ಈಶಾನ್ಯ ಭಾರತದ ಹಲವು ಕಡೆ ಕಂಪಿಸಿದ ಭೂಮಿ
ಮಣಿಪುರ, ಜೂನ್ 21: ಈಶಾನ್ಯ ಭಾರತದ ಹಲವು ಕಡೆ ಲಘು ಪ್ರಮಾಣದಲ್ಲಿ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪನದಲ್ಲಿ 5.1 ತೀವ್ರತೆ ದಾಖಲಿಸಿದೆ. ಭೂಮಿಯ ಮೇಲ್ಮೈಯಿಂದ 35 ಕಿ.ಮೀ ಆಳದಲ್ಲಿ ಮಿಜೋರಾಂನಲ್ಲಿರುವ ಐಜಾಲ್ಕೇಂದ್ರ ಭೂಕಂಪನದ ಕೇಂದ್ರ ಸ್ಥಳವಾಗಿತ್ತು ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಮಿಜೋರಾಂ, ಮೇಘಾಲಯ, ಮಣಿಪುರ ಮತ್ತು ಇತರ ಈಶಾನ್ಯ ಭಾರತದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತದ ಹಲವು ಕಡೆ ಆಗಾಗ ಭೂಮಿ ಕಂಪಿಸಿದ್ದ ಹಿನ್ನಲೆಯಲ್ಲಿ ಜನರು ಆತಂಕಗೊಂಡಿದ್ದರು. ಇಂದಿನ ಭೂಕಂಪನದಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ ಎಂದು ಆಯಾಯ ಜಿಲ್ಲೆಯ ಪೊಲೀಸ್ ನಿಯಂತ್ರಣ ಕೊಠಡಿ ತಿಳಿಸಿದೆ.
ಈಗಾಗಲೇ ಜನರು ಕೊರೊನಾ ಮಹಾಮಾರಿಯಿಂದ ನಲುಗಿದ್ದು, ಅದರ ನಡುವೆ ಇಂದು ಸೂರ್ಯಗ್ರಹಣ ಕೂಡ ಸಂಭವಿಸಿದೆ.
ಮಣಿಪುರದಲ್ಲಿ ಸಂಜೆ 4.16 ರ ಸುಮಾರಿಗೆ ಕಂಪಿಸಿರುವ ಭೂಮಿಯು ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯನ್ನು ದಾಖಲಿಸಿದೆ ಎಂದು ಅರ್ಥ್ ಸೈನ್ಸ್ ಡಿಪಾರ್ಟ್ಮೆಂಟ್ ಆಫ್ ಮಣಿಪುರ ಯುನಿವರ್ಸಿಟಿ ಹೇಳಿದ್ದು, ಭೂಕಂಪದ ಕೇಂದ್ರಬಿಂದು ನೆರೆಯ ರಾಜ್ಯ ಮಿಜೋರಾಂನ ಎನ್ಗೊಪಾ ಪ್ರದೇಶದಿಂದ 9 ಕಿ.ಮೀ ದೂರದಲ್ಲಿದೆ ಎಂದು ತಿಳಿಸಿದೆ.