ಬೆಂಗಳೂರು: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಇಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ಸಂಸದ ಅಸಾದುದ್ದೀನ್ ಓವೈಸಿ ಅವರು ನಗರಕ್ಕೆ ಆಗಮಿಸುತ್ತಿದ್ದು, ಪ್ರಚೋದನಕಾರಿ ಭಾಷಣ ಮಾಡಿದ್ರೆ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹೇಳಿದ್ದಾರೆ. ಇಂದು ಈಶಾನ್ಯ ವಿಭಾಗದ ಪೊಲೀಸರು ವಶಪಡಿಸಿಕೊಂಡ ಕಳವು ಮಾಲು ಪ್ರದರ್ಶನ ಮತ್ತು ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಭಾಸ್ಕರ್ ರಾವ್ ಅವರು ಭಾಗವಹಿಸಿದ್ದರು. ಬಳಿಕ ಸುದ್ದಿಗಾರರೊಂದಿಗೆ ಓವೈಸಿ ಆಗಮನದ ಬಗ್ಗೆ ಮಾತನಾಡಿದ ಅವರು, ಓವೈಸಿ ಅವರಿಗೆ ಮಾತನಾಡಬೇಡಿ ಎಂದು ಹೇಳುವುದಕ್ಕೆ ಆಗುವುದಿಲ್ಲ. ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಅದರ ಜೊತೆಗೆ ವಾಕ್ ಜವಾಬ್ದಾರಿಯೂ ಇರಬೇಕು. ಒಂದು ವೇಳೆ ಅಸಾದುದ್ದೀನ್ ಅವರು ಪ್ರಚೋದನೆಕಾರಿ ಭಾಷಣ ಮಾಡಿದ್ರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ಭಾಸ್ಕರ್ ರಾವ್ ಅವರು ತಿಳಿಸಿದ್ದಾರೆ.
fifa world cup 2026- ಬಡವರ ಮಕ್ಕಳ ಕಾಲ್ಚಳಕ.. ಲಕ್ಷ್ಮೀ ಪುತ್ರರ ಆಟ.. ಶ್ರೀಮಂತರ ಮೋಜಿನ ಮಹಾ ವೇದಿಕೆ.. ಏನಿದು ಫುಟ್ಬಾಲ್ ಕ್ರೀಡೆಯ ಲೀಲೆ..! ⚽🔥
ಬಡವರ ಮಕ್ಕಳ ಕಾಲ್ಚಳಕ.. ಲಕ್ಷ್ಮೀ ಪುತ್ರರ ಆಟ.. ಶ್ರೀಮಂತರ ಮೋಜಿನ ಮಹಾ ವೇದಿಕೆ.. ಏನಿದು ಫುಟ್ಬಾಲ್ ಕ್ರೀಡೆಯ ಲೀಲೆ..! ⚽🔥 ಫುಟ್ಬಾಲ್ ಅಂದ್ರೆ ಬಡವರ ಮಕ್ಕಳ ಆಟ...








