IND vs SL 2nd T20 : ಅಕ್ಸರ್ – ಸೂರ್ಯ ವ್ಯರ್ಥ ಹೋರಾಟ..!!
ಅಕ್ಸರ್ ಪಟೇಲ್ (65) ಹಾಗೂ ಸೂರ್ಯಕುಮಾರ್ ಯಾದವ್ (51) ಅದ್ಭುತ ಬ್ಯಾಟಿಂಗ್ಹಾಗೂ ಶಿವಂ ಮಾವಿ(26) ಅವರ ಜವಾಬ್ದಾರಿಯುತ ಆಟದ ನಡುವೆಯೂ ಶ್ರೀಲಂಕಾ ವಿರುದ್ಧದ ಎರಡನೇ T20I ಪಂದ್ಯದಲ್ಲಿ ಭಾರತ 16 ಗಳ ರನ್ ಗಳ ಸೋಲಿನ ನಿರಾಸೆ ಅನುಭವಿಸಿತು.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್ಗಳಲ್ಲಿ 6 ವಿಕೆಟ್ಗೆ 206 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಟಾರ್ಗೆಟ್ ಚೇಸ್ ಮಾಡಿದ ಟೀಂ ಇಂಡಿಯಾ ಕೊನೆಯ ಓವರ್ವರೆಗೂ ಹೋರಾಟ ನಡೆಸಿದರು 20 ಓವರ್ಗಳಲ್ಲಿ 8 ವಿಕೆಟ್ಗೆ 190 ರನ್ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಉತ್ತಮ ಕಮ್ಬ್ಯಾಕ್ ಮಾಡಿದ ಶ್ರೀಲಂಕಾ 1-1ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.
ಶನಕ-ಮೆಂಡಿಸ್ ಭರ್ಜರಿ ಆಟ:
ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಪತುಮ್ ನಿಸ್ಸಂಕ(33) ರನ್ಗಳ ಉತ್ತಮ ಕಾಣಿಕೆ ನೀಡಿದರೆ. ಕುಸಲ್ ಮೆಂಡಿಸ್ 31 ಬಾಲ್ಗಳಲ್ಲಿ 4 ಸಿಕ್ಸ್ ಮತ್ತು 3 ಬೌಂಡರಿ ನೆರವಿನಿಂದ 52 ರನ್ಗಳಿಸಿ ಮಿಂಚಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬಂದ ಅಸಲಂಕ(37) ಬಿರುಸಿನ ಆಟವಾಡಿ ವಿಕೆಟ್ ಒಪ್ಪಿಸಿದರು. ಆದರೆ ನಂತರ ಬಂದ ದಸುನ್ ಶನಕ ಸ್ಪೋಟಕ ಆಟದ ಮೂಲಕ ಟೀಂ ಇಂಡಿಯಾ ಬೌಲರ್ಗಳನ್ನ ಧೂಳಿಪಟ ಮಾಡಿದರು. 6ನೇ ಕ್ರಮಾಂಕದಲ್ಲಿ ಬಂದ ಶನಕ, ಕೇವಲ 22 ಬಾಲ್ಗಳಲ್ಲಿ 6 ಸಿಕ್ಸರ್ ಹಾಗೂ 2 ಬೌಂಡರಿ ಮೂಲಕ ಅಜೇಯ 56 ರನ್ಗಳಿಸಿ ಅಬ್ಬರಿಸಿದರು. ಅಂತಿಮವಾಗಿ ಶ್ರೀಲಂಕಾ 6 ವಿಕೆಟ್ಗೆ 206 ರನ್ಗಳ ಅತ್ಯುತ್ತಮ ಮೊತ್ತ ಕಲೆಹಾಕಿದರು. ಭಾರತದ ಪರ ಉಮ್ರಾನ್ ಮಲ್ಲಿಕ್ 3, ಅಕ್ಸರ್ ಪಟೇಲ್ 2 ಹಾಗೂ ಚಹಲ್ 1 ವಿಕೆಟ್ ಪಡೆದರು.
ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯ:
ಶ್ರೀಲಂಕಾ ನೀಡಿದ 207 ರನ್ಗಳ ಕಠಿಣ ಟಾರ್ಗೆಟ್ ಚೇಸ್ ಮಾಡಿದ ಭಾರತ ಆರಂಭಿಕ ಆಘಾತ ಕಂಡಿತು. ಓಪನರ್ಗಳಾದ ಕಿಶನ್(2) ಹಾಗೂ ಗಿಲ್(5) ರನ್ಗಳಿಗೆ ಪೆವಿಲಿಯನ್ ಸೇರಿದರೆ. ಸಂಜೂ ಸ್ಯಾಮ್ಸನ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ರಾಹುಲ್ ತ್ರಿಪಾತಿ(5) ನಿರಾಸೆ ಮೂಡಿಸಿದರು. ಇವರ ಬೆನ್ನಲ್ಲೇ ನಾಯಕ ಹಾರ್ದಿಕ್ ಪಾಂಡ್ಯ(12) ಹಾಗೂ ಮೊದಲ ಪಂದ್ಯದಲ್ಲಿ ಮಿಂಚಿದ್ದ ದೀಪಕ್ ಹೂಡ(9) ಸಹ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದರು. ಪರಿಣಾಮ ಭಾರತ 57 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಅಕ್ಸರ್-ಸೂರ್ಯ ವ್ಯರ್ಥ ಹೋರಾಟ:
ಆದರೆ 6ನೇ ವಿಕೆಟ್ಗೆ ಜೊತೆಯಾದ ಸೂರ್ಯಕುಮಾರ್ ಹಾಗೂ ಅಕ್ಸರ್ ಪಟೇಲ್ ಭರ್ಜರಿ ಬ್ಯಾಟಿಂಗ್ನಿಂದ ಗೆಲುವಿನ ಆಸೆ ಜೀವಂತ ಇರಿಸಿದರು. ಶ್ರೀಲಂಕಾ ಬೌಲರ್ಗಳ ಮೇಲೆ ಸವಾರಿ ಮಾಡಿದ ಈ ಜೋಡಿ 91 ರನ್ಗಳ ಅತ್ಯುತ್ತಮ ಜೊತೆಯಾಟವಾಡಿದರು. ಆದರೆ ನಿರ್ಣಾಯಕ ಹಂತದಲ್ಲಿ ಸೂರ್ಯಕುಮಾರ್(51) ಅರ್ಧಶತಕ ಸಿಡಿಸಿ ವಿಕೆಟ್ ಒಪ್ಪಿಸಿದರೆ. ಅಕ್ಸರ್ ಪಟೇಲ್(65) ಹೋರಾಟ ಅಂತ್ಯಗೊಂಡಿತು. 8ನೇ ಕ್ರಮಾಂಕದಲ್ಲಿ ಬಂದ ಶಿವಂ ಮಾವಿ(26) ಸಹ ಜವಾಬ್ದಾರಿಯ ಆಟವಾಡಿದರು ತಂಡಕ್ಕೆ ಗೆಲುವು ಸಿಗಲಿಲ್ಲ. ಅಂತಿಮವಾಗಿ ಭಾರತ 190/8 ರನ್ಗಳಿಸಲಷ್ಟೇ ಶಕ್ತವಾಯಿತು. ಶ್ರೀಲಂಕಾ ಪರ ಮಧುಶಂಕ, ರಜಿತ ಹಾಗೂ ಶನಕ ತಲಾ 2 ವಿಕೆಟ್ ಪಡೆದರೆ. ಕರುಣಾರತ್ನೆ ಮತ್ತು ಹಸರಂಗ 1 ವಿಕೆಟ್ ಪಡೆದರು.
ಗೆಲ್ಲಲೇಬೇಕಿದ್ದ ಪಂದ್ಯದಲಿ ಆಲ್ರೌಂಡ್ ಪ್ರದರ್ಶನ ನೀಡಿದ ಶ್ರೀಲಂಕಾದ ನಾಯಕ ದಸುನ್ ಶನಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ ನಡುವಿನ ಟಿ20 ಸರಣಿಯ ಅಂತಿಮ ಹಾಗೂ ಸರಣಿಯ ನಿರ್ಣಾಯಕ ಪಂದ್ಯ ಜ.7ರಂದು ರಾಜ್ಕೋಟ್ನಲ್ಲಿ ನಡೆಯಲಿದೆ.








