ವಿಜಯನಗರ ಜಿಲ್ಲೆಯ ಉಚ್ಚಂಗಿದುರ್ಗದಲ್ಲಿರುವ ಶ್ರೀ ಉತ್ಸವಾಂಬ ದೇವಸ್ಥಾನವು ಬಹಳ ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಾಲಯದ ಇತಿಹಾಸವು ಹಲವು ಶತಮಾನಗಳಷ್ಟು ಹಳೆಯದು.
ಶ್ರೀ ಉತ್ಸವಾಂಬ ದೇವಾಲಯವು 9ನೇ ಶತಮಾನಕ್ಕೆ ಸೇರಿದ್ದಾಗಿದೆ ಸುಮಾರು 1200 ವರ್ಷಗಳಷ್ಟು ಪುರಾತನ ದೇವಾಲಯವಾಗಿದೆ,ಪಾಳೆಗಾರನಾಗಿದ್ದ ಮುಮ್ಮುಡಿ ಬಸಪ್ಪನಾಯಕನ ಮನೆ ದೇವರು ಆಗಿರುವುದರಿಂದ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂಬ ಇಲ್ಲಿನ ಇತಿಹಾಸ ಎನ್ನಲಾಗಿದೆ ಎಂದು ತಿಳಿದು ಬಂದಿದೆ.
ಉಚ್ಚಂಗಿದುರ್ಗವು ಇತಿಹಾಸ ಸ್ಥಳವಾಗಿದ್ದು ಕೃತಾಯುಗದಲ್ಲಿ ಮೇ಼ಘನಾಥ ಅಧಿಪತಿಯಾಗಿದ್ದುದರಿಂದ ಮೇಘನಾಥ ಪರ್ವತವೆಂತಲೂ ತ್ರೇತಾಯುಗದಲ್ಲಿ ಇರಣ್ಯಕಶ್ಯಪನ್ನು ಶ್ರೀಮನ್ ನಾರಾಯಣನು ವಧೆಗೈದ ಸಮಯದಲ್ಲಿ ಸುವರ್ಣ ದೃಷ್ಠಿಯಾದ ಪ್ರಯುಕ್ತ ಕನಕಗಿರಿ ಎಂಬ ಹೆಸರು ಬಂದಿದೆಯಂತಲೂ ದ್ವಾಪರಯುಗದಲ್ಲಿ ಉತ್ತಂಗ ಋಷಿ ಈ ದುರ್ಗದಲ್ಲಿ ತಪಸ್ಸು ಗೈದಿದ್ದರಿಂದ ಉತ್ತಂಗ ಅಥವಾ ಉಚ್ಛಶೃಂಗಿ ಪರ್ವತವೆಂತಲೂ ಕಲಿಯುಗದಲ್ಲಿ ಉಚ್ಚಂಗಿ ಪರ್ವತ ಎಂಬ ಹೆಸರು ಬಂದಿರುತ್ತದೆ.ಉತ್ಸವಾಂಬ ದೇವಾಲಯದ ಮೂರ್ತಿ ಉದ್ಭವ ಮೂರ್ತಿಯಾಗಿರುತ್ತದೆ.ಶ್ರೀಉತ್ಸವಾಂಬ ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಅವರ ಇಷ್ಟರ್ಥ ಫಲಗಳು ಲಭಿಸುತ್ತವೆ ಕುಷ್ಠ ರೋಗ,ಚರ್ಮವ್ಯಾದಿಗಳು ದೇವಿಯ ಅನುಗ್ರಹದಿಂದ ನಿವಾರಣೆಯಾಗುತ್ತದೆ.ದೇವಾಲಯದಲ್ಲಿ ಶ್ರೀದೇವಿಯ ಅನುಗ್ರಹದಿಂದ (ದೇವಿಯ ಪ್ರಸಾದ)ದಿಂದ ಸಂತಾನ ಭಾಗ್ಯ,ಉದ್ಯೋಗ ಇಷ್ಟರ್ಥಸಿದ್ದಿ ಫಲಿಸುತ್ತದೆ.ಶ್ರೀಉತ್ಸವಾಂಬ ದೇವಾಲಯದಲ್ಲಿ ಕ್ಷೀರಾಭೀಷೇಕ,ಪಂಚಾಮೃತ ಎಲೆಪೂಜೆ,ಕುಂಕುಮ ಅರ್ಚನೆ ಅಷ್ಟೋತ್ತರ ಸೇವೆಗಳು ಇರುತ್ತವೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಶ್ರಿಉತ್ಸವಾಂಬ ದೇವಾಲಯವು ಗುಡ್ಡದ ಮೆಲೆ ಕೋಟೆಯ ಒಳಗೆ ಎತ್ತರ ಪ್ರದೇಶದಲ್ಲಿ ಇರುತ್ತದೆ. ದೇವಸ್ಥಾನದ ಸುತ್ತಲೂ ಬಂಡೆಕಲ್ಲುಗಳಿಂದ ಕೂಡಿರುತ್ತದೆ.ಮೊಟ್ಟಮೊದಲ ಬಾರಿಗೆ ಕ್ರಿ.ಶ.1336 ರಿಂದ 1565ರವರೆಗೆ ವಿಜಯನಗರ ಅರಸರು ಆಳ್ವಿಕೆ ಮಾಡಿದರು ಇದಾದ ನಂತರ ಪಾಳೆಗಾರರು ಆಳ್ವಿಕೆ ಮಾಡಿದರು ಅದರಲ್ಲಿ ಪ್ರಮುಖವಾಗಿ ರಂಗಣ್ಣನಾಯಕ, ಭರಮಣ್ಣನಾಯಕ, ಬಸಪ್ಪನಾಯಕ, ಹರಿಮಜ್ಜಿ ಮುಮ್ಮುಡಿ ಬಸಪ್ಪನಾಯಕ,ಸೋಮಶೇಖರ ನಾಯಕ ಆಳ್ವಿಕೆ ಮಾಡಿದರು. ಉಚ್ಚಂಗಿದುರ್ಗದಲ್ಲಿ ಕಲ್ಯಾಣಿ ಚಾಲುಕ್ಯರು ಮತ್ತು ಅವರ ಮಾಂಡಳಿಕ ಪಾಂಡ್ಯರು ಹೊಯ್ಸಳರು, ವಿಜಯನಗರ ಅರಸರು,ಪಾಳೇಗಾರ ಕಾಲ ಅರಸರು 19 ಶಾಸಗಳು ದೊರೆತಿದ್ದು ದಾನ-ದತ್ತಿಗಳ ಕುರಿತು ಶಾಸನಗಳು ಅಧಿಕವಾಗಿದ್ದು ದೊರೆಯುತ್ತಿವೆ.
ಈ ದೇವಿಯ ದರ್ಶನದಿಂದ ಹಲವಾರು ರೀತಿಯ ಫಲಗಳು ದೊರೆಯುತ್ತೀವೆ.
ಉದಾ:ಮಕ್ಕಳ ಫಲದ ಭಾಗ್ಯ,ಮಕ್ಕಳು ಆಗದೇ ಇರುವ ಗೃಹಿಣಿಯರು ಬಂದರೇ ಅವರಿಗೆ ಕಾಯಿಯನ್ನು ಉಡಿತುಂಬಿಸಿ ಸಂಪ್ರದಾಯ ಅನಾದಿ ಕಾಲದಿಂದಲೂ ಬಂದಿದೆ ಹಾಗೆಯೇ ಇಲ್ಲಿ ಬಂದು ದೇವಿಗೆ ಹರಕೆ ಬೇಡಿಕೊಂಡರೇ ಮಕ್ಕಳ ಫಲ ಸಿಗತ್ತದೆ ಎಂಬ ನಂಬಿಕೆ,ಅದರೆ ಜೊತೆಗೆ ಅವರ ಕಾರ್ಯಗಳಲ್ಲಿ ಯಶಶ್ವಿಯಾದರೇ ಅವರು ಶ್ರೀದೇವಿಯ ಸನ್ನಿಧಿಗೆ ಬಂದು ಹರಕೆ ರೂಪದಲ್ಲಿ ತೀರಿಸುತ್ತಾರೆ.ಉದಾ:ಅಭೀಷೆಕ ಹರಕೆ ಮಾಡಿಸುವುದು ಮತ್ತು ಉದ್ಯೋಗ ಲಭಿಸುವುದು ಅರಿಶಿನ ಮತ್ತು ಕುಂಕುಮ ಹಚ್ಚುವುದರಿಂದ ಅವರ ಕಷ್ಟ ಕಾರ್ಪಣ್ಯಗಳು ಬಗೆಹರಿಯುತ್ತವೆ ಎಂಬ ವಾಡಿಕೆ ಹಾಗೂ ಇತ್ತಿಚಿನ ದಿನಗಳಲ್ಲಿ ಪ್ರತಿಯೊಂದು ಮೆಟ್ಟಿಲಿಗೂ ಕುಂಕುಮ ಭಂಢಾರ ಹಚ್ಚುವುದರಿಂದ ಅವರ ಕಷ್ಟ ಮತ್ತು ಇಷ್ಟರ್ಥಗಳು ನೆರೆವೇರುತ್ತವೆ ಎಂಬ ನಂಬಿಕೆ ಮತ್ತು ಉಪ್ಪು ಹಾಕುವುದರಿಂದ ದೇಹದಲ್ಲಿ ಆಗುವ ಚರ್ಮ ರೋಗಗಗಳು ಮುಕ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಮೂಡಿದೆ.ತೀರ್ಥಕಾಯಿ ಕಟ್ಟುವುದರಿಂದ ಮನೆಯಲ್ಲಿ ಶಾಂತಿ ವಾತಾವರಣ ಸೃಷ್ಠಿಯಾಗುತ್ತದೆ ಎಂದು ನಂಬಿಕೆ ಹಾಗೂ ತಾಯಿತ ಕಟ್ಟುವುದರಿಂದ ಬಾಲಗ್ರಹ,ಪೀಡೆ ಮಕ್ಕಳಿಂದ ದೂರ ಆಗುತ್ತದೆ ಎಂಬ ನಂಬಿಕೆ ದೃಷ್ಠಿದಾರ ಎಂದರೆ ಯಾವ ವ್ಯಕ್ತಿಯ ಅವರ ಮೇಲೆ ಕೆಟ್ಟದೃಷ್ಠಿ ಪರಿಣಾಮ ಬಿರಬಾರದು ಎಂದು ನಂಬಿಕೆಯಿದೆ ಈ ಸಂಪ್ರಾದಾಯ ಮುಂದುವರಿದಿರುತ್ತದೆ.
ದೇವಸ್ಥಾನ ಕಾರ್ಯನಿರ್ವಹಿಸುವ ಸಮಯ:
ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ 6-00 ಗಂಟೆಯಿಂದ ಸಾಯಂಕಾಲ 7-00 ಗಂಟೆಯವರಿಗೆ ಇತರೆ ದಿನಗಳಲ್ಲಿ ಸಾಯಂಕಾಲ 6-00 ಗಂಟೆಯವರಿಗೆ. ಹುಣ್ಣಿಮೆ ದಿನಗಳಲ್ಲಿ ಬೆಳಿಗ್ಗೆ 6-00 ಗಂಟೆಯಿಂದ ಸಾಯಂಕಾಲ 8-00 ಗಂಟೆಯವರಿಗೆ ವಿಶೇಷ ದಿನಗಳಲ್ಲಿ ಬೆಳಿಗ್ಗೆ 6-00 ಗಂಟೆಯಿಂದ ರಾತ್ರಿಯವರಿಗೆ.







