Uttar pradesh : ಸಂಬಂಧಿಕರಿಂದಲೇ ಹತ್ತು ವರ್ಷದ ಬಾಲಕನ ನರಬಲಿ…..
ಹತ್ತು ವರ್ಷದ ಬಾಲಕನನ್ನ ಸಂಬಂಧಿಗಳೇ ನರಬಲಿ ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಪರ್ಸಾ ಗ್ರಾಮದ ನಿವಾಸಿ ಕೃಷ್ಣ ವರ್ಮಾ ಅವರ ಪುತ್ರ ವಿವೇಕ್ ಗುರುವಾರ ರಾತ್ರಿ ನಾಪತ್ತೆಯಾಗಿರುವುದಾಗಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಅದೇ ರಾತ್ರಿ ಹೊಲದಲ್ಲಿ ಮಗುವಿನ ದೇಹ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ವರ್ಮಾ ತಿಳಿಸಿದ್ದಾರೆ.
ಮೃತ ಮಗುವನ್ನ ಸೋದರ ಸಂಬಂಧಿ ಅನೂಪ್ ಹಾಗೂ ಇತರ ಇಬ್ಬರು ಸೇರಿ ಅಪಹರಿಸಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಅನೂಪ್ಗೆ ಎರಡೂವರೆ ವರ್ಷದ ಮಗನಿದ್ದು, ಮಾನಸಿಕವಾಗಿ ಅಸ್ವಸ್ಥನಾಗಿದ್ದ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ. ಯಾವುದೇ ಆಸ್ಪತ್ರೆಯಲ್ಲಿ ತೋರಿಸಿದರೂ ಚಿಕಿತ್ಸೆ ಫಲಿಸದಿದ್ದಾಗ ಮಾಂತ್ರಿಕರನ್ನ ಸಂಪರ್ಕಿಸಿದ್ದ. ಅನೂಪ್ನನ್ನ ನರಬಲಿ ನೀಡಲು ಆ ವ್ಯಕ್ತಿ ಪ್ರಚೋದಿಸಿದ್ದಾನೆ. ನಂತರ ಮೃತ ಮಗುವಿನ ಚಿಕ್ಕಪ್ಪ ಚಿಂತಾರಾಮ್ ಜೊತೆಗೂಡಿ ಗುದ್ದಲಿಯಿಂದ ಮಗುವನ್ನ ಕೊಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೂವರು ಆರೋಪಿಗಳಾದ ಅನೂಪ್, ಚಿಂತಾರಾಮ್ ಮತ್ತು ಮಾಂತ್ರಿಕನನ್ನ ಶನಿವಾರ ಬಂಧಿಸಲಾಗಿದ್ದು ಕೊಲೆ ಪ್ರಕರಣ ದಾಖಲಿಸಲಾಗಿದೆ.
10-year-old boy killed as ‘human sacrifice’ in UP, victim’s uncle among 3 held