ರಾಮನಗರ: ಕಾರ್ಮಿಕರು ಮನೆಗೆ ಕೆಲಸಕ್ಕೆ ಬರುತ್ತಿಲ್ಲ ಎಂದು ಕೋಪಗೊಂಡು ಅವರ ಮಗಳ ಮೇಲೆ ನಾಯಿ ಛೂ ಬಿಟ್ಟಿರುವ ಘಟನೆಯೊಂದು ನಡೆದಿದೆ.
ಜಿಲ್ಲೆಯ ಮಾಗಡಿ ತಾಲೂಕಿನ ಚಿಕ್ಕ ಸೋಲೂರಿನಲ್ಲಿ ಈ ಘಟನೆ ನಡೆದಿದೆ. ಯುವತಿಯ ಗುಪ್ತಾಂಗ ಹಾಗೂ ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗರಾಜು ಎಂಬಾತ ಕೋಳಿ ಪಾರ್ಮ್ ನಡೆಸುತ್ತಿದ್ದ. ಸುರೇಶ್ ಹಾಗೂ ಲೀಲಾವತಿ ದಂಪತಿ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಕೆಲವು ದಿನಗಳಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ. ಬರುವಂತೆ ಕೇಳಿಕೊಂಡರೂ ದಂಪತಿ ಬರುತ್ತಿರಲಿಲ್ಲ. ಇದು ನಾಗರಾಜು ಕೋಪಕ್ಕೆ ಕಾರಣವಾಗಿದೆ.
ಆದರೆ, ನಾಗರಾಜು ಸುರೇಶ್ ಹಾಗೂ ಲೀಲಾವತಿ ಅವರ ಮಗಳು ಶಾಲೆಯಿಂದ ಬರುತ್ತಿದ್ದ ವೇಳೆ ನಾಯಿ ಛೂ ಬಿಟ್ಟಿದ್ದಾನೆ. ಈ ವೇಳೆ ಯುವತಿ ಚೀರಾಡಿದ್ದಾರೆ. ಆಗ ಸ್ಥಳೀಯರು ರಕ್ಷಿಸಿ, ವೀಣಾಳನ್ನು ಮಾಗಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾಳಿಯಲ್ಲಿ ಯುವತಿಯ ಗುಪ್ತಾಂಗ ಹಾಗೂ ಕಾಲಿನ ಭಾಗಕ್ಕೆ ಗಾಯಗಳಾಗಿವೆ. ಈ ಕುರಿತು ಯುವತಿಯ ತಂದೆ ದೂರು ದಾಖಲಿಸಿದ್ದು, ನಾಗರಾಜುನನ್ನು ವಶಕ್ಕೆ ಪಡೆಯಲಾಗಿದೆ.