ADVERTISEMENT
Tuesday, March 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Karavali Karnataka

ಮಲೆನಾಡು ಗಿಡ್ಡ ತಳಿಯನ್ನು ಮನೆಗೆ ಸ್ವಾಗತಿಸಿದ ಶಾಲೀನಿ ರಜನೀಶ್

ಮಲೆನಾಡು ಗಿಡ್ಡ ತಳಿಯ ಗೋವು

Author2 by Author2
August 30, 2024
in Karavali Karnataka, Kalyana karnataka, Malenadu Karnataka, Marjala Manthana, Newsbeat, Saaksha Special, ಎಸ್ ಸ್ಪೆಷಲ್, ಕರಾವಳಿ ಕರ್ನಾಟಕ, ನ್ಯೂಸ್ ಬೀಟ್, ಮಲೆನಾಡು ಕರ್ನಾಟಕ, ಮಾರ್ಜಲ ಮಂಥನ, ರಾಜ್ಯ
Share on FacebookShare on TwitterShare on WhatsappShare on Telegram

ಗೋವು ಬೆಳಕಿಗೂ, ಬ್ರಹ್ಮ ವಿದ್ಯೆಗೂ, ಬ್ರಹ್ಮ ತೇಜಸ್ಸಿಗೂ ಸಂಕೇತ ಅಂತಾರೆ. ಹೀಗಾಗಿಯೇ ಗೋವನ್ನು ಮುಕ್ಕೋಟಿ ದೇವರಿಗೆ ಸರಿಸಮಾನವಾಗಿ ಭಾರತೀಯ ಸಂಸ್ಕೃತಿಯಲ್ಲಿ ಪೂಜಿಸಲಾಗುತ್ತಿದೆ. ಭಾರತದಲ್ಲಿ ಹಲವಾರು ಮಠಾಧೀಶರು ಗೋವು ರಕ್ಷಣೆಗಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಕರಾವಳಿ ಭಾಗದಲ್ಲಂತೂ ಗೋವು ರಕ್ಷಣೆಯೇ ಜೀವನದ ಉದ್ಧೇಶವಾದಂತಿದೆ. ಈಗ ಈ ಸಾಲಿಗೆ ಹಸಿರ ಸಿರಿ ನಾಡಿನ ಅಕ್ಷಯ ಆಳ್ವ ಅವರಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬಂದು ನಿಂತಿದ್ದಾರೆ. ಗೋವು ಪ್ರಿಯರಾಗಿರುವ ಅವರು ಗೋವು ಸಂತತಿಯ ಉಳಿವಿಗೆ ಕೈ ಜೋಡಿಸಿ ನಿಂತಿದ್ದಾರೆ.

Related posts

ಮಾ.11ರಂದು ಫ್ರೀಡಂ ಪಾರ್ಕ್‌ನಲ್ಲಿ ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

ಮಾ.11ರಂದು ಫ್ರೀಡಂ ಪಾರ್ಕ್‌ನಲ್ಲಿ ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

March 10, 2026
ಬೆಂಗಳೂರು, ಮುಂಬೈ ನಮಗೆ ಸಾಟಿಯಲ್ಲ, ನಮ್ಮ ಗುರಿ ಸಿಂಗಪುರ: ಸಿಲಿಕಾನ್ ಸಿಟಿಗೆ ಟಾಂಗ್ ಕೊಟ್ಟ ತೆಲಂಗಾಣ ಸಿಎಂ ರೇವಂತ್ ರೆಡ್ಡಿ

ಬೆಂಗಳೂರು, ಮುಂಬೈ ನಮಗೆ ಸಾಟಿಯಲ್ಲ, ನಮ್ಮ ಗುರಿ ಸಿಂಗಪುರ: ಸಿಲಿಕಾನ್ ಸಿಟಿಗೆ ಟಾಂಗ್ ಕೊಟ್ಟ ತೆಲಂಗಾಣ ಸಿಎಂ ರೇವಂತ್ ರೆಡ್ಡಿ

March 10, 2026

ರಾಜ್ಯ ಸೇರಿದಂತೆ ದೇಶದಲ್ಲಿ ಹಲವಾರು ತಳಿಯ ಗೋವುಗಳಿದ್ದರೂ ಶಾಲಿನಿ ರಜನೀಶ್ ಅವರು ಮಲೆನಾಡು ಗಿಡ್ಡ ತಳಿಯ ಮೇಲೆ ಆಸಕ್ತಿ ಹೊಂದಿ ತಮ್ಮ ಮನೆಯಲ್ಲಿ ಸಾಕಲು ಮುಂದಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಗೋವು ಸಾಕಾಣಿಕೆಯಿಂದ ದೂರವಾಗುತ್ತಿರುವ ಸಂದರ್ಭದಲ್ಲಿ ಐಎಎಸ್ ಅಧಿಕಾರಿಯಾದರೂ ಶಾಲಿನಿ ರಜನೀಶ್ ಅವರು ಗೋವು ಸಾಕುವ ಆಸಕ್ತಿ ತೋರಿಸಿದ್ದು, ಸಮಾಜಕ್ಕೆ ಒಂದು ಮಾದರಿಯೇ ಸರಿ. ಕರಾವಳಿಯ ಅಕ್ಷಯ ಆಳ್ವರ್ ಮನೆಗೆ ಬಂದ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಗಿಡ್ಡ ತಳಿಯ ಕರುವನ್ನು ಈಗ ಶಾಲಿನಿ ಅವರಿಗಾಗಿ ಆಯ್ಕೆ ಮಾಡಿದ್ದಾರೆ.

ಸುಮಾರು 25 ವರ್ಷಗಳಿಂದ ರಾಮಚಂದ್ರಾಪುರ ಮಠದಿಂದ ಗೋವು ರಕ್ಷಣೆಯ ಮಹಾಪರಂಪರೆಯ ಮುಂದುವರೆದುಕೊಂಡು ಬಂದಿದೆ. ಕಾಮದುಘಾ ಯೋಜನೆಯ ಉದ್ಘೋಷಣೆಯೇ ಮಠದ್ದಾಗಿದೆ. ಅಳಿವಿನಂಚಿನಲ್ಲಿನ ದೇಶೀಯ ಗೋವುಗಳನ್ನು ರಕ್ಷಿಸಿ, ಉಳಿಸುವುದು ಇದರ ಉದ್ಧೇಶವಾಗಿದೆ. ಈ ಕ್ರಾಂತಿಯಲ್ಲಿ ಈಗ ಹತ್ತಾರು ತಳಿಗಳ ಗೋವುಗಳನ್ನು ಸಂರಕ್ಷಿಸಿ, ಪೋಷಿಸಲಾಗುತ್ತಿದೆ. ಅಲ್ಲದೇ, ಅವುಗಳಿಂದ ಲಕ್ಷಿಸುವ ಆರೋಗ್ಯಕರ ಸಾರ ಹಲವರ ಬದುಕಿಗೆ ಆಸರೆಯಾಗಿ ನಿಲ್ಲುತ್ತಿವೆ.

ಇಲ್ಲಿ ಗೋವು ಉತ್ಪನ್ನಗಳನ್ನು ಸೃಷ್ಟಿಸಿ ಜನರ ಬದುಕಿಗೆ ಹಂಚಲಾಗುತ್ತಿದೆ. ಇದರಿಂದ ಲಾಭ ಪಡೆದವರು, ಆರೋಗ್ಯ ಪಡೆದವರು, ಬದುಕು ಹಸಿನಾಗಿಸಿಕೊಂಡವರು ಕೂಡ ಈಗ ಅದೇ ಕಾಯಕಕ್ಕೆ ಮುಂದಾಗಿದ್ದಾರೆ. ಗೋವು ಪ್ರಚಾರ ನಡೆಸಿ, ಮುಕ್ಕೋಟಿ ದೇವರ ರೂಪದ ಗೋವು ರಕ್ಷಿಸುವುದರ ಮೂಲಕ ಆರೋಗ್ಯ, ಪರಿಸರ, ಸಮಾಜ ಉಳಿಸಿಕೊಳ್ಳಲು ಟೊಂಕಕಟ್ಟಿ ನಿಲ್ಲುತ್ತಿದ್ದಾರೆ.

ಮುಖ್ಯ ಸಂಚಾಲಕರಾಗಿರುವ ಸುಳ್ಯ ತಾಲೂಕು ನಿಂತಿಕಲ್ಲು ಸಮೀಪದ ಅಲೆಕ್ಕಾಡಿಯ ಅಕ್ಷಯ ಆಳ್ವ ಅವರು ಆಸಕ್ತರಿಗೆ ಮಲೆನಾಡು ಗಿಡ್ಡ ತಳಿಯನ್ನು ನೀಡಿ, ಅದನ್ನು ಪೋಷಿಸಿ, ಬೆಳೆಸುವ ಮಹಾನ್ ಕಾರ್ಯ ಮಾಡುತ್ತಿದ್ದಾರೆ. ಕೆಲವೊಮ್ಮೆ ಆಯ್ದ ರೈತರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಈಗ ಈ ಆಂದೋಲನಕ್ಕೆ ರೈತರು ಕೈ ಜೋಡಿಸಿದ್ದಾರೆ. ಹೀಗಾಗಿ ಅಕ್ಷಯ ಅವರ ಮಹಾನ್ ಕಾರ್ಯದಿಂದಾಗಿ ನಮ್ಮ ವಿಶೇಷ ತಳಿ ಮಲೆನಾಡು ಗಿಡ್ಡ ಜನಪ್ರಿಯತೆ ಪಡೆದು, ರೈತರ, ಜನರ ಮನೆ-ಮನಗಳಲ್ಲಿ ಸ್ಥಾನ ಪಡೆದು, ಆರೋಗ್ಯ, ಕುಟುಂಬ ಸೌಖ್ಯ, ಸಿರಿ ಕರುಣಿಸುತ್ತಿದೆ.

25 ವರ್ಷಗಳ ಹಿಂದೆ ರಾಮಚಂತ್ರಪುರ ಮಠ, ದೇಸಿ ಗೋವುಗಳ ಸಂರಕ್ಷಣೆಗೆ ಕಾಮದುಘಾ ಯೋಜನೆ ಆರಂಭಸಿತ್ತು. ಅದರ ಮುಂದಿನ ಹೆಜ್ಜೆಯಾಗಿ ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನ ನಡೆಯುತ್ತಿದ್ದು, ಇದರ ಮುಖ್ಯ ಸಂಚಾಲಕರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ನಿಂತಿಕಲ್ಲು ಸಮೀಪದ ಅಲೆಕ್ಕಾಡಿಯ ಅಕ್ಷಯ ಆಳ್ವ ಅಭಿಮಾನವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಪದವೀಧರರಾಗಿರುವ ಅಕ್ಷಯ್, ತಮ್ಮ ಹುದ್ದೆಯನ್ನು ಬಿಟ್ಟು ಮಲೆನಾಡು ಗಿಡ್ಡ ತಳಿಯ ಸಂರಕ್ಷಣೆಗೆ ಶ್ರಮಿಸುತ್ತಿದ್ದಾರೆ. ಈಗಾಗಲೇ ತಮ್ಮ ಮನೆಯಲ್ಲಿ 30ಕ್ಕೂ ಹೆಚ್ಚು ಮಲೆನಾಡು ಗಿಡ್ಡ ತಳಿ ಗೋವುಗಳನ್ನು ಸಾಕಾಣೆ ಮಾಡುತ್ತಿದ್ದಾರೆ. ಹೀಗಾಗಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ತಮ್ಮ ಮನೆಯಲ್ಲಿ ಮಲೆನಾಡು ಗಿಡ್ಡ ತಳಿಯ ಗೋವು ಸಾಕಾಣಿಗೆ ಮುಂದಾಗಿದ್ದಾರೆ. ಅಕ್ಷಯ್ ಅವರ ಮನೆಯಿಂದ ಹಸು ಮತ್ತು ಕರುವನ್ನು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳ ಮೂಲಕ ಶಾಲಿನಿ ರಜನೀಶ್ ಅವರ ಮನೆಗೆ ಹಸ್ತಾಂತರ ಮಾಡಲಾಗಿದೆ. ಅಕ್ಷಯ್ ಆಳ್ವ ಅವರ ತಾಯಿ, ಪತ್ನಿ ಹಾಗೂ ಸಹೋದರಿಯರು ಸೇರಿ ಕುಟುಂಬಸ್ಥರು ಸಂಪ್ರದಾಯದಂತೆ ಗೋವುಗಳನ್ನು ಕಳಿಸಿಕೊಟ್ಟಿದ್ದಾರೆ. ಈ ವೇಳೆ ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನ ತಂಡದ ಸದಸ್ಯರು ಮತ್ತು ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

ಈಗ  ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮಲೆನಾಡು ಗಿಡ್ಡ ತಳಿಯ ಗೋವನ್ನು ಮನೆಗೆ ಬರಮಾಡಿಕೊಂಡಿದ್ದಾರೆ.

Tags: Shalini Rajneesh welcomed the Malenadu Gidda breed home
ShareTweetSendShare
Join us on:

Related Posts

ಮಾ.11ರಂದು ಫ್ರೀಡಂ ಪಾರ್ಕ್‌ನಲ್ಲಿ ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

ಮಾ.11ರಂದು ಫ್ರೀಡಂ ಪಾರ್ಕ್‌ನಲ್ಲಿ ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

by Shwetha
March 10, 2026
0

ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 11ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಬೆಂಗಳೂರಿನ...

ಬೆಂಗಳೂರು, ಮುಂಬೈ ನಮಗೆ ಸಾಟಿಯಲ್ಲ, ನಮ್ಮ ಗುರಿ ಸಿಂಗಪುರ: ಸಿಲಿಕಾನ್ ಸಿಟಿಗೆ ಟಾಂಗ್ ಕೊಟ್ಟ ತೆಲಂಗಾಣ ಸಿಎಂ ರೇವಂತ್ ರೆಡ್ಡಿ

ಬೆಂಗಳೂರು, ಮುಂಬೈ ನಮಗೆ ಸಾಟಿಯಲ್ಲ, ನಮ್ಮ ಗುರಿ ಸಿಂಗಪುರ: ಸಿಲಿಕಾನ್ ಸಿಟಿಗೆ ಟಾಂಗ್ ಕೊಟ್ಟ ತೆಲಂಗಾಣ ಸಿಎಂ ರೇವಂತ್ ರೆಡ್ಡಿ

by Shwetha
March 10, 2026
0

ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಪತ್ರಕರ್ತೆಯರ ಸಮಾರಂಭದಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು, ದೇಶದ ಪ್ರಮುಖ ಮಹಾನಗರಗಳಾದ ಬೆಂಗಳೂರು, ಮುಂಬೈ, ಚೆನ್ನೈ ಹಾಗೂ ಕೋಲ್ಕತ್ತಾ...

ರಾಷ್ಟ್ರಪತಿ ನಿಂತಿದ್ದಾರೆ, ನೀವು ಕುಳಿತಿದ್ದೀರಿ: ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ಫೋಟೋ ಸಮರ ಶುರು

ರಾಷ್ಟ್ರಪತಿ ನಿಂತಿದ್ದಾರೆ, ನೀವು ಕುಳಿತಿದ್ದೀರಿ: ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ಫೋಟೋ ಸಮರ ಶುರು

by Shwetha
March 10, 2026
0

ಪಶ್ಚಿಮ ಬಂಗಾಳದ ರಾಜಕೀಯ ಕಣದಲ್ಲಿ ಈಗ ರಾಷ್ಟ್ರಪತಿಗಳ ಗೌರವದ ವಿಚಾರವಾಗಿ ದೊಡ್ಡ ಹಗ್ಗಜಗ್ಗಾಟ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳ ಸರ್ಕಾರದ ವಿರುದ್ಧ ಮಾಡಿದ ಟೀಕೆಗಳಿಗೆ...

ಪ್ರಾದೇಶಿಕ ಪಕ್ಷ ಸ್ಥಾಪನೆ ಸುಳಿವು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಣೆ

ಪ್ರಾದೇಶಿಕ ಪಕ್ಷ ಸ್ಥಾಪನೆ ಸುಳಿವು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಣೆ

by Shwetha
March 10, 2026
0

ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗುವಂತಹ ಮಹತ್ವದ ಘೋಷಣೆ ಮಾಡಿದ್ದಾರೆ. ಸೂಕ್ತ ಸಮಯದಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷವನ್ನು...

ರಾಜಕಾರಣಿಗಳ ಜೊತೆ ಗುಂಡು ಹೊಡೆಯದವನು ಪತ್ರಕರ್ತನೇ ಅಲ್ಲ: ಸಿಎಂ ಗುಂಡು ಪಾರ್ಟಿ ವಿವಾದಕ್ಕೆ ದಿನೇಶ್ ಅಮಿನ್ ಮಟ್ಟು ನೀಡಿದ್ರು ಸಮರ್ಥನೆ

ರಾಜಕಾರಣಿಗಳ ಜೊತೆ ಗುಂಡು ಹೊಡೆಯದವನು ಪತ್ರಕರ್ತನೇ ಅಲ್ಲ: ಸಿಎಂ ಗುಂಡು ಪಾರ್ಟಿ ವಿವಾದಕ್ಕೆ ದಿನೇಶ್ ಅಮಿನ್ ಮಟ್ಟು ನೀಡಿದ್ರು ಸಮರ್ಥನೆ

by Shwetha
March 10, 2026
0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಪತ್ರಕರ್ತರಿಗಾಗಿ ಆಯೋಜಿಸಿದ್ದರು ಎನ್ನಲಾದ 'ಬಜೆಟ್ ಪೂರ್ವ ಗುಂಡು ಪಾರ್ಟಿ' ರಾಜ್ಯ ರಾಜಕಾರಣ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram