ಜಿಲ್ಲಾಡಳಿತಕ್ಕೆ ಸುಳ್ಳು ಮಾಹಿತಿ ನೀಡಿದ ಸಹೋದರರು
ಉಡುಪಿ, ಜೂನ್ 28: ಪಡುಬಿದ್ರಿಯ ಇಬ್ಬರು ಕೊರೊನಾ ಪೀಡಿತ ಸಹೋದರರು ಜಿಲ್ಲಾಡಳಿತಕ್ಕೆ ಸುಳ್ಳು ಮಾಹಿತಿ ನೀಡಿರುವುದು ಇದೀಗ ಸಾಬೀತಾಗಿದೆ. ಪಡುಬಿದ್ರಿಯ ನಡ್ಸಾಲು ಗ್ರಾಮದ 42 ವರ್ಷ ಮತ್ತು 37 ವರ್ಷದ ಸಹೋದರರಿಗೆ ಕೊರೋನಾ ಸೋಂಕು ಜೂನ್ 25 ರಂದು ಕೊರೊನಾ ಸೋಂಕು ಪತ್ತೆಯಾಗಿತ್ತು. ಅವರ ಸಂಪರ್ಕದಿಂದಾಗಿ 1 ವರ್ಷದ ಮಗುವೂ ಸೇರಿದಂತೆ 4 ಮಂದಿಗೆ ಕೊರೋನಾ ಸೋಂಕು ಹರಡಿದೆ.
ಸಹೋದರರಿಗೆ ಕೊರೊನಾ ಸೋಂಕು ಪತ್ತೆಯಾದ ಸಂದರ್ಭದಲ್ಲಿ ಆರೋಗ್ಯಾಧಿಕಾರಿಗಳು ಅವರ ಸಂಪರ್ಕ ಪತ್ತೆ ಹಚ್ಚಲು ಮಾಹಿತಿ ಸಂಗ್ರಹಿಸುವಾಗ ಅವರು ತಾವೆಲ್ಲೂ ಹೋಗಿರಲಿಲ್ಲ, ಮನೆಯಲ್ಲಿಯೇ ಇದ್ದೆವು, ಸೋಂಕು ಹೇಗೆ ಬಂತು ಎಂಬುದು ಗೊತ್ತಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಅವರು ಮಂಗಳೂರು, ಉಳ್ಳಾಲ, ಬಂಟ್ವಾಳ ಮುಂತಾದೆಡೆ ಹೋಗಿ ಬಂದಿರುವುದು ಪತ್ತೆಯಾಗಿದೆ. ತಮ್ಮ
ಟ್ರಾವೆಲ್ ಹಿಸ್ಟರಿ ಬಚ್ಚಿಟ್ಟ ಸಹೋದರರು ಪ್ರಾಥಮಿಕ ಸಂಪರ್ಕದ ಬಗ್ಗೆ ಸುಳ್ಳು ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದರಿಂದ ಸಂಪರ್ಕಿತರನ್ನು ಕೂಡಲೇ ಪತ್ತೆ ಹಚ್ಚಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.