ADVERTISEMENT
Thursday, February 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಾರ್ಜಲ ಮಂಥನ

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತು?

admin by admin
August 2, 2023
in ಮಾರ್ಜಲ ಮಂಥನ, Marjala Manthana, Newsbeat
Share on FacebookShare on TwitterShare on WhatsappShare on Telegram

ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತು?

How much do you know about Kaveri River?

Related posts

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

February 19, 2026
ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

February 19, 2026

ದಕ್ಷಿಣ ಮಂದಾಕಿನಿ, ಕರ್ನಾಟಕದ ಜೀವನದಿ ಕಾವೇರಿ. ಹಿಂದಿನ ಸಂಚಿಕೆಯಲ್ಲಿ ಕಾವೇರಿ ನದಿಗೆ ಕಾವೇರಿ ಹೆಸರು ಹೇಗೆ ಬಂತು ಅಂತ ಹಿಂದಿನ ಸಂಚಿಕೆಯಲ್ಲಿ ತಿಳಕೊಂಡ್ರಿ. ಅದರ ಲಿಂಕ್ ಡಿಸ್ಕ್ರಿಪ್ಶನ್ ನಲ್ಲಿ ಇದೆ ನೋಡಬಹುದು. ಈ ಸಂಚಿಕೆಯಲ್ಲಿ ಕಾವೇರಿ ನದಿ ಹುಟ್ಟುವುದು ಎಲ್ಲಿ? ಯಾವಾಗ? ಯಾವ ರಾಜ್ಯಗಳಲ್ಲಿ ಹರಿಯುತ್ತೆ ತಿಳಿದುಕೊಳ್ಳೋಣ.

ವೀರರ ನಾಡು, ಮಲೆನಾಡಿನ ತಪ್ಪಲು ಪಶ್ಚಿಮ ಘಟ್ಟ ಕೊಡಗು ಜಿಲ್ಲೆಯ ತಲಕಾವೇರಿಯೆಂಬ ಸ್ಥಳದಲ್ಲಿ ಕಾವೇರಿ ನದಿ ಉಗಮವಾಗುತ್ತದೆ. ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ದಿನವನ್ನು ತುಲಾ ಸಂಕ್ರಮಣವೆಂದು ಕರೆಯುತ್ತಾರೆ. ಆಂಗ್ಲ ಕ್ಯಾಲೆಂಡರ್ ಪ್ರಕಾರ ಇದು ಅಕ್ಟೋಬರ್ ತಿಂಗಳಿನಲ್ಲಿ ಬರುತ್ತೆ.

ತುಲಾ ಸಂಕ್ರಮಣದ ದಿನ ನಿರ್ಧರಿತ ಲಗ್ನ ಹಾಗೂ ಮುಹೂರ್ತದಲ್ಲಿ ಗಂಗೆ ಮೊದಲು ಮಾಡಿಕೊಂಡು ಆರು ಪವಿತ್ರ ನದಿಗಳು ಕಾವೇರಿಯಲ್ಲಿ ಬಂದು ಸೇರುತ್ತವೆ ಎಂಬ ನಂಬಿಕೆಯಿದೆ. ಹೀಗೆ ಬಂದು ಸೇರುವ ಈ ಪುಣ್ಯ ದಿನದಂದು ತಲಕಾವೇರಿಯ ಜ್ಯೋತಿ ಮಂಟಪದ ಮುಂದಿರುವ ಕುಂಡದಲ್ಲಿ ಕಾವೇರಿ ನದಿ ಉಗಮವಾಗುತ್ತದೆ.

ನಂತರ ಕೊಡಗಿನ ಬೆಟ್ಟಗಳಲ್ಲಿ ಹರಿದು ನಂತರ ದಕ್ಷಿಣ ಪ್ರಸ್ಥಭೂಮಿಯ ಮೇಲೆ ಪೂರ್ವಕ್ಕೆ ಹರಿಯುತ್ತಾಳೆ. ಮುಂದೆ ಮೈಸೂರು, ಮಂಡ್ಯ ಜಿಲ್ಲೆಯನ್ನು ಪ್ರವೇಶಿಸುತ್ತಾಳೆ. ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜ ಸಾಗರ ಆಣೆಕಟ್ಟು ಕಟ್ಟಲಾಗಿದೆ. ಈ ಮೂಲಕ ಮಂಡ್ಯ ಜಿಲ್ಲೆಯ ಜನರ ಬದುಕಿಗೆ ಜೀವನಾಡಿಯಾಗಿದ್ದಾಳೆ. ಮೈಸೂರು, ಮಂಡ್ಯ, ರಾಜಧಾನಿ ಬೆಂಗಳೂರು ಜನತೆಗೆ ಜೀವಜಲವಾಗಿದ್ದಾಳೆ.
ಅಲ್ಲದೆ ಮಂಡ್ಯ ಜಿಲ್ಲೆಯ, ಮಳವಳ್ಳಿಯಲ್ಲಿ ಶಿವನಸಮುದ್ರದಲ್ಲಿ 320 ಅಡಿಗಳ ಎತ್ತರದಿಂದ ಧುಮುಕಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತಾಳೆ.

ಕರ್ನಾಟಕದಲ್ಲಿ ಕಾವೇರಿ ನದಿಗೆ ಹನ್ನೆರಡು ಅಣೆಕಟ್ಟುಗಳಿವೆ. ಈ ಎಲ್ಲ ಅಣೆಕಟ್ಟುಗಳ ಮುಖ್ಯ ಉದ್ದೇಶ ನೀರಾವರಿ. ಕಾವೇರಿ ನದಿ ತಟದಲ್ಲಿ ಬರುವ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಶ್ರೀರಂಗಪಟ್ಟಣ ಒಂದು.

ಕಾವೇರಿ ನದಿಗೆ ಪ್ರಮುಖವಾಗಿ ಹರಂಗಿ, ಹೇಮಾವತಿ, ಕಬಿನಿ, ಭವಾನಿ, ಲಕ್ಷ್ಮಣ ತೀರ್ಥ, ನೊಯಾಲ್ ಮತ್ತು ಅರ್ಕಾವತಿ ಸೇರಿದಂತೆ ಹಲವು ಉಪನದಿಗಳಿವೆ.

ಕಾವೇರಿ ಮೂರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಹರಿಯುತ್ತಾಳೆ. ಕರ್ನಾಟಕದಲ್ಲಿ 34,273 ಚದರ ಕಿಲೋಮೀಟರ್, ತಮಿಳುನಾಡು, 43,868 ಚದರ ಕಿಲೋಮೀಟರ್, ಕೇರಳದಲ್ಲಿ 2,866 ಚದರ ಕಿಲೋಮೀಟರ್ ಮತ್ತು ಪುದುಚೇರಿ, 148 ಚದರ ಕಿಲೋಮೀಟರ್ ಹರಿಯುತ್ತಾಳೆ.

ಹೊಗೇನಕಲ್ ಜಲಪಾತವಾಗಿ ಧುಮುಕಿ ತಮಿಳುನಾಡನ್ನು ಪ್ರವೇಶಿಸಿ ಕಾವೇರಿ ತಂಜಾವೂರು ಜಿಲ್ಲೆಯ ಮುಖಾಂತರ ಹರಿದು ಕೊನೆಗೆ ಇಬ್ಭಾಗವಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತಾಳೆ.

Tags: kaveri riverriverRiver KAveri
ShareTweetSendShare
Join us on:

Related Posts

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

by Shwetha
February 19, 2026
0

ಚುನಾವಣಾ ಆಯೋಗ ರಾಜ್ಯಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ್ದು, ಮಾರ್ಚ್ 16ರಂದು ಮತದಾನ ನಡೆಯಲಿದೆ. ಒಟ್ಟು 10 ರಾಜ್ಯಗಳ 37 ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ...

