ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ (Renukaswamy) ಗೆ ಪಾಪಿಗಳು ಎಷ್ಟೊಂದು ಚಿತ್ರ ಹಿಂಸೆ ನೀಡಿದ್ದರು ಎಂಬುವುದನ್ನು ಬಾಯಿ ಬಿಡುತ್ತಿದ್ದಾರೆ. ದರ್ಶನ್ ಆಂಡ್ ಗ್ಯಾಂಗ್ ನ ಒಂದೊಂದೇ ಕರಾಳ ಮುಖಗಳು ಈಗ ಅನಾವರಣ ವಾಗುತ್ತಿವೆ.
ಮೆಸೇಜ್ ಮಾಡಿದ್ದಕ್ಕೆ ಇಷ್ಟೊಂದು ಚಿತ್ರಹಿಂಸೆ ನೀಡಿದರಾ? ಎಂಬಷ್ಟು ನೋವು, ಸಂಕಟ, ಆಶ್ಚರ್ಯ ಪಡುವಂತೆ ಗ್ಯಾಂಗ್ ನ ಮುಖವಾಡ ಬಯಲಾಗುತ್ತಿದೆ. ನಟ ದರ್ಶನ್ (Challenging Star Darshan) ಸಮ್ಮುಖದಲ್ಲೇ ರೇಣುಕಾಸ್ವಾಮಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟಿದ್ದಾರೆ ಎಂಬ ಸತ್ಯ ಹೊರ ಬಿದ್ದಿದೆ. ಈ ಚಿತ್ರಹಿಂಸೆಯೇ ಆರೋಪಿಗಳನ್ನು ಮತ್ತೊಮ್ಮೆ ಕಸ್ಟಡಿಗೆ ಪಡೆಯುವಂತೆ ಮಾಡಿದೆ.
A5 ಆರೋಪಿ ನಂದೀಶ್ ಹಾಗೂ A13 ಆರೋಪಿ ದೀಪಕ್, ಸ್ವಾಮಿಗೆ ಮನ ಬಂದಂತೆ ಹಿಂಸೆ ನೀಡಿದ್ದಾರೆ. ರೇಣುಕಾಸ್ವಾಮಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟಿದ್ದಾರೆ. ಇವರಿಬ್ಬರು ವಿದ್ಯುತ್ ಶಾಕ್ ನೀಡಿ ಹಿಂಸೆ ನೀಡಿರುವುದು ತನಿಖೆಯಲ್ಲಿ ಮಾತ್ರವಲ್ಲ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿಯೂ ದೃಢಪಟ್ಟಿದೆ.
ಎರಡೂ ಭುಜದಲ್ಲಿ 5 ಕಡೆ ಸುಟ್ಟಿರುವ ಗಾಯಗಳಿವೆ. ಮನಬಂದಂತೆ ಥಳಿಸಿದ್ದಲ್ಲದೇ, ಮರ್ಮಾಂಗಕ್ಕೆ ಕಾಲಿಂದ ಒದ್ದಿದ್ದಾರೆ. ಆನಂತರ ಕರೆಂಟ್ ಶಾಕ್ ನೀಡಿದ್ದಾರೆ ಎಂಬುವುದು ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖವಾಗಿದೆ. ಆಘಾತ ಹಾಗೂ ರಕ್ತಸ್ರಾವದಿಂದ ರೇಣುಕಾಸ್ವಾಮಿ ಡೆತ್ ಆಗಿರುವುದು ಬಯಲಿಗೆ ಬಂದಿದೆ. ಈ ಕುರಿತು ರೋಪಪಿಗಳಾದ ದೀಪಕ್ ಮತ್ತು ನಂದೀಶ್ ರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ.