ಅಡ್ಡಗೋಡೆ ಮೇಲೆ ದೀಪವಿಟ್ಟ ಕ್ರೀಸ್ ಗೇಲ್..!
ಆರ್ಸಿಬಿ ಮತ್ತು ಪಿಬಿಕೆಎಸ್ ನಡುವಿನ ಫೈನಲ್ ಪಂದ್ಯವನ್ನು ನೋಡಲು ವೆಸ್ಟ್ ಇಂಡೀಸ್ನ ದೈತ್ಯ ಕ್ರೀಸ್ ಗೇಲ್ ಕೂಡ ಆಗಮಿಸಿದ್ದಾರೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರತ್ಯಕ್ಷರಾದ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ತನ್ನ ವಿಚಿತ್ರ ಗೆಟ್ ಅಪ್ನಲ್ಲಿ ಗಮನ ಸೆಳೆದಿದ್ದಾರೆ.
ಬಹುಶಃ ಕ್ರಿಸ್ಗೇಲ್ ಅವರ ಗೆಟ್ ಅಪ್ ನೋಡಿರುವ ಆರ್ಸಿಬಿ ಅಭಿಮಾನಿಗಳಿಗೆ ನಿರಾಸೆಯಾಗೋದು ಗ್ಯಾರಂಟಿ. ಯಾಕಂದ್ರೆ ಕ್ರಿಸ್ ಗೇಲ್ ಡಬಲ್ ಮೈಂಡ್ ಸೆಟ್ನೊಂದಿಗೆ ೨೦೨೫ರ ಫೈನಲ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದಾರೆ.
ಆರ್ಸಿಬಿ ಜೆರ್ಸಿ ಹಾಗೂ ತಲೆಗೆ ಂಜಾಬ್ ಪೇಟವನ್ನು ಹಾಕೊಂಡಿರುವ ಕ್ರಿಸ್ ಗೇಲ್ ಯಾರು ಗೆದ್ರೂ ಓಕೆ ಅನ್ನೋ ಮನೋಸ್ಥಿತಿಯಲ್ಲಿದ್ದಾರೆ.
ಇದಕ್ಕೆ ಕಾರಣವೂ ಇದೆ. ಕ್ರಿಸ್ ಗೇಲ್ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಐಪಿಎಲ್ನಲ್ಲಿ ಆಡಿದ್ದಾರೆ. ಹಾಗೇ ನೋಡಿದ್ರೆ ಕ್ರಿಸ್ ಗೇಲ್ಗೆ ಆರ್ಸಿಬಿ ಕ್ರಿಸ್ಗೇಲ್ಗೆ ಮರುಜನ್ಮವನ್ನು ನೀಡಿದೆ. ಐಪಿಎಲ್ ಹರಾಜಿನಲ್ಲಿ ಅನ್ ಸೋಲ್ಡ್ ಆಟಗಾರನಾಗಿದ್ದ ಗೇಲ್ ಅವರನ್ನು ದೊಡ್ಡ ಮನಸು ಮಾಡಿ ಖರೀದಿ ಮಾಡಿದ್ದು ರಾಯಲ್ ಚಾಲೆಂಜಸ್Àð ಬೆಂಗಳೂರು. ಹಾಗಂತ ಕ್ರಿಸ್ ಗೇಲ್ ಆರ್ಸಿಬಿಯ ನಿರೀಕ್ಷೆಗಳನ್ನು ಹುಸಿಗೊಳಿಸಲಿಲ್ಲ. ತನ್ನ ಸ್ಪೋಟಕ ಆಟದಿಂದಲೇ ಗಮನ ಸೆಳೆದ ಗೇಲ್ ಯುನಿವರ್ಸಲ್ ಬಾಸ್ ಅಂತ ಬಿರುದು ಪಡೆದುಕೊಳ್ಳಲು ಕಾರಣ ಇದೇ ಆರ್ಸಿಬಿ ಎಂಬುದನ್ನು ಮರೆಯುವ ಹಾಗಿಲ್ಲ. ಆದ್ರೆ ಕ್ರಿಸ್ ಗೇಲ್ ಎಷ್ಟೇ ಹೊಡಿಬಡಿ ಆಟವನ್ನಾಡಿದ್ರೂ ಚಾಂಪಿಯನ್ ಪಟ್ಟಕ್ಕೇರಿಸಲು ಸಾಧ್ಯವಾಗಲಿಲ್ಲ. ಆದ್ರೆ ಐಪಿಎಲ್ನಲ್ಲಿ ವೇಗದ ಶತಕ ಸೇರಿದಂತೆ ಹಲವು ದಾಖಲೆಗಳು ಕ್ರಿಸ್ ಗೇಲ್ ಹೆಸರಿನಲ್ಲಿ ತಾನಾಗಿಯೇ ಅಂಟಿಕೊAಡಿವೆ. ೨೦೧೧ರಿಂದ ೨೦೧೭ರವರೆಗೆ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿರುವ ಗೇಲ್, ೮೫ ಪಂದ್ಯಗಳಲ್ಲಿ ೩೧೬೩ ರನ್ ದಾಖಲಿಸಿದ್ದಾರೆ. ೧೫೩ರ ಸ್ಟೆçöÊಕ್ ರೇಟ್ನಲ್ಲಿ ೧೯ ಅರ್ಧಶತಕ ಹಾಗೂ ವಿಶ್ವ ದಾಖಲೆಯ ಒಂದು ಶತಕ ಕೂಡ ಗೇಲ್ ಹೆಸರಿನಲ್ಲಿದೆ.
ಆದ್ರೆ ೨೦೧೮ರ ವೇಳೆಗೆ ಕ್ರಿಸ್ ಗೇಲ್ ಅವರ ಕೊಡುಗೆ ಆರ್ಸಿಬಿಗೆ ಸಾಕು ಎಂದು ಅನ್ನಿಸಿದೆ. ಹೀಗಾಗಿ ಅನಿವಾರ್ಯವಾಗಿ ಗೇಲ್ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದರು. ಕೊಟ್ಟ ದುಡ್ಡಿಗೆ ಮೋಸವಿಲ್ಲ ಎಂಬAತೆ ಪಂಜಾಬ್ ತಂಡದ ಪರವಾಗಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಪಂಜಾಬ್ ತಂಡದ ಪರವಾಗಿ ೨೦೧೮ರಿಂದ ೨೦೨೧ರವರೆಗೆ ೪೧ ಪಂದ್ಯಗಳನ್ನು ಆಡಿದ್ದಾರೆ. ೧೪೩ ಸ್ಟೆçöÊಕ್ ರೇಟ್ನೊಂದಿಗೆ ೧೩೩೯ ರನ್ ದಾಖಲಿಸಿದ್ದಾರೆ. ಇದರಲ್ಲಿ ೧೦ ಅರ್ಧಶತಕ ಹಾಗೂ ಒಂದು ಶತಕವೂ ದಾಖಲಾಗಿದೆ.
ಹೀಗಾಗಿ ಕ್ರಿಸ್ ಗೇಲ್ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ಕ್ರಿಕೆಟ್ನ ಬದುಕಿನ ಉತ್ತುಂಗದಲ್ಲಿದ್ರೂ ಯಾರಿಗೂ ಬೇಡವಾಗಿದ್ದಾಗ ಗೇಲ್ಗೆ ಆಶ್ರಯಕೊಟ್ಟಿದ್ದು ಆರ್ಸಿಬಿ. ಹಾಗೇ ಕ್ರಿಕೆಟ್ ಬದುಕಿನ ಇಳಿ ವಯಸ್ಸಿನಲ್ಲಿ ಅವಕಾಶ ಕೊಟ್ಟಿದ್ದು ಪಂಜಾಬ್ ಕಿಂಗ್ಸ್. ಹೀಗಾಗಿ ಯಾರಿಗೆ ಬೆಂಬಲ ನೀಡಬೇಕು ಎಂಬ ಕನ್ಫ್ಯೂಷನ್ ಗೇಲ್ಗಿದೆ. ಅದಕ್ಕಾಗಿಯೇ ಎರಡು ತಂಡವನ್ನು ಬೆಂಬಲಿಸಿದ್ದಾರೆ. ಯಾರು ಗೆದ್ರೂ ತನಗೆ ಅವಕಾಶ ಕೊಟ್ಟ ತಂಡಗಳ ಪೈಕಿ ಒಂದು ತಂಡ ಗೆದ್ದೇ ಗೆಲ್ಲುತ್ತೆ ಎಂಬ ಸಮಾಧಾನ ಗೇಲ್ ಮನಸ್ಸಿಗೆ ಸಿಗುತ್ತದೆ. ಹಾಗಾಗಿಯೇ ಗೇಲ್ ಇಬ್ಬಗೆಯ ನೀತಿಯೊಂದಿಗೆ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಏನೇ ಆದ್ರೂ ಗೇಲ್ ಅವರ ಬದ್ಧತೆಯನ್ನು ಮೆಚ್ಚಿಕೊಳ್ಳಲೇಬೇಕು.