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

by Shwetha
February 19, 2026
0

ರಾಜ್ಯದ ರೈತ ಸಮುದಾಯಕ್ಕೆ ಇಲ್ಲಿದೆ ಒಂದು ಸಂತಸದ ಸುದ್ದಿ. ಜಮೀನುಗಳಿಗೆ ಹೋಗಲು ದಾರಿ ಇಲ್ಲದೆ ಪರದಾಡುತ್ತಿದ್ದ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಐತಿಹಾಸಿಕ ಮತ್ತು ಮಹತ್ವದ...

ಬಂಗಾರದ ಬೆಲೆ ಅರ್ಧಕ್ಕರ್ಧ ಇಳಿಕೆಯಾಗುವ ಸಾಧ್ಯತೆ ಹೂಡಿಕೆದಾರರಿಗೆ ತಜ್ಞರು ನೀಡಿದ ಮಹತ್ವದ ಸಲಹೆ ಏನು ಗೊತ್ತಾ?

ಬಂಗಾರದ ಬೆಲೆ ಅರ್ಧಕ್ಕರ್ಧ ಇಳಿಕೆಯಾಗುವ ಸಾಧ್ಯತೆ ಹೂಡಿಕೆದಾರರಿಗೆ ತಜ್ಞರು ನೀಡಿದ ಮಹತ್ವದ ಸಲಹೆ ಏನು ಗೊತ್ತಾ?

by Shwetha
February 19, 2026
0

ಬಂಗಾರ ಎಂದರೆ ಭಾರತೀಯರಿಗೆ ಎಲ್ಲಿಲ್ಲದ ಪ್ರೀತಿ. ಶುಭ ಸಮಾರಂಭಗಳಿಗೆ, ಮದುವೆ ಮುಂಜಿಗಳಿಗೆ ಚಿನ್ನದ ಆಭರಣ ಕೊಳ್ಳುವುದು ಒಂದು ಸಂಪ್ರದಾಯವಾದರೆ, ಕಷ್ಟಕಾಲಕ್ಕೆ ಆಗಲಿ ಎಂದು ಹಳದಿ ಲೋಹದ ಮೇಲೆ...

ಮಾ.5ರಂದು ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ… ಬಾಕಿ ಬಿಲ್ ಬಿಡುಗಡೆಗೆ ಆಗ್ರಹ

ಮಾ.5ರಂದು ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ… ಬಾಕಿ ಬಿಲ್ ಬಿಡುಗಡೆಗೆ ಆಗ್ರಹ

by Shwetha
February 19, 2026
0

ರಾಜ್ಯ ಗುತ್ತಿಗೆದಾರರ ಸಂಘವು ಬಾಕಿ ಬಿಲ್‌ಗಳ ಬಿಡುಗಡೆಗೆ ಆಗ್ರಹಿಸಿ ಮಾರ್ಚ್ 5ರಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಕುರಿತು ಸಂಘದ ಅಧ್ಯಕ್ಷ ಆರ್. ಮಂಜುನಾಥ್...

ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆಯಬೇಕಿತ್ತು: ಪಾಕ್ ಹಾಕಿ ತಂಡದ ನಾಯಕ ಗಂಭೀರ ಆರೋಪ

ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆಯಬೇಕಿತ್ತು: ಪಾಕ್ ಹಾಕಿ ತಂಡದ ನಾಯಕ ಗಂಭೀರ ಆರೋಪ

by Shwetha
February 19, 2026
0

ಆಸ್ಟ್ರೇಲಿಯಾ ಪ್ರವಾಸದಿಂದ ಹಿಂದಿರುಗಿದ ಬಳಿಕ ಪಾಕಿಸ್ತಾನ ಹಾಕಿ ತಂಡದ ನಾಯಕ ಶಕೀಲ್ ಅಹ್ಮದ್ ಪಾಕಿಸ್ತಾನ ಹಾಕಿ ಫೆಡರೇಶನ್ (PHF) ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ತಂಡದ ನಿರ್ವಹಣೆಯಲ್ಲಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram