ADVERTISEMENT
Tuesday, May 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರೈತರು ಬೇಕಾಗಿದ್ದಾರೆ…! ಪೋಸ್ಟರ್ ಫುಲ್ ವೈರಲ್

saaksha tv by saaksha tv
June 12, 2020
in Newsbeat, ರಾಜ್ಯ
Share on FacebookShare on TwitterShare on WhatsappShare on Telegram

ಮಂಡ್ಯ: ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ ಹೆಚ್ಚುತ್ತಾಹೋದಂತೆ ನಗರ ಪ್ರದೇಶಗಳಲ್ಲಿ ಉದ್ಯೋಗವಕಾಶಗಳು ಹೆಚ್ಚಿದಂತೆ ಗ್ರಾಮೀಣ ಪ್ರದೇಶದಲ್ಲಿ ರೈತರ ಸಂಖ್ಯೆ ಕಡಿಯಾಗುತ್ತಾ ಸಾಗಿದೆ. ಇಂತಹ ಸಂದರ್ಭದಲ್ಲಿ ರೈತರು ಹೊಲದಲ್ಲಿ ದುಡಿಯುವ ಕೈಗಳೇ ಇಲ್ಲದ ಪರಿಸ್ಥಿತಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕಾಡಲಾರಂಭಿಸಿದೆ. ಪ್ರತಿ ತಿಂಗಳು ನಗರ-ಪಟ್ಟಣಗಳಲ್ಲಿ ಕೊಡುವ ಸಂಬಳವನ್ನು ನಾವೇ ಕೊಡುತ್ತೇವೆ, ರೈತರು ಬೇಕಾಗಿದ್ದಾರೆ. ತಿಂಗಳಿಗೆ 10ರಿಂದ 30 ಸಾವಿರ ಸಂಬಳ ಕೊಡುತ್ತೇವೆ, ನಮ್ಮ ದೂರವಾಣಿ ನಂಬರ್ ಸಂಪರ್ಕಿಸಿ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲಾಗುತ್ತಿದೆ.
ಹೌದು, ಇಂತಹದೊಂದು ಪೋಸ್ಟರ್ ಮಾಡಿ ಸೋಷಿಯಲ್ ಮೀಡಿಯದಲ್ಲಿ ಹರಿಬಿಟ್ಟವರು ಮಂಡ್ಯ ಜಿಲ್ಲೆ ಪಾಂಡವಪುರದ 6 ಮಂದು ಯುವ ಉತ್ಸಾಹಿಗಳ ತಂಡ. ಈ ತಂಡದಲ್ಲಿ ಕಮಲೇಶ್, ದೀಪಕ್, ಮಹೇಶ್, ಶ್ರೀಕಾಂತ್, ಮೇಘ ಹಾಗೂ ಸೌಮ್ಯ ಒಳಗೊಂಡ ತಂಡ, ಗ್ರಾಸ್‍ರೂಟ್ ಆರ್ಗಾನಿಕ್ ಎಂಬ ಸಂಸ್ಥೆಯನ್ನ ಆರಂಭಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ತೆಂಗಿನ ಎಣ್ಣೆ, ನೆಲಗಡಲೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ..ಹೀಗಾಗೆ ಹಳ್ಳಿಗಳಲ್ಲಿ ಸಿಗುವ ಎಣ್ಣೆ ಕಾಳುಗಳನ್ನು ಸಂಗ್ರಹಿಸಿ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸದೇ ಗಾಣದಲ್ಲಿ ಎಣ್ಣೆ ತೆಗೆದು ಮಾರಾಟ ಮಾಡುವ ಯೋಜನೆ ರೂಪಿಸಿದರು. ಪರಿಶುದ್ಧವಾದ ಎಣ್ಣೆಯನ್ನು ಪ್ಯಾಕ್ ಮಾಡಿ ತಾವೇ ಮಂಡ್ಯ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಮಾರಾಟ ಮಾಡಲಾರಂಭಿಸಿದರು.
ಎಲ್ಲಾ ಆಹಾರ ಪದಾರ್ಥಗಳಲ್ಲಿ ರಾಯಾಯನಿಕ ಅಂಶ ಜಾಸ್ತಿಯಾಗುತ್ತಿರುವ ಈ ಕಾಲಮಾನದಲ್ಲಿ ನೈಸರ್ಗಿಕ ಉತ್ಪನ್ನಗಳತ್ತ ಜನರ ವಾಲಲು ಆರಂಭಿಸಿದ್ದಾರೆ. ಮನೆಯಲ್ಲೇ ಬಳೆದ, ನೈಸರ್ಗಿಕ ಉತ್ಪನ್ನಗಳಿಗೆ ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಭಾರಿ ಬೇಡಿಕೆ ಇದೆ. ಇದನ್ನೇ ಅರಿತ ಯುವಕರ ತಂಡ, ಕಟ್ಟಪಟ್ಟು ಗಾಣದಲ್ಲಿ ಎಣ್ಣೆ ತೆಗೆದು ಮಾರಾಟ ಮಾಡಲು ಆರಂಭಿಸಿದರು. ಮೊದಲು ಉತ್ತಮ ಪ್ರತಿಕ್ರಿಯೆ ಸಿಗದೇ ಇದ್ದರೂ ಈಗಂತೂ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.
ಕೊರೊನಾ ಮಹಾಮಾರಿ ತಡೆಗೆ ಮಾಡಲಾದ ಲಾಕ್‍ಡೌನ್‍ನಿಂದ ಬೆಂಗಳೂರು ಸೇರಿದಂತೆ ನಾನಾ ನಗರಗಳಲ್ಲಿದ್ದವರು ಕೆಲಸ ಕಳೆದುಕೊಂಡು ಹಳ್ಳಿಗಳಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಹಳ್ಳಿಗಳಲ್ಲೇ ಬೆಳೆದ ಹಣ್ಣು-ತರಕಾರಿ ಸೇರಿದಂತೆ ವಿವಿಧ ಉತ್ಪಗಳನ್ನು ಆಪ್ ಮೂಲಕ ನೇರವಾಗಿ ಮಾರಾಟ ಮಾಡಿ ಉತ್ತಮ ಲಾಭ ಪಡೆದವರೂ ಇದ್ದಾರೆ.
ಹೀಗಾಗಿ ನೈಸರ್ಗಿಕ ಎಣ್ಣೆ ತೆಗೆದು ಮಾಡುತ್ತಿದ್ದ ಈ ಯುವಕರಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ನೈಸರ್ಗಿಕವಾಗಿ ಹಣ್ಣು-ತರಕಾರಿ ಬೆಳೆಯುವ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ.

ರೈತರು ಬೇಕಾಗಿದ್ದಾರೆ..!
ಗ್ರಾಮಾಂತರ ಪ್ರದೇಶಗಳಲ್ಲಿ ದುಡಿಯಲು ಭೂಮಿ ಇದ್ದರೂ, ದುಡಿಯುವ ಕೈಗಳಿಗೆ ಕೊರತೆ ಇದೆ. ವರ್ಷಪೂರ್ತಿ ಹೊಲದಲ್ಲಿ ಕೆಲಸ ಮಾಡಿದರೂ ಮೂರು ಹೊತ್ತಿನ ತುತ್ತಿಗೂ ಪರದಾಡಬೇಕೆಂದು ಹಳ್ಳಿಗಳ್ಳಿ ಸರ್ವೇಸಾಮಾನ್ಯ. ಈ ಗ್ರಾಸ್‍ರೂಟ್ ಆರ್ಗಾನಿಕ್ ತಂಡದ ಸದಸ್ಯರೂ ಕೂಡ ಒಂದು ಕಾಲದಲ್ಲಿ ಬೆಂಗಳೂರು ಸೇರಿ ಬೇರೆ ಬೇರೆ ನಗರಗಳಲ್ಲಿ ಕೆಲಸ ಹುಡುಕಿಕೊಂಡು ವಲಸೆ ಹೋದವರೆ. ನಗರಗಳಲ್ಲೂ ಜೀವನ ಉತ್ತಮವಾಗಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಹುಟ್ಟೂರಿನಲ್ಲೇ ಸ್ವಂತ ಉದ್ಯೋಗ ಏಕೆ ಮಾಡಬಾರದು ಎಂದಾಗ ಹೊಳೆದದ್ದೇ ಗ್ರಾಸ್‍ರೂಟ್ ಆರ್ಗಾನಿಕ್.
ನೈಸರ್ಗಿಕವಾಗಿ ತೆಗೆದ ಎಣ್ಣೆ ಉತ್ಪನ್ನಗಳಿಗೆ ಡಿಮ್ಯಾಂಡ್ ಬರುತ್ತಿದ್ದಂತೆ ಉಳುಮೆ ಮಾಡಲು ಆಗದೇ ಬಿಟ್ಟಿದ್ದ ಜಮೀನಿನನ್ನೇ ಇಟ್ಟುಕೊಂಡು ಏನಾದರೂ ಒಂದು ಹೊಸ ಪ್ರಯತ್ನ ಮಾಡಲೇಬೇಕು ಎಂದು ಈ ಯುವಕರು ನಿರ್ಧಾರ ಮಾಡಿದರು. ಸುಮಾರು 10 ಎಕರೆ ಭೂಮಿಯಲ್ಲಿ ಹಣ್ಣು, ತರಕಾರಿ, ಸೊಪ್ಪು, ಎಣ್ಣೆಕಾಳುಗಳಲ್ಲಿ ಯಾವುದೇ ರಸಗೊಬ್ಬರ, ಕೀಟನಾಶಕ ಬಳಸದೇ ಬೆಳೆಯೋಣ ಎಂದು ಹೊರಟ ಯುವಕರಿಗೆ ಎದುರಾಗಿದ್ದು, ರೈತ ಕಾರ್ಮಿಕರ ಸಮಸ್ಯೆ.
ಹೊಲದಲ್ಲಿ ಕೆಲಸ ಮಾಡಲು ಬನ್ನಿ ಎಂದರೆ ಐದಾರು ಸಾವಿರ ಸಂಬಳಕ್ಕ ಬೆಂಗಳೂರು-ಮೈಸೂರಿಗೆ ಹೋಗಿ ಬರುವ ಯುವಕರನ್ನು ಕಂಡು ಈ ಯುವಕರು, ಬೆಂಗಳೂರಿನಂತಹ ನಗರಗಳಲ್ಲಿ ಕೊಡುವ ಸಂಬಳಕ್ಕಿಂತ ನಾವು ಹೆಚ್ಚೇ ಕೊಡುತ್ತೇವೆ. ತಿಂಗಳಿಗೆ 10 ಸಾವಿರದಿಂದ 30 ಸಾವಿರ ಕೊಡುತ್ತೇವೆ. ಕೆಲಸ ಮಾಡಲು ಇಚ್ಚಿಸುವವರು ಬನ್ನಿ ಎಂದು ಗೋಗರೆದರೂ ಅಂತಹ ಪ್ರತಿಕ್ರಿಯೆ ಏನೂ ಸಿಕ್ಕಿಲ್ಲ. ಆಗ ಹೊಳೆದದ್ದೇ ಸೋಷಿಯಲ್ ಮೀಡಿಯಾ.
ರೈತರು ಬೇಕಾಗಿದ್ದಾರೆ, ತಿಂಗಳಿಗೆ 10,000 ದಿಂದ 30,000 ರೂ. ಸಂಬಳ ಕೊಡುತ್ತೇವೆ ಎಂದು ಪೋಸ್ಟರ್ ಹಾಕಿದರು. ಈ ಪೋಸ್ಟರ್‍ಗೆ ಸಾಮಾಜಿಕ ತಾಲತಾಣಗಳಲ್ಲಿ ಒಳ್ಳೆ ರೆಸ್ಪಾನ್ಸ್ ಕೂಡ ಬಂದಿದೆ. ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ತಂಡನೈಸರ್ಗಿಕ ಕೃಷಿ ಚಟುವಟಿಕೆ ಆರಂಭಿಸಿದೆ. ಈ ಉತ್ಸಾಹಿ ತಂಡಕ್ಕೆ ಸಾಕ್ಷಾಟಿವಿ ಕಡೆಯಿಂದಲೂ ಗುಡ್‍ಲಕ್.
ಸಂಪರ್ಕಿಸಬೇಕಾದ ವಿಳಾಸ: 9844123344/9164468872

Related posts

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

May 5, 2026
ಮೋದಿ ಆಗಮನಕ್ಕೆ ಮಮತಾ ಸಾಮ್ರಾಜ್ಯ ಪತನ: ಬಿಜೆಪಿ ಟೀಕೆ

ಮೋದಿ ಆಗಮನಕ್ಕೆ ಮಮತಾ ಸಾಮ್ರಾಜ್ಯ ಪತನ: ಬಿಜೆಪಿ ಟೀಕೆ

May 5, 2026
Tags: FarmersGrassroot OrganicMandya
ShareTweetSendShare
Join us on:

Related Posts

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

by Shwetha
May 5, 2026
0

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ-ರಾಜಕಾರಣಿ ವಿಜಯ್ ಭಾರೀ ಸಂಚಲನ ಸೃಷ್ಟಿಸಿದ್ದಾರೆ. ಅವರು ಸ್ಪರ್ಧಿಸಿದ ಎರಡು ಕ್ಷೇತ್ರಗಳಾದ ಪೆರಂಬೂರು ಮತ್ತು ತಿರುಚಿ ಈಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪೆರಂಬೂರಿನಲ್ಲಿ...

ಮೋದಿ ಆಗಮನಕ್ಕೆ ಮಮತಾ ಸಾಮ್ರಾಜ್ಯ ಪತನ: ಬಿಜೆಪಿ ಟೀಕೆ

ಮೋದಿ ಆಗಮನಕ್ಕೆ ಮಮತಾ ಸಾಮ್ರಾಜ್ಯ ಪತನ: ಬಿಜೆಪಿ ಟೀಕೆ

by Shwetha
May 5, 2026
0

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಗೆಲುವಿನ ಹಿನ್ನೆಲೆ ಭಾರತೀಯ ಜನತಾ ಪಾರ್ಟಿ (BJP) ಪ್ರತಿಕ್ರಿಯೆ ನೀಡಿದೆ. ತೆಲಂಗಾಣ ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ನರೇಂದ್ರ...

ಸಿದ್ದರಾಮಯ್ಯ V/S ಡಿ ಕೆ ಶಿವಕುಮಾರ್ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಹಾಡುತ್ತಾ ಹೈಕಮಾಂಡ್?

ಸಂಪುಟ ಸರ್ಕಸ್ : ಹಳಬರಿಗೆ ಕೊಕ್ ಹೊಸಬರಿಗೆ ಚಾನ್ಸ್ ಕಾಂಗ್ರೆಸ್ ನಾಯಕರ ಎದೆಯಲ್ಲಿ ಢವಢವ ಶುರು ಯಾರು IN ಯಾರು OUT !?

by Shwetha
May 5, 2026
0

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಈಗ ಭಾರಿ ಸಂಚಲನ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷ ತುಂಬುತ್ತಿರುವ ಬೆನ್ನಲ್ಲೇ ಅಧಿಕಾರ ಹಂಚಿಕೆಯ ಸೂತ್ರ ಮತ್ತೆ ಮುನ್ನೆಲೆಗೆ...

ಬಂಗಾಳದಲ್ಲಿ ಕೇಸರಿ ಸುನಾಮಿ: ಮೋದಿಯ ಝಲ್ಮುರಿ ರುಚಿಗೆ ದೀದಿ ಪಡೆ ಕಂಗಾಲು, ಜಾರ್ಗ್ರಾಮ್‌ನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ

ಬಂಗಾಳದಲ್ಲಿ ಕೇಸರಿ ಸುನಾಮಿ: ಮೋದಿಯ ಝಲ್ಮುರಿ ರುಚಿಗೆ ದೀದಿ ಪಡೆ ಕಂಗಾಲು, ಜಾರ್ಗ್ರಾಮ್‌ನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ

by Shwetha
May 5, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ದಶಕಗಳ ಕಾಲ ತನ್ನದೇ ಆದ ಭದ್ರಕೋಟೆ ಹೊಂದಿದ್ದ ತೃಣಮೂಲ ಕಾಂಗ್ರೆಸ್‌ಗೆ ಬಿಜೆಪಿ ಪ್ರಬಲ ಪೆಟ್ಟು ನೀಡಿದ್ದು,...

ನಿಜವಾಯ್ತು PK ಭವಿಷ್ಯ.. ವಿಜಯ್ ಗೆಲುವು ವಿಡಿಯೋ ವೈರಲ್!

ನಿಜವಾಯ್ತು PK ಭವಿಷ್ಯ.. ವಿಜಯ್ ಗೆಲುವು ವಿಡಿಯೋ ವೈರಲ್!

by Shwetha
May 5, 2026
0

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (PK) ನೀಡಿದ್ದ ಭವಿಷ್ಯವಾಣಿ ಇದೀಗ ನಿಜವಾಗಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಜಯ್ ನೇತೃತ್ವದ ಟಿವಿಕೆ (TVK) ಭರ್ಜರಿ ಗೆಲುವು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram