ಮಂಡ್ಯ: ಮಂಡ್ಯದ ಮೆಕ್ಯಾನಿಕ್ ಬರೋಬ್ಬರಿ 25 ಕೋಟಿ ರೂ. ಲಾಟರಿ ಬಹುಮಾನ ಗೆದ್ದಿದ್ದಾರೆ.
ಜಿಲ್ಲೆಯ ಪಾಂಡವಪುರ ಪಟ್ಟಣ ನಿವಾಸಿ ಅಲ್ತಾಫ್ ಪಾಷಾ, ಕೇರಳ ರಾಜ್ಯದ ಲಾಟರಿಯಲ್ಲಿ 25 ಕೋಟಿ ರೂ. ಗೆದ್ದಿದ್ದಾರೆ. ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿರುವ ಅಲ್ತಾಫ್, ಇತ್ತೀಚಿಗಷ್ಟೆ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರು 500 ರೂ. ಲಾಟರಿ ಖರೀದಿಸಿದ್ದರು. ಆದರೆ, ಈಗ ಅವರ ಲಾಟರಿ ನಂಬರ್ 25 ಕೋಟಿ ರೂ. ಬಹುಮಾನ ಗೆದ್ದು ಕೊಟ್ಟಿದೆ.
ಬಹುಮಾನ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಲಾಟರಿ ಹಣ ಪಡೆಯುವ ಪ್ರಕ್ರಿಯೆಗಾಗಿ ಅಲ್ತಾಫ್ ಕೇರಳಕ್ಕೆ ಪ್ರಯಾಣ ಬೆಳಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಲಾಟರಿ ಒಲಿದು ಬರುತ್ತದೆ ಅಂತಾ ಅಂದುಕೊಂಡಿರಲಿಲ್ಲ. 15 ವರ್ಷಗಳಿಂದ ಲಾಟರಿ ತೆಗೆದುಕೊಳ್ಳುತ್ತಿದ್ದೇನೆ. ಕರ್ನಾಟಕದಲ್ಲಿ ಲಾಟರಿ ಇದ್ದಾಗಲೂ ಲಾಟರಿಯಿಂದ ಲಾಸ್ ಆಗಿದ್ದೆ. ಆಗಾಗ ಕೇರಳಕ್ಕೆ ಹೋಗುತ್ತಿದ್ದೆ. ಈ ವೇಳೆ ಲಾಟರಿ ಟಿಕೆಟ್ ಪಡೆದಿದ್ದೆ. ಆದರೆ, ಈಗ ನನಗೆ ಲಾಟರಿ ಒಲೆದಿದೆ. ಈ ಹಣದಿಂದ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತೇನೆ ಎಂದಿದ್ದಾರೆ.
ಅಲ್ಲದೇ, ಒಂದು ಮನೆ ಖರೀದಿಸಿ, ಮೆಕ್ಯಾನಿಕ್ ಕೆಲಸ ಬಿಟ್ಟು ಬೇರೆ ಬಿಜಿನೆಸ್ ಮಾಟುತ್ತೇನೆ ಎಂದಿದ್ದಾರೆ.