಿಸಿಕೊಂಡರು. ಅವತ್ತು ಸರ್ಕಾರ ಅಂತಿದ್ದಿದ್ದು ಕೇವಲ ಮುಖ್ಯಮಂತ್ರಿಯಾಗಿ ಪ್ರಮಾಣವಿಧಿ ಪಡೆದುಕೊಂಡಿದ್ದ ಯಡಿಯೂರಪ್ಪ ಮಾತ್ರ.

ಕೆಲವು ದಿನಗಳ ನಂತರ ಸಂಪುಟ ವಿಸ್ತರಣೆಯೇನೋ ಆಯಿತು ಆದರೆ ಯಡಿಯೂರಪ್ಪನವರ ಅಧಿಕಾರವನ್ನು ನಿಯಂತ್ರಿಸಲು ಮೂವರು ಡಿಸಿಎಂಗಳನ್ನು ಆಯ್ಕೆ ಮಾಡಲಾಯ್ತು. ಯಡಿಯೂರಪ್ಪನವರ ಸುತ್ತಮುತ್ತ ರಾಜಕೀಯ ಕಾರ್ಯದರ್ಶಿ, ಆಡಳಿತ ಸಹಾಯಕರು, ಆಪ್ತ ಸಲಹೆಗಾರರು, ಇತ್ಯಾದಿ ಹೆಸರಿನಲ್ಲಿ ಸ್ಪೈಡರ್ ನೆಟ್ ಹಣೆಯಲಾಯ್ತು. ಸಿಎಂ ಕಚೇರಿಯ ಪ್ರತಿ ಫೈಲನ್ನೂ ಸರ್ವೇಲೆನ್ಸ್ ಮಾಡಲಾಯ್ತು. ಆದ್ರೆ ಇದ್ಯಾವುದಕ್ಕೂ ಜಗ್ಗುವ ಬಗ್ಗುವ ಪೈಕಿಯವರಲ್ಲದ ಬಿಎಸ್ವೈ ತಮ್ಮ ಪಾಡಿಗೆ ತಾವು ಆಡಳಿತ ನಡೆಸಿಕೊಂಡು ಹೋದರು. ನೆರೆ ಪರಿಹಾರದ 35 ಸಾವಿರ ಕೋಟಿ ಅಂದಾಜಿನ ಮೊತ್ತ ಬಿಡುಗಡೆ ಮಾಡದೇ ತಡೆ ಹಿಡಿಯಲಾಯ್ತು. ಹೀಗಾದರೂ ಯಡಿಯೂರಪ್ಪನವರ ಸರ್ಕಾರಕ್ಕೆ ಹಿನ್ನಡೆಯಾಗಲಿ ಎನ್ನುವ ತಂತ್ರವಿರಬಹುದು. ಒಂದೆರಡು ಬಾರಿ ಯಡಿಯೂರಪ್ಪನವರೂ ತಾಳ್ಮೆ ಕಳೆದುಕೊಂಡಿದ್ದೂ ಹೌದು. ಆದರೂ ಅವರನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ.

ಈಗ ಕರೋನಾ ಸಂಕಷ್ಟ ಕಾಲದಲ್ಲಿ ರಾಜ್ಯದ ಕೋವಿಡ್ -19 ನಿರ್ವಹಣೆ ಅತ್ಯುತ್ತಮವಾಗಿ ನಡೆಯಲು ಕಾರಣ ಬಿಎಸ್ ಯಡಿಯೂರಪ್ಪನವರ ರಾಜಕಾರಣದ ಅನುಭವ ಹಿರಿತನ ಮತ್ತು ಬದ್ಧತೆಗಳೆ. 6 ಕೋಟಿ ದಾಟಿರುವ ರಾಜ್ಯದ ನಿರ್ವಹಣೆ ಅಷ್ಟು ಸಲೀಸಾಗಿರಲಿಲ್ಲ. ಲಾಕ್ ಡೌನ್ ಕಾಲದಲ್ಲಿ ದಿನಕ್ಕೊಬ್ಬರು ಗೊಂದಲ ಸೃಷ್ಟಿಸಿದರೂ ಬಿಎಸ್ವೈ ತಲೆಕೆಡಿಸಿಕೊಳ್ಳದೇ ಆಡಳಿತ ನಡೆಸಿದರು. ಬೊಕ್ಕಸದಲ್ಲಿ ಹಣವಿಲ್ಲದೇ ಇದ್ದರೂ ಸರ್ಕಾರಿ ನೌಕರರ ವೇತನ ಕಡಿತ ಮಾಡಲಿಲ್ಲ. ಮಧ್ಯಮ ವರ್ಗದ ಪರ ನಿಂತು ಯೋಜನೆಗಳನ್ನು ಜಾರಿ ಮಾಡಿದರು. ದೇಶದ ಎಲ್ಲಾ ರಾಜ್ಯಗಳ ಪೈಕಿ ಕರೋನಾ ನಿರ್ವಹಣೆಯಲ್ಲಿ ಕರ್ನಾಟಕದ ಸಿಎಂ ಅತ್ಯುತ್ತಮ ಎನಿಸಿಕೊಂಡರು.

