ಹಾವೇರಿ: ಪ್ರತಿ ವರ್ಷದಂತೆ ಈ ವರ್ಷವು ದೇವರ ಗುಡ್ಡದಲ್ಲಿ ಕಾರ್ಣಿಕ ಹೇಳಲಾಗಿದೆ. ಮಾಲತೇಶ ದೇವರ (Malatesh Swamy) ಕಾರ್ಣಿಕದಲ್ಲಿ (Goravayya Karnika) ಗೊರವಯ್ಯ ಸ್ವಾಮಿ ಅವರು, ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್ ಎಂದು ನುಡಿದಿದ್ದಾರೆ.
ಬಿಲ್ಲನ್ನೇರಿದ ಗೊರವಪ್ಪ ನಾಗಪ್ಪ ಉರ್ಮಿ ಕಾರ್ಣಿಕ ನಡುದಿದ್ದಾರೆ. ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಕಾರ್ಣಿಕ ವಾಣಿ ವಿಶ್ಲೇಷಣೆ ಮಾಡಿದ್ದಾರೆ. ಈ ಬಾರಿ ಮುಕ್ಕೋಟಿ ಜನ ಅನ್ನದಾತರು ಸಾವಿರಾರು ರೂ. ಖರ್ಚು ಮಾಡಿದರೂ ಬೆಳೆಗಳು ಬರಲಿಲ್ಲ. ಮಳೆಯಾಗದ ಹಿನ್ನೆಲೆಯಲ್ಲಿ ಬರಗಾಲ ಬಂದಿದೆ. ಅನ್ನದಾತರು ಕೈ ಸುಟ್ಟುಕೊಂಡಿದ್ದಾರೆ. ರಾಜಕೀವಾಗಿ (Politics) ಕೋಟ್ಯಂತರ ಜನ ಮತ ಹಾಕಿ ಸರ್ಕಾರವನ್ನು ಬಹುಮತದಿಂದ ಬರುವಂತೆ ಮಾಡಿದ್ದಾರೆ. ಮಹಿಳೆಯ ಹಸ್ತಕ್ಷೇಪದಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಲಿದೆ. ಸರ್ಕಾರ ಏರುಪೇರು ಆಗುವ ಹಂತಕ್ಕೆ ತಲುಪಲಿದೆ ಎಂದು ವಿಶ್ಲೇಷಿಸಿದ್ದಾರೆ.
ಜಿಲ್ಲೆಯ ರಾಣೇಬೆನ್ನೂರಿನ (Ranebennur) ದೇವರಗುಡ್ಡದ (Devaragudda) ಮಾಲತೇಶ ದೇವಸ್ಥಾನದಲ್ಲಿ ಈ ಕಾರ್ಣಿಕ ನಡೆದಿದೆ.