ಗೆಜ್ಜೆಗಿರಿ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಒಂದು ಐತಿಹಾಸಿಕ ಸ್ಥಳವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಸುಮಾರು 22ಕಿ.ಮೀ ದೂರದಲ್ಲಿದೆ. ತುಳುನಾಡಿನ ಅವಳಿ ವೀರರಾದ ಕೋಟಿಚೆನ್ನಯರ ತಾಯಿ ದೇಯಿಬೈದ್ಯೆತಿಗೆ ಪುನರ್ ಜೀವನ ನೀಡಿದ ಮನೆಯೇ ಗೆಜ್ಜೆ ಗಿರಿ ನಂದನ ಬಿತ್ತಿಲ್ ಕ್ಷೇತ್ರ.

ಹಿಂದಿನ ಕಾಲದ ಸಂಪ್ರದಾಯದಂತೆ ಮದುವೆಗೆ ಮೊದಲೇ ಮೈನೆರೆದ ಜೇವು ಕೇದಗೆ ಎನ್ನುವ ಹೆಣ್ಣು ಮಗಳನ್ನು ಅವಳ ಮನೆಯವರು ಕಣ್ಣಿಗೆ ಬಟ್ಟೆ ಕಟ್ಟಿ ಕಾಡಲ್ಲಿ ಬಿಡಲು ಆಕೆ ಮೂರ್ತೆ ಕೆಲಸಕ್ಕಾಗಿ ಕಾಡಿಗೆ ಹೋದ ಸಾಯನ ಬೈದ್ಯರ ಕಣ್ಣಿಗೆ ಬೀಳುತ್ತಾಳೆ. ಪ್ರತಿಷ್ಠಿತ ಏರಾಜೆ ಬರ್ಕೆ ಮನೆತನದ ಗುರಿಕಾರರಾದ ಸಾಯನ ಬೈದ್ಯರು ಆಕೆಯನ್ನು ತಂಗಿಯಾಗಿ ಸ್ವೀಕರಿಸಿ ದೇಯಿ ಎಂದು ಹೆಸರಿಟ್ಟು, ಸಾಕಿ ಸಲಹಿ ನಾಟಿ ವೈದ್ಯ ವಿದ್ಯೆಯನ್ನು ಕಲಿಸುತ್ತಾರೆ. ಮುಂದೆ ಅವಳನ್ನು ತನ್ನ ಬಾವನಾದ ಕಾಂತಣ್ಣ ಬೈದ್ಯರಿಗೆ ಕೊಟ್ಟು ವಿವಾಹ ಮಾಡಿಸುತ್ತಾರೆ.ಹೀಗೆ ದೇಯಿಬೈದ್ಯೆತಿಗೆ ಆಶ್ರಯ ನೀಡಿ ಸಕಲ ನಾಟಿವಿದ್ಯೆ ಪಾರಂಗತೆಯನ್ನಾಗಿ ಮಾಡಿ ಹೊಸ ಬದುಕು ನೀಡಿದ ಮನೆಯೇ ಗೆಜ್ಜೆ ಗಿರಿ ನಂದನ ಬಿತ್ತಿಲ್ ( ಬಿತ್ತಿಲ್ ಎಂದರೆ ಕನ್ನಡದಲ್ಲಿ ಹಿತ್ತಲು) ಮನೆ.

ದೇಯಿಬೈದ್ಯೆತಿ ಏಳು ತಿಂಗಳ ಬಸುರಿಯಾಗಿದ್ದಾಗ ಬೇಟೆಯಾಡಲು ಕಾಡಿಗೆ ಹೋದ ಪಡುಮಲೆ ಬಲ್ಲಾಳರ ಕಾಲಿಗೆ ವಿಷದ ಮುಳ್ಳುತಾಗಿ ಜೀವನ್ಮರಣ ಸ್ಥಿತಿಯಲ್ಲಿ ನೋವಿನಿಂದ ಒದ್ದಾಡುತ್ತಾರೆ. ಯಾವ ಚಿಕಿತ್ಸೆಯೂ ಫಲಕಾರಿಯಾಗದೆ ಇರಲು ಬಲ್ಲಾಳರು ಬಸುರಿ ದೇಯಿಬೈದ್ಯೆತಿಯನ್ನು ಕರೆತರಲು ದಂಡಿಗೆಯನ್ನು ಕಳುಹಿಸುತ್ತಾರೆ. ದೇಯಿಬೈದ್ಯೆತಿ ಪಡುಮಲೆಯ ಅರಸು ಬಲ್ಲಾಳರಿಗೆ ನಾಟಿ ಚಿಕಿತ್ಸೆ ನೀಡಿ ಜೀವ ಉಳಿಸುತ್ತಾಳೆ. ಬಲ್ಲಾಳ ಅರಸು ಗುಣಮುಖನಾದ ಕಾರಣ ದೇಯಿಬೈದ್ಯೆತಿ ತನ್ನ ಗೆಜ್ಜೆ ಗಿರಿ ನಂದನ ಬಿತ್ತಿಲ್ ಮನೆಗೆ ಹೊರಟು ನಿಲ್ಲುತ್ತಾಳೆ.
ಕೆಲವು ಹೆಜ್ಜೆ ದೂರ ಸಾಗಿದಾಗ ದೇಯಿಬೈದ್ಯೆತಿಗೆ ಹೆರಿಗೆ ನೋವು ಕಾಣಿಸಿಕೊಳ್ಳಲು ಪಡುಮಲೆಯ ಅರಸು ಬೀಡಿಗೆ ಕರೆತಂದು ಅಲ್ಲೇ ಹೆರಿಗೆಗೆ ವ್ಯವಸ್ಥೆ ಮಾಡಿಸುತ್ತಾನೆ. ಪಡುಮಲೆ ಬೀಡಿನಲ್ಲಿ ದೇಯಿಬೈದ್ಯೆತಿ ಅವಳಿ ಮಕ್ಕಳಾದ ಕೋಟಿ ಚೆನ್ನಯರಿಗೆ ಜನ್ಮ ನೀಡುತ್ತಾಳೆ. ಆದರೆ ಹೆರಿಗೆಯಾಗಿ 16ನೇ ದಿನ ದೇಯಿಬೈದ್ಯೆತಿ ಬೀಡಿನ ಸಮೀಪದ ಕೆರೆಯಲ್ಲಿ ಆಕಸ್ಮಿಕ ಮರಣ ಹೊಂದುತ್ತಾಳೆ. ವಿಷಯ ತಿಳಿದ ಅಣ್ಣ ಸಾಯನಬೈದ್ಯರು ದೇಯಿಬೈದ್ಯೆತಿಯ ಕಳೇಬರವನ್ನು ಗೆಜ್ಜೆಗಿರಿಗೆ ತಂದು ಸಮಾಧಿ ಮಾಡಿದ್ದು ಇದಕ್ಕೆ ಸುಮಾರು 450 ವರ್ಷಗಳ ಇತಿಹಾಸವಿದೆ. ಸಾಯನ ಬೈದ್ಯರು ಕೋಟಿಚೆನ್ನಯ್ಯರನ್ನು ಸಾಕಿ ಬೆಳೆಸಿದ ಮನೆಯನ್ನು “ಗೆಜ್ಜೆಗಿರಿ ನಂದನ ಬಿತ್ತಿಲ್” ಎಂದು ಕರೆಯಲಾಗುತ್ತದೆ.

ಮುಂದೆ ಕೋಟಿ-ಚೆನ್ನಯರು ಮಾವನ ಮನೆಯಾದ ಗೆಜ್ಜೆಗಿರಿಯಲ್ಲೇ ಬೆಳೆದು ದೊಡ್ಡವರಾಗುತ್ತಾರೆ. ಗೆಜ್ಜೆಗಿರಿ ನಂದನ ಬಿತ್ತಿಲ್ ಮನೆ ಕೋಟಿ-ಚೆನ್ನಯರು ಆಟವಾಡಿ, ವಿದ್ಯೆಕಲಿತು ಪರಾಕ್ರಮಿಗಳಾಗಿ ಕಾರಣಿಕ ಪುರುಷರಾಗಿ ಹೊರಹೊಮ್ಮುತ್ತಾರೆ.
ಗೆಜ್ಜೆಗಿರಿ ನಂದನ ಬಿತ್ತಿಲ್, ಏರಾಜೆ ಬಾರಿಕೆ ಎಂಬ ಬಿಲ್ಲವ ಮನೆತನದ ನೆಲವಾಗಿದೆ. ಪಡುಮಲೆ ಬಲ್ಲಾಳ ಅರಸರ ವ್ಯಾಪ್ತಿಯಲ್ಲಿದ್ದ ನಾಲ್ಕು ಗುತ್ತು ಮತ್ತು ಎಂಟು ಬಾರಿಕೆಗಳಲ್ಲಿ ಏರಾಜೆ ಬಾರಿಕೆ ಒಂದು. ಅರಸನಿಗೆ ಆಡಳಿತದಲ್ಲಿ ನೆರವಾಗುತ್ತಿದ್ದ ಮನೆತನವಿದು.

ಈಗ ಗೆಜ್ಜೆಗಿರಿ ನಂದನ ಬಿತ್ತಿಲ್ ಮನೆಯಲ್ಲಿ ಸಾಯನ ಬೈದ್ಯರು, ದೇಯಿ ಬೈದ್ಯೆತಿ ಮತ್ತು ಕೋಟಿ ಚೆನ್ನಯರ ಆರಾಧನೆ ನಡೆಯುತ್ತಿದೆ. ಈ ಮೂರು ಕಾರಣೀಕ ಶಕ್ತಿಗಳು ಅವತಾರ ರೂಪದಲ್ಲಿ ಬದುಕಿದ್ದಾಗ ವಾಸಿಸುತ್ತಿದ್ದ ಮನೆ ಈಗ ಸತ್ಯ ಧರ್ಮ ಚಾವಡಿಯಾಗಿ ಪುನರುತ್ಥಾನಗೊಂಡಿದೆ. ಜೊತೆಗೆ ಈ ಶಕ್ತಿಗಳು ಬದುಕಿದ್ದಾಗ ನಂಬಿಕೊಂಡಿದ್ದ ಧರ್ಮ ದೈವ ಧೂಮಾವತಿಯ ಉಪಾಸನೆ, ನಾಗಾರಾಧನೆ, ಸಪರಿವಾರ ದೈವಗಳ ಉಪಾಸನೆಯೂ ಇಲ್ಲಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಇಲ್ಲಿ ಪ್ರತಿವರ್ಷ ನಡೆಯುವ ದೈವದ ಜಾತ್ರೆ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ.
ನೇಮದ ಧಾರ್ಮಿಕ ಪ್ರಕ್ರಿಯೆ: ದೈವವನ್ನು ಪ್ರಾರ್ಥಿಸಲು ಹೋಮ, ವಾದ್ಯಗಳು, ಮತ್ತು ವಿಶೇಷ ಪಡ್ದಾನ ಹಾಡುಗಳು ನಡೆಯುತ್ತವೆ.

ದೈವದ ಪಾತ್ರಧಾರಿಯು ನೃತ್ಯ ಮಾಡುವಾಗ ದೈವವು ಅವನಿಗೆ ಪ್ರತ್ಯಕ್ಷವಾಗುತ್ತದೆ ಎಂಬ ನಂಬಿಕೆ ಇಲ್ಲಿದೆ.
ಭಕ್ತರು ತಮ್ಮ ಸಂಕಷ್ಟಗಳನ್ನು ನಿವಾರಿಸಲು ದೈವದ ಮುಂದೆ ಪ್ರಾರ್ಥನೆ ಸಲ್ಲಿಸುತ್ತಾರೆ.
ದೇಯಿ ಬೈದ್ಯೆತಿ ಪ್ರಸಿದ್ಧ ನಾಟಿ ವೈದ್ಯೆಯಾಗಿದ್ದು, ಜನರಿಗೆ ನಾಟಿ ಔಷಧಿ ಸೇವೆಯನ್ನು ನೀಡುತ್ತಿದ್ದಳು. ಅದರ ನೆನಪಿಗಾಗಿ ದೇಯಿ ಬೈದೆತಿ ಔಷಧ ವನವೂ ಇಲ್ಲಿ ನಿರ್ಮಾಣಗೊಂಡಿದೆ.
ಸಾಯನ ಬೈದ್ಯರು ದೇಯಿಯ ಮೃತ ದೇಹವನ್ನು ಗೆಜ್ಜೆಗಿರಿಗೆ ತಂದು ಸಮಾಧಿ ಮಾಡಿದ ಸ್ಥಳವನ್ನು ಇಂದು “ಮಹಾ ಮಾತೆ ದೇಯಿ ಬೈದ್ಯೆತಿ ಸಮಾಧಿ” ಎಂದು ಕರೆಯಲಾಗುತ್ತದೆ.

ಈ ಸ್ಥಳದಲ್ಲಿ ಕೋಟಿಚೆನ್ನಯ್ಯರ ಬಾಲ್ಯದ ನೆನಪುಗಳಿದ್ದು, ಅವರ ಜೀವನ ಮತ್ತು ಪರಾಕ್ರಮವನ್ನು ಸ್ಮರಿಸಲು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಗೆಜ್ಜೆಗಿರಿ ನಂದನ ಬಿತ್ತಿಲ್, ಕೋಟಿಚೆನ್ನಯ್ಯನವರ ಇತಿಹಾಸವನ್ನು ಅಧ್ಯಯನ ಮಾಡಲು ಮಹತ್ವದ ಸ್ಥಳವಾಗಿದೆ.

ಈ ರೀತಿಯಾಗಿ, ಗೆಜ್ಜೆಗಿರಿ ಸ್ಥಳವು ತುಳುನಾಡಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.