ನೆನಪಿಡಿ ಇವತ್ತು ಪ್ರತೀ ಇಲಾಖೆಗಳಿಗೆ ಮಂತ್ರಿಗಳಿದ್ದರೂ ಯಡಿಯೂರಪ್ಪ ಮಾತ್ರ ಒಂಟಿಯಾಗಿದ್ದಾರೆ. ಎಷ್ಟೋ ವಿಚಾರಗಳು ಅವರ ಗಮನಕ್ಕೆ ಬಾರದೇ ಜಾರಿಯಾಗುತ್ತಿವೆ. ಹೇಗಾದರೂ ಶತಾಯಗತಾಯ ಅವರನ್ನು ಆಡ್ವಾಣಿಯವರಂತೆ ಮೂಲೆಗುಂಪು ಮಾಡಲು ಬಿಜೆಪಿ ಒಳಗಿನ ಒಂದು ಬಣ ನಿರಂತರವಾಗಿ ಪ್ರಯತ್ನಿಸುತ್ತಲೇ ಇದೆ. ಮೊನ್ನೆ ಮೊನ್ನೆ ರಾಜ್ಯಸಭೆ ಉಮೇದುವಾರಿಕೆಗೆ ಯಡಿಯೂರಪ್ಪ ಪಟ್ಟಿಯ ಖತ್ತಿ, ಕೋರೆ, ಶೆಟ್ಟಿಯವರನ್ನು ನಿರಾಕರಿಸಿ ಅಶೋಕ್ ಗಸ್ತಿ, ಈರಣ್ಣ ಕಡಾಡಿ ಎಂಬ ಹೊಸ ಹೆಸರು ತಂದಿದ್ದೂ ಇದೇ ಒಳರಾಜಕಾರಣ. ನಾಳೆ ಎಂಎಲ್ಸಿ ಚುನಾವಣೆಯಲ್ಲೂ ಈ ಬಣ ತಮ್ಮದೇ ಆದ ಹೊಸ ಅಭ್ಯರ್ಥಿಗಳನ್ನು ಮುಂದಿಟ್ಟು ಯಡಿಯೂರಪ್ಪನವರಿಗೆ ಹಿನ್ನಡೆ ಉಂಟುಮಾಡಿದರೂ ಅಚ್ಚರಿಯೇನಿಲ್ಲ. ಬಿಎಲ್ ಸಂತೋಷ್ ತಂತ್ರಗಾರಿಕೆ ಹಿಂದಿನಿಂದಲೂ ಪ್ಯಾರ್ ಲಲ್ ಲೈನ್ ನಲ್ಲಿ ಇದೇ ಕೆಲಸ ಮಾಡಿಕೊಂಡು ಬಂದಿದೆ. ಕೋಟೆ ಕಟ್ಟಿದ್ದು ಯಾವನಾದರೇನು? ಧ್ವಜ ನೆಡಲು ಯಾರಾದರೇನು? ಮರೆಯದಿರಿ ಅದೇ ಕೋಟೆ ಮತ್ತೆ ಛಿದ್ರಗೊಂಡರೆ ಕಟ್ಟಲು ನಿಮಗೆ ತಾಕತ್ತಿದೆಯಾ?

77 ವರ್ಷ ತುಂಬದ ಯಡಿಯೂರಪ್ಪ ಈಗ ಮುದಿ ಹುಲಿ. ಹುಲಿ ಭೇಟೆಯಾಡೋದಿಲ್ಲ ಅನ್ನೋ ನಂಬಿಕೆಯಿಂದ ಹುಡುಗಾಟ ಮಾಡಲು ಹೋದರೆ ಅದರ ಪರಿಣಾಮ ಮಾತ್ರ ಗಂಭೀರವಾಗುತ್ತದೆ. ಈವರೆಗೆ ತಾಳ್ಮೆಯಿಂದ ಅವುಡುಗಚ್ಚಿ ಕುಳಿತಿರುವ ಯಡಿಯೂರಪ್ಪ ಸದ್ದಿಲ್ಲದೆ ಬ್ರಹ್ಮಾಸ್ತ್ರ ತಯಾರು ಮಾಡಿಕೊಳ್ಳುತ್ತಿದ್ದಾರೆ. ಆ ಬ್ರಹ್ಮಾಸ್ತ್ರದ ಹೆಸರು ಬಿ.ವೈ ವಿಜಯೇಂದ್ರ. ತಮ್ಮ ಸಮುದಾಯದ ಮುಂದಿನ ಬಲಾಢ್ಯ ನಾಯಕರನ್ನಾಗಿ ವಿಜಯೇಂದ್ರರನ್ನು ಯಡಿಯೂರಪ್ಪ ತಯಾರು ಮಾಡುತ್ತಿದ್ದಾರೆ. 2013ರಲ್ಲಿ ಕೆಜೆಪಿ ಕಟ್ಟಿದ ಯಡಿಯೂರಪ್ಪನವರು ಬಿಜೆಪಿಯನ್ನು ಧೂಳಿಪಟ ಮಾಡಿದ್ದು ನೆನಪಿರಬೇಕಲ್ಲ; ಈಗಲೂ ಬಿಎಸ್ವೈ ಬಂಡಾಯವೆದ್ದರೆ ಬಿಜೆಪಿ ಮತ್ತೆ ಮೇಲೆ ಏಳಲಾಗದಂತೆ ಛಿದ್ರವಾಗುತ್ತದೆ.

ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಈಶ್ವರಪ್ಪ, ಸದಾನಂದ ಗೌಡ, ಸಿಟಿ ರವಿ, ಅಶೋಕ್ ಸೇರಿದಂತೆ ಯಾವ ಮಹಾ ನಾಯಕರಿಗೂ ಮತ್ತೆ ಬಿಜೆಪಿ ಕಟ್ಟಿ ನಿಲ್ಲಿಸುವ ಚೈತನ್ಯವಿಲ್ಲ, ಗಟ್ಟಿತನವಿಲ್ಲ, ಛಲವೂ ಇಲ್ಲ ಮತ್ತು ಸಮುದಾಯಗಳ ಬೆಂಬಲವೂ ಇಲ್ಲ. ಲಿಂಗಾಯಿತ ವೀರಶೈವ ಸಮುದಾಯಗಳ ಮಠ ಮಂದಿರಗಳ ಯಡಿಯೂರಪ್ಪನವರನ್ನು ಒಪ್ಪಿಕೊಂಡು ಬೆಳೆಸಿದಂತೆ ಮತ್ಯಾರನ್ನಾದರೂ ಬೆಳೆಸುತ್ತವೆ ಅಂದರೆ ಅದು ವಿಜಯೇಂದ್ರರನ್ನು ಮಾತ್ರ. ಅದಕ್ಕೊಂದು ಉದಾಹರಣೆ ಕಳೆದ ಫೆಬ್ರವರಿಯಲ್ಲಿ ಅರಮನೆ ಮೈದಾನದಲ್ಲಿ ಚಿತ್ರದುರ್ಗದ ಮುರುಘಾ ಮಠದ ನೇತೃತ್ವದಲ್ಲಿ ನಡೆದ ಎರಡನೇ ಮಹಾ ಗಣಮೇಳ ಮತ್ತು ಶರಣ ಸಮ್ಮೇಳನ. ಇದರ ಸಂಪೂರ್ಣ ಉಸ್ತುವಾರಿ ನಿಭಾಯಿಸಿ ಯಶಸ್ಸಿಗೆ ಕಾರಣವಾಗಿದ್ದು ವಿಜಯೇಂದ್ರ. ಇಂತದ್ದೊಂದು ದೊಡ್ಡ ವೇದಿಕೆಯನ್ನು ಅವರ ಹೆಗಲಿಗೆ ಹಾಕಿದ್ದ ಹಿಂದಿರುವ ಸಂದೇಶ ಸ್ಪಷ್ಟ. ಕರ್ನಾಟಕದ ರಾಜಕಾರಣದ ಪಡಸಾಲೆಗೆ ವಿಜಯೇಂದ್ರರ ರಂಗಪ್ರವೇಶವಾಗುತ್ತಿದೆ.

ಯಡಿಯೂರಪ್ಪನವರನ್ನು ಅಧಿಕಾರದಿಂದ ಇಳಿಸಿದ ಕೆಲವೇ ದಿನಗಳಲ್ಲಿ ಸರ್ಕಾರ ಬಿದ್ದುಹೋಗುತ್ತದೆ. 2013ರ ಚುನಾವಣೆಯ ನಂತರ ಒಂದು ವೇಳೆ ಯಡಿಯೂರಪ್ಪ ಮರಳಿ ಬಿಜೆಪಿಗೆ ಬರದೇ ಇದ್ದಿದ್ದರೆ ಈಗ ಬಿಜೆಪಿ ಅಧಿಕಾರದಲ್ಲೇ ಇರುತ್ತಿರಲಿಲ್ಲ. ಕೆಜೆಪಿ ಗೆದ್ದಿದ್ದು 6 ಸೀಟುಗಳೇ ಆದರೆ ಪಡೆದುಕೊಂಡ ಮತಪ್ರಮಾಣ ಶೆ.9ಕ್ಕಿಂತ ಜಾಸ್ತಿ. ಅವತ್ತಿಗೂ ಇವತ್ತಿಗೂ ಪರಿಸ್ಥಿತಿ ತೀರಾ ಭಿನ್ನವೇನಿಲ್ಲ. ಮೋದಿಯ ಮುಖ ನೋಡಿ ಓಟ್ ಕೊಡಿ ಎಂದು ರಾಜ್ಯದ ಜನರಿಗೆ ಈಗ ಕೇಳಲು ಸಾಧ್ಯವಿಲ್ಲ. ವಿತೌಟ್ ಯಡಿಯೂರಪ್ಪ ಬಿಜೆಪಿಗೆ ರಾಜ್ಯದಲ್ಲಿ ಅಸ್ಥಿತ್ವವೇ ಇಲ್ಲ. ಅತ್ತ ಕೆಪಿಸಿಸಿ ಸಾರಥ್ಯ ವಹಿಸಿರುವ ಡಿಕೆ ಶಿವಕುಮಾರ್ ಡೈನಾಮಿಕ್ ಯೋಜನೆಗಳೊಂದಿಗೆ ಪಕ್ಷ ಸಂಘಟನೆಗೆ ಮುಂದಾಗ್ತಿದ್ದಾರೆ. ಇಷ್ಟೆಲ್ಲಾ ಹೇಳಿದ ನಂತರ ಕಟ್ಟಕಡೆಯದಾಗಿ ಇಷ್ಟನ್ನೇ ಹೇಳಬಯಸುತ್ತೇನೆ, ದಕ್ಷಿಣ ಭಾರತದ ಹೆಬ್ಬಾಗಿಲು ತೆರೆದು ಬಿಜೆಪಿ ಎಂಬ ಪಕ್ಷವನ್ನು ಸ್ವಾಗತಿಸಿದ ಯಡಿಯೂರಪ್ಪ ಎಂಬ ನಾಯಕನ ಬಗ್ಗೆ ಪಕ್ಷಕ್ಕೆ ಕಿಂಚಿತ್ ಕೃತಜ್ಞತೆಯಾದರೂ ಇರಬೇಕಿತ್ತು.

-ವಿಭಾ (ವಿಶ್ವಾಸ್ ಭಾರದ್ವಾಜ್)
*

ShareTweetSendShare
Join us on:

Related Posts

reliance-digital-india-sale-disco-offers-august-2026

ರಿಲಯನ್ಸ್ ಡಿಜಿಟಲ್ ತಂದಿದೆ ‘ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್

by admin
August 13, 2026
0

ರಿಲಯನ್ಸ್ ಡಿಜಿಟಲ್ ತಂದಿದೆ 'ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್ (D.I.S.C.O.)' ಸ್ಮಾರ್ಟ್ಫೋನ್‌ಗಳು, ಗೃಹೋಪಯೋಗಿ ವಸ್ತುಗಳು, ಟಿವಿಗಳು, ಲ್ಯಾಪ್ ಟಾಪ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಗಳ ಮೇಲೆ ವಿಶೇಷ ಕೊಡುಗೆಗಳು ಮುಂಬೈ,  2026: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ರಿಟೇಲರ್  ರಿಲಯನ್ಸ್ ಡಿಜಿಟಲ್, ತನ್ನ ಅಪ್ರತಿಮ ಡಿಜಿಟಲ್ ಇಂಡಿಯಾ ಸೇಲ್‌ಗಾಗಿ ಹೊಸ ಗುರುತನ್ನು D.I.S.C.O. (ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್) ಅನ್ನು ಪ್ರಾರಂಭಿಸಿದೆ. ರಿಲಯನ್ಸ್ ಡಿಜಿಟಲ್ ಸ್ಟೋರ್ಸ್, RelianceDigital.in ಮತ್ತು ಮೈಜಿಯೋ ಸ್ಟೋರ್ಸ್‌ನಲ್ಲಿ ಆಗಸ್ಟ್ 16 ರವರೆಗೆ ಚಾಲನೆಯಲ್ಲಿರುವ ಈ ಅಭಿಯಾನವು ಸ್ಮಾರ್ಟ್ಫೋನ್‌ಗಳು, ಟಿವಿಗಳು, ಲ್ಯಾಪ್‌ಟಾಪ್, ಗೃಹೋಪಯೋಗಿ ವಸ್ತುಗಳು ಮತ್ತು ಹೆಚ್ಚಿನವುಗಳ ಮೇಲೆ ವಿಶೇಷ ಕೊಡುಗೆಗಳನ್ನು ತಂದಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ಮೇಲಿನ ಋತುವಿನ ಕೆಲವು ಅತ್ಯುತ್ತಮ ಡೀಲ್ ಗಳನ್ನು ಒಟ್ಟುಗೂಡಿಸುವ ಈ ಮಾರಾಟವು ಹಳೆಯ ಉತ್ಪನ್ನಗಳ ಮೇಲೆ ವರ್ಧಿತ ವಿನಿಮಯ ಮೌಲ್ಯ, ಆಯ್ದ ಎಲೆಕ್ಟ್ರಾನಿಕ್ಸ್ ಮೇಲೆ ₹ 15,000 ವರೆಗೆ ಎಕ್ಸ್‌ಚೇಂಜ್ ಬೋನಸ್, ಎರಡನೇ ಉತ್ಪನ್ನದ ಖರೀದಿಗೆ ಫ್ಲಾಟ್ 50% ರಿಯಾಯಿತಿ, ಬ್ಯಾಂಕ್ ಕಾರ್ಡ್‌ಗಳು, ಪೇಪರ್ ಫೈನಾನ್ಸ್ ಮತ್ತು ಯುಪಿಐ ಮೂಲಕ ₹ 30,000 ವರೆಗೆ ರಿಯಾಯಿತಿ ಮತ್ತು ಮಾರಾಟದ ಸಮಯದಲ್ಲಿ ಪೂರಕ ಒಂದು ವರ್ಷದ ವಿಸ್ತೃತ ವಾರಂಟಿಯನ್ನು ನೀಡುತ್ತದೆ. ನಿಮ್ಮ ಸ್ಮಾರ್ಟ್ಫೋನ್, ಟಿವಿ, ಲ್ಯಾಪ್‌ಟಾಪ್ ಅಥವಾ ಗೃಹೋಪಯೋಗಿ ಉಪಕರಣಗಳನ್ನು ಅಪ್ಗ್ರೇಡ್ ಮಾಡಲು ಯೋಜಿಸುತ್ತಿದ್ದರೂ, ಅದನ್ನು ಮಾಡಲು ಇದಕ್ಕಿಂತ ಉತ್ತಮ ಸಮಯ ಎಂದಿಗೂ ಸಿಗಲಾರದು.  D.I.S.C.O. ಕೊಡುಗೆಗಳ ವಿವರ ಇಲ್ಲಿದೆ: ಸ್ಮಾರ್ಟ್ಫೋನ್‌ಗಳು ಮತ್ತು ಪರಿಕರಗಳು: ಗ್ರಾಹಕರು ₹10,999 ರಿಂದ ಪ್ರಾರಂಭವಾಗುವ ಕೈಗೆಟುಕುವ 4G ಸ್ಮಾರ್ಟ್ಫೋನ್, ₹13,999 ನಿಂದ 5G ಸ್ಮಾರ್ಟ್ಫೋನ್ ಅಥವಾ ಐಫೋನ್‌ಗಳು ಮತ್ತು ₹2 ಲಕ್ಷದವರೆಗೆ ಬೆಲೆಯ ಫೋಲ್ಡೆಬಲ್ ಫೋನ್ ಸೇರಿದಂತೆ ಪ್ರೀಮಿಯಂ ಫ್ಲ್ಯಾಗ್ ಶಿಪ್ ಸಾಧನಗಳನ್ನು ಹುಡುಕುತ್ತಿರಲಿ, ರಿಲಯನ್ಸ್ ಡಿಜಿಟಲ್ ಪ್ರತಿ ಬೆಲೆ ವಿಭಾಗದಲ್ಲಿ ಆಯ್ಕೆಗಳನ್ನು ಹೊಂದಿದೆ. ಗ್ರಾಹಕರು 30 ತಿಂಗಳವರೆಗೆ ನೋ ಕಾಸ್ಟ್ ಇಎಂಐ, ಆಯ್ದ ಸ್ಮಾರ್ಟ್ಫೋನ್‌ಗಳಿಗೆ 10,000 ರೂ.ವರೆಗೆ ವಿನಿಮಯ ಬೋನಸ್, ಇಯರ್ಬಡ್‌ಗಳು, ಹೆಡ್ಫೋನ್‌ಗಳು, ಬ್ಲೂಟೂತ್ ಸ್ಪೀಕರ್‌ಗಳು, ಧರಿಸಬಹುದಾದ ವಸ್ತುಗಳು ಮತ್ತು ಮೊಬೈಲ್ ಬಿಡಿಭಾಗಗಳಿಗೆ ಯುಪಿಐ ಪಾವತಿಗಳ ಮೇಲೆ 10% ವರೆಗೆ ರಿಯಾಯಿತಿ ಮತ್ತು ಆಯ್ದ ಬ್ಲೂಟೂತ್ ಸ್ಪೀಕರ್,, ಇಯರ್ಬಡ್ ಮತ್ತು ಪವರ್ ಬ್ಯಾಂಕ್ ಮೇಲೆ ₹15,000 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಖರೀದಿಗಳೊಂದಿಗೆ ಫ್ಲಾಟ್ 50% ರಿಯಾಯಿತಿ ಪಡೆಯಬಹುದು. ಗೃಹೋಪಯೋಗಿ ಉಪಕರಣಗಳು: ₹50,000 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಗೆ ಶಾಪಿಂಗ್ ಮಾಡಿ ಮತ್ತು 43,900 ರೂ.ಗಳ ಡೈಸನ್ ಬಿಗ್ ಬಾಲ್ ವ್ಯಾಕ್ಯೂಮ್ ಕ್ಲೀನರ್ ಅನ್ನು 13,900 ರೂ.ಗೆ ಪಡೆಯಿರಿ. ₹39,990 ನಿಂದ ಪ್ರಾರಂಭವಾಗುವ 65-ಇಂಚಿನ 4K UHD ಗೂಗಲ್ ಟಿವಿ ಮೂಲಕ  ನಿಮ್ಮ ಮನೆಯ ಮನರಂಜನೆಯನ್ನು ನವೀಕರಿಸಿ, ಮತ್ತು ₹39,990 ನಿಂದ ಪ್ರಾರಂಭವಾಗುವ ಸೈಡ್ ಬೈ ಸೈಡ್ ರೆಫ್ರಿಜರೇಟರ್ ಆಯ್ಕೆ ಮಾಡಿ ಮತ್ತು 12000/- ವರೆಗಿ‌ನ ಮೌಲ್ಯದ ಉಚಿತ ಪಡೆಯಿರಿ ಮತ್ತು 15,000/-ವರೆಗೆ ವಿನಿಮಯ ಪ್ರಯೋಜನಗಳನ್ನು ಪಡೆಯಿರಿ. ಗ್ರಾಹಕರು *₹18,000 ಮೌಲ್ಯದ ಉಚಿತಗಳೊಂದಿಗೆ ₹55,990 ರಿಂದ ಪ್ರಾರಂಭವಾಗುವ ವಾಷರ್ ಡ್ರೈಯರ್ ಅನ್ನು ಸಹ ಮನೆಗೆ ತರಬಹುದು. ಲ್ಯಾಪ್ ಟಾಪ್‌ಗಳು: ಕೇವಲ ₹ 39,999 ರಿಂದ ಪ್ರಾರಂಭವಾಗುವ ಲ್ಯಾಪ್ ಟಾಪ್‌ಗಳ ಮೇಲೆ ₹ 5,000 ವರೆಗೆ ಉಚಿತ 1+2 ವರ್ಷಗಳ ವಿಸ್ತೃತ ವಾರಂಟಿ ಮತ್ತು ವಿನಿಮಯ ಪ್ರಯೋಜನಗಳನ್ನು ಪಡೆಯಿರಿ.

upendra-next-level-movie-launch-aradhana-ram-pair

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ಕನ್ನಡ – ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!

by admin
August 13, 2026
0

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ, ಕನ್ನಡ - ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ನೆಕ್ಟ್ಸ್‌ ಲೆವೆಲ್’ (Next Level) ಅಧಿಕೃತವಾಗಿ ಆರಂಭವಾಗಿದೆ....

ashoka-university-placements-100-percent-record-highest-package

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು!

by admin
August 13, 2026
0

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು! ದೆಹಲಿ - ಎನ್‌ಸಿಆರ್ ಮೂಲದ ಪ್ರಸಿದ್ಧ ಅಶೋಕ...

shatkarma-kerala-mantravada-truth-psychology

Astro- ಈ_ಪ್ರಯೋಗಗಳು_ಕೇರಳದ_ಮಂತ್ರವಾದದ_ಅತ್ಯಂತ_ಹಳೆಯ_ಭಾಗ.

by admin
August 13, 2026
0

ಇದನ್ನ ಷಟ್ಕರ್ಮ ಅಂತ ಕರೀತಾರೆ - ಅಂದ್ರೆ 6 ಕರ್ಮಗಳು. ಒಡಿಯನ್ ವಿದ್ಯೆಯೂ ಇದರಲ್ಲೇ ಬರುತ್ತೆ. ಇವು ಅಥರ್ವಣ ವೇದದಿಂದ ಬಂದಿವೆ ಅಂತ ಹೇಳ್ತಾರೆ. ಶ್ರೀ ಕ್ಷೇತ್ರ...

nagara-panchami-2026-date-muhurat-significance

ನಾಗ ಪಂಚಮಿ ಹಬ್ಬದ ಮಹತ್ವ ಮತ್ತು ಆಚರಣೆಯ ಮುಖ್ಯಾಂಶಗಳು

by admin
August 13, 2026
0

ನಾಗ ಪಂಚಮಿ ಸೋಮವಾರ, ಆಗಸ್ಟ್ 17, 2026 ನಾಗ ಪಂಚಮಿ ಪೂಜೆ ಮುಹೂರ್ತ - 05:51 AM ರಿಂದ 08:29 AM ಅವಧಿ - 02 ಗಂಟೆಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram