ಪಾಕಿಸ್ತಾನದಲ್ಲಿ ಮತ್ತೆ ಹಿಂದೂ ದೇವಾಲಯದ ಮೇಲೆ ದಾಳಿ ನಡೆದಿದ್ದು, ಕಳೆದ 24 ಗಂಟೆಗಳಲ್ಲಿ 2 ದೇವಾಲಯಗಳನ್ನು ಬಂಡುಕೋರರ ಗುಂಪು ನೆಲಸಮ ಮಾಡಿದೆ.
ಆರಂಭದಲ್ಲಿ ಗುಂಡಿನ ದಾಳಿ ನಡೆಸಿರುವ ಬಂಡುಕೋರರ ಗುಂಪು, ದೇವಾಲಯದ ಮೇಲೆ ರಾಕೆಟ್ ಲಾಂಚ್ ಮಾಡಿದೆ. ರಾಕೆಟ್ ಲಾಂಚ್ ಮಾಡುವ ವೇಳೆ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. ಆದರೆ ಅದೃಷ್ಟವಶಾತ್ ರಾಕೆಟ್ ಸ್ಫೋಟಿಸದ ಕಾರಣ ದೊಡ್ಡ ಅವಘಡ ಸಂಭವಿಸಿಲ್ಲ. ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಆ ದೇಶದಲ್ಲಿ ಆಗುತ್ತಿರುವ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಈ ರೀತಿ ನಡೆಯುತ್ತಿದ್ದು, ಹಿಂದೂಗಳು, ಕ್ರಿಶ್ಚಿಯನ್ನರು, ಬೋಹ್ರಾ ಮುಸ್ಲಿಂರು, ಸಿಖ್ಖರು ಜೀವಂತ ನರಕ ಅನುಭವಿಸುತ್ತಿದ್ದಾರೆ. ಇವರ ಇಂತಹ ಪೈಶಾಚಿಕ ಕೃತ್ಯಗಳಿಂದಾಗಿ ಸ್ವಾತಂತ್ರ್ಯ ಸಿಕ್ಕಾಗ ಶೇ.14 ರಷ್ಟಿದ್ದ ಹಿಂದೂಗಳ ಸಂಖ್ಯೆ ಇಂದು ಪಾಕಿಸ್ತಾನದಲ್ಲಿ ಶೇ.2 ಕ್ಕೆ ಕುಸಿದಿದೆ. ಸಿಖ್ಖರ ಸ್ಥಿತಿ ಕೂಡ ಇದರಿಂದ ವಿಭಿನ್ನವಾಗಿಲ್ಲ. ಹಿಂದೂ ಮತ್ತು ಸಿಖ್ ಹೆಣ್ಣು ಮಕ್ಕಳ ಅಪಹರಣ, ಬಲವಂತದ ಮತಾಂತರ ಇಂದಿಗೂ ನಡೆಯುತ್ತಲೇ ಇದೆ. ಪಾಕಿಸ್ತಾನದಲ್ಲಿ ಮತ್ತೊಂದು ಅಮಾನವೀಯ ಘಟನೆಗೆ ಸಿಂಧ್ ಪ್ರಾಂತ್ಯ ಸಾಕ್ಷಿಯಾಗಿದೆ. ಬರೋಬ್ಬರಿ 150ಕ್ಕೂ ಹಳೆಯ ಮಂದಿರವನ್ನು ನೆಲಸಮ ಮಾಡಲಾಗಿದೆ.